Showing posts with label ಗಜಮುಖ ಗಣಪನ ಭೀಮನ ಅಮವಾಸ್ಯೆ ದಿವಶಿ ಗೌರಿ ಹಾಡು GAJAMUKHA GANAPANA DIVASHI GOWRI HAADU BHEEMANA AMAVASYA. Show all posts
Showing posts with label ಗಜಮುಖ ಗಣಪನ ಭೀಮನ ಅಮವಾಸ್ಯೆ ದಿವಶಿ ಗೌರಿ ಹಾಡು GAJAMUKHA GANAPANA DIVASHI GOWRI HAADU BHEEMANA AMAVASYA. Show all posts

Saturday 28 December 2019

ಗಜಮುಖ ಗಣಪನ ಭೀಮನ ಅಮವಾಸ್ಯೆ ದಿವಶಿ ಗೌರಿ ಹಾಡು GAJAMUKHA GANAPANA DIVASHI GOWRI HAADU BHEEMANA AMAVASYA





ದಿವಶಿ ಗೌರಿ ಹಾಡು ಭೀಮನ ಅಮವಾಸ್ಯೆ ದಿನ


ಭೀಮನ ಅಮಾವಾಸ್ಯೆ ಹಾಡು 
ಗಜಮುಖ ಗಣಪನ ಭಜನೆಯ ಮಾಡುತ ಅಜನಸತಿಗೆನಮಿಸಿ ನಿಜಭಕ್ತಿಯಿಂದಲಿ ಪೇಳುವೆನಿಮಗೆ ದಿವುಸಿಗೌರಿಕಥೆಯ||ಪಲ್ಲ||

 ಆಷಾಢಮಾಸದ ಅಮಾವಾಸ್ಯೆದಿನದಿ ಸೋಸಿಲಿಮಾಡಲೆಂದು  ಹುಟ್ಟಿದಾಗಿನಿಂದ ಹೆಣ್ಣುಮಗುವು ಮದುವೆಆಗುವ ವರೆಗು||೧||

 ಭೀಮನ ಅಮಾವಾಸ್ಯೆ  ಎಂದು ಕೆಲವರು ಭಕ್ತಿಂದಪೂಜಿಪರು
 ದೀಪಸ್ಥಂಭಗೌರಿಯೆಂದು ನಿಷ್ಟೆಯಲಿ ಪೂಜಿಪರು||೨||

 ಕತ್ಲರಾಯನೆಂಬ ರಾಜನ ಪತ್ನಿಗೆ ಪುತ್ರಸಂತಾನವಾಗಲು
ಅರ್ಥಿಯಿಂದ ಲಿ ಮೂ ಬಟ್ಟಲೀರಲು ಮಾಡಿ ವಸ್ತ್ರದಾನವ
ಮಾಡಿ||೩||

 ದಿನದಿನ ಬೆಳೆದನು ಕಾಳಿಂನೆಂಬ ಹೆಸರಿಂದಹರುಷವಗೈದರೆಲ್ಲ
 ಘನವಾಗಿತಿರುಗಿದ ಗಿರಿಕಾನನಗಳ ಬೇಟೆಯಾಡುವ ನೆವದಿ||೪||

ಒಂದು ದಿನ ಅಡವಿಗೆ ಹೋದ ಸಮಯದಿ  ವ್ಯಾಘ್ರದ ಧ್ವನಿ
ಕೇಳಲು ಹಿಂದಲೆ ಭಯಗೊಂಡು ಕಾನನದಿ ಮೂರ್ಛೆಯಗೊಂಡನಾಗ
||೫||

ಅರಸಗೆ ತಿಳಿಸೆ ಮೃತನಾದ ಮಗನಿಗೆ ಕನ್ಯ ಕೊಡೆರೆಂದು ಪ್ರಕ
ಟಿಸಿದ
ಸತತ ದ್ರವ್ಯ ಬೆಳ್ಳಿ  ಬಂಗಾರ ಸಹಿತ ಕೊಡುವುದಾಗಿ ತಿಳಿಸಿದ
||೬||

ಬಡ ಬ್ರಾಹ್ಮಣ ನೊಬ್ಬ ತೀರ್ಥಯಾತ್ರೆಗೆ ಹೊರಡೆ ಮಗನ ಬಳಿ
ತಂಗಿ ಇರಲು
ಧನದಾಸೆಗೆ ಅಣ್ಣನು ತಾನು ಕನ್ಯದಾನವ ಮಾಡಿದ||೭||

ಹೋಗುತ ರಾಜನು ಸೊಸೆಯನ್ನ ನೋಡಿ ಬಾ ಎಂದುಕರೆದ
ನಾಗ
ಪತಿಯ ಬಿಟ್ಟು ನಾನು ಹೋದರೆ ಸದ್ಗತಿ ಯು ಇಲ್ಲವೆನಲು||೮||

ಭೋರೆಂಬೊ ಮಳೆಯು ಸುರಿಯತ್ತಲಿರಲು ಕಾನನದಿ ಒಬ್ಬ
ಳಿರಲು
ಕನ್ನಿಕೆಯರು ಬಂದು ಅಲ್ಲಿ ದಿವುಸಿಗೌರಿ ಪೂಜೆಯಮಾಡಲು||
||೯||

 ಪೂಜೆಯ ವಿವರವ ತಿಳಿದುಕೊಂಡು ತಾನು ವ್ರತವನ ಆಚರಿಸಿ
ನಾರು ಬಟ್ಟೆಮಾಡಿ ನೀರುಎಣ್ಢೆಮಾಡಿ ಪೂಜೆಯಗೈದಳಾಗ||೧೦||

ಅಣ್ಣ ಭಂಡಾರವ ವಡೆಯುತಿದ್ದನೆಂದು ಮನದಲ್ಲಿ ಆಲೋಚಿಸೆ
ಶಿವ ಪಾರ್ವತಿಯರು ಬಂದರು ಅಲ್ಲಿಗೆ ಶಿವನು ಭಂಡಾರವಡೆದ
||೧೧||

ಪಾರ್ವತಿಯು ತಾನು ಪೂಜೆಯ ಮಾಡಿಸೆಕಾಳಿಂಗನೆದ್ದು
ಕೂಡಲು
ಅತಿ ಸಂತೋಷದಿ ಶಿವ ಪಾರ್ವತಿಯರು ಹರಸುತ್ತ ಹೊರಟ
ರಾಗ||೧೨||

 ಸತಿ ಪತಿಯರು ಬಹಳ ಸಂತೋಷದಿ ತಮ್ಮ ಊರಿಗೆ ಬರಲು
ಮಗಸೊಸೆಯನು ಕಂಡು ರಾಜನು ಹರುಷವಗೊಂಡನಾಗ\|೧೩||

ಹಿರಿಯರ ದಯವ ದಿವುಸಿಗೌರಿ ಪೂಜೆ ಫಲಿಸಿತು ನಮಗೆನುತ
ಪೂರ್ವದ ಹಿರಿಯರು ಮಾಡಿದ ಕಾರ್ಯವ ನಡೆಸಬೇಕೆನ್ನುತ||೧೪||

ಕನ್ಯಾಮಣಿಗಳು ತಾವು ದಿವುಸಿಗೌರಿ ಪೂಜೆ ಅರ್ಥಿಂದ ಮಾಡಿದರೆ
 ದಂಪತಿಗಳು ಸುಖದಿಂದಿರುವರೆಂದು ಮಧ್ವೇಶಕೃಷ್ಣನು
ಹರಸುವನು||೧೫||
***