Showing posts with label ಭಾವ ವೈರಾಗ್ಯದಿಂದ ಭಜಿಸು ದೇವಿ ಲಕುಮೀರಮಣನ vijayaramachandra vittala. Show all posts
Showing posts with label ಭಾವ ವೈರಾಗ್ಯದಿಂದ ಭಜಿಸು ದೇವಿ ಲಕುಮೀರಮಣನ vijayaramachandra vittala. Show all posts

Friday 6 August 2021

ಭಾವ ವೈರಾಗ್ಯದಿಂದ ಭಜಿಸು ದೇವಿ ಲಕುಮೀರಮಣನ ankita vijayaramachandra vittala

 ..

Kruti by ವಿಜಯರಾಮಚಂದ್ರ ವಿಠಲ ದಾಸರು mysore kattemane 


ಭಾವ ವೈರಾಗ್ಯದಿಂದ ಭಜಿಸು ದೇವಿ ಲಕುಮೀರಮಣನ ಪ


ಕಾವ ಕೊಲ್ಲುವ ತಾನೆ ಒಬ್ಬನೆ ಕೊನೆಗೆ ನಿಲ್ಲುವೆನೆಂದು ಅ.ಪ


ಸತಿಸುತ ವಿಯೋಗದಿಂದ ಖತಿಗೊಂಡು ಭ್ರಂಶನಾಗಿ

ಮತಿಗೇನು ತೋರದೆ ಮಿತ ವ್ಯಾಪಾರದೊಳಿರಲು 1


ಪುರಾಣ ಕೇಳಿದಾಗ ನರಕ ಭಯವು ಮನಕೆ ತೋರಿ

ದುರಿತ ದೂರ ಕಾಯೊ ಎಂದು ದೂರ

ಬರಲು ಮರದು ಪೋಗಲು 2

ಸಿರಿಯು ಬೇಕೆಂದು ನರರ ಪೂಜೆ ಮಾಡಿ ಧನವ ಕೂಡಿಸಿ

ಪರಮ ಗೋಪ್ಯದಿಂದ ಇಡೆ ಸರ್ವ ಸ್ವತ್ತು

ಪೋಗಲಾಗ ಹರಿಯ ನೆನೆಯೊ 3

ತಾರೊಡಲ ಆರಿಸಲು ಪರರ ಮನೆಗೆ ಪೋಗಿ

ತಿರುಗಿ ಬೇಡಲು

ನೀರಿನ ಲಾಭವಿಲ್ಲದೆ ನರಹರಿಗೆ ಮೊರೆಯಿಡಲು 4


ಅನುಕೂಲವೆಲ್ಲ ಇರಲು ಅನಿಮಿತ್ತದಿಂದ ಭಜಿಸು

ಅನಿಮಿಷರೊಡೆಯ ವಿಜಯ ರಾಮಚಂದ್ರವಿಠಲನ್ನ 5

***