Showing posts with label ಅಡಗಿದೇತಕೊ ರಜತ ಕವಚದೊಳಗೆ gopalakrishna vittala ADAGIDETAKO RAJATA KAVACHADOLAGE. Show all posts
Showing posts with label ಅಡಗಿದೇತಕೊ ರಜತ ಕವಚದೊಳಗೆ gopalakrishna vittala ADAGIDETAKO RAJATA KAVACHADOLAGE. Show all posts

Thursday 2 December 2021

ಅಡಗಿದೇತಕೊ ರಜತ ಕವಚದೊಳಗೆ ankita gopalakrishna vittala ADAGIDETAKO RAJATA KAVACHADOLAGE



ಅಡಗಿದೇತಕೊ ರಜತ ಕವಚದೊಳಗೆ

ಅಡಿ ಭಕ್ತರಾಡುವೋ ಬಿಡಿ ನುಡಿಗೆ ಪ.


ಗೇಣು ಪ್ರಮಾಣದಾ ಪ್ರಾಣರಾಯನೆ ಛಿದ್ರ

ಕಾಣುತಿರೆ ಶಿಲೆರೂಪದಲ್ಲಿ ನಲಿದು

ಆನಂದದಿಂ ನುಡಿದ ಆನತರ ವಚನಕ್ಕೆ

ನೀ ನಾಚಿ ಜಗಕಿನ್ನು ಕಾಣಬಾರದು ಎಂದು 1


ದುರುಳ ಸೀತೆಯ ಕದ್ದು ತೆರಳುತಿರೆ ನಿಮ್ಮ ಕಂ

ಡರವಿಂದನಯನೆ ಆಭರಣ ಕಟ್ಟೊಗೆಯೇ

ಸಿರಿಚರಣ ಸ್ಪರ್ಶವೆನಗಿರಲೆಂದು ಪೈಜಣವ

ಮುರಿಸಿ ಕವಚವ ಮಾಡಿ ಮೆರೆವ ವೈಖರಿಯೇ 2


ರಜತಗಿರಿ ವಾಸ ರಣದಲ್ಲಿ ಬ್ರಹ್ಮಾಸ್ತ್ರವನು

ಭುಜಬಲದಿ ಬಿಡಲು ಲೆಕ್ಕಿಸದೆ ಮೂದಲಿಸೀ

ನಿಜವಾಸ ಸ್ಥಳವಿಲ್ಲದಲೆಯಲೆಂದೆನ್ನುತಲಿ

ರಜತಗಿರಿ ಕವಚ ಮಾಡಿರುವ ವೈಭವವೋ 3


ಕುನ್ನಿ ಮತಗಳ ಮುರಿದು ಘನ್ನ ಶಾಸ್ತ್ರವನೊರೆದು

ಚನ್ನಕೃಷ್ಣನ ರಜತ ಪೀಠದಲಿ ನಿಲಿಸೀ

ಎನ್ನೊಡೆಯನಾಸನವು ಎನಗೆ ಭೂಷಣವೆಂದು

ಚನ್ನಾಗಿ ಮೈಗೆ ಸುತ್ತಿರುವ ವಿಸ್ಮøತಿಯೋ 4


ನಿನ್ನಲ್ಲಿ ವಡಕಿರಲು ಪೂಜಿಸುವ ಜ್ಞಾನಿಗಳಿ

ಗಿನ್ನೊಂದು ನುಡಿ ಅಜ್ಞರಿಂ ಬೇಡವೆಂದೂ

ಚನ್ನಾಗಿ ಹಿಂದೆ ಮುಂದೆಡಬಲದಿ ಮೇಲ್ ಕೆಳಗೆ

ಇನ್ನು ತೋರದ ತೆರದಿ ಮರೆಮಾಡಿಕೊಂಡೂ5


ವಡೆಯ ಈರೇಳು ಲೋಕದಿ ವ್ಯಾಪ್ತನಾಗಿ ನೀ

ನುಡಿದು ಶ್ರೀಮಂತ್ರ ಜೀವರ ಕಾಯೊ ಎನಲೂ

ವಡೆಯಗುತ್ತರ ಪೇಳಲಾರದಲೆ ಬ್ಯಾಸತ್ತು

ಅಡಿಗಿಲ್ಲಿ ಮೈದೋರದಿರುವ ಪರಿ ಏನೋ 6


ಕಂಡವರು ಬಿಡುವರೇ ಆಡದಲೆ ನಿನ ಚರಿತೆ

ಚಂಡ ವಿಕ್ರಮನಹುದೊ ಮುನಿಯದಲೆ ಸಲಹೋ

ಪಾಂಡವರ ಪಾಲ ಗೋಪಾಲಕೃಷ್ಣವಿಠ್ಠಲನತೊಂಡ 

 ಪ್ರದ್ಯುಮ್ನತೀರ್ಥ ಕರ ಪೂಜ್ಯ 7

***