Showing posts with label ಧನ್ಯನಾದೆ ಪಾಂಡುರಂಗನ ಕಣ್ಣಾರೆ ಕಂಡು bhupati vittala. Show all posts
Showing posts with label ಧನ್ಯನಾದೆ ಪಾಂಡುರಂಗನ ಕಣ್ಣಾರೆ ಕಂಡು bhupati vittala. Show all posts

Thursday, 5 August 2021

ಧನ್ಯನಾದೆ ಪಾಂಡುರಂಗನ ಕಣ್ಣಾರೆ ಕಂಡು ankita bhupati vittala

 ..

kruti by bhupati vittalaru ( kakhandaki Ramacharyaru) 


ಧನ್ಯನಾದೆ ಪಾಂಡುರಂಗನ ಕಣ್ಣಾರೆ ಕಂಡು ll ಪ ll


ತಂದೆ ತಾಯಿಯ ಸೇವೆ ಮಾಡಿದ 

ಪುಂಡಲೀಕನ ಭಕ್ತಿಗೊಲಿದು

ಚಂದ್ರಭಾಗಾ ತೀರದಲ್ಲಿ 

ಬಂದು ನಿಂತ ವಿಟ್ಠಲನ ಕಂಡು ll 1 ll


ವೆಂಕಟೇಶ ಅಲ್ಲಿರುವ

ಶಂಖ ಚಕ್ರ ಪಿಡಿದ ಕರವ

ಟೊಂಕದ ಮೇಲಿಟ್ಟುಕೊಂಡು 

ನಿಂತು ಇಲ್ಲಿ ವಿಟ್ಠಲನಾದ ll 2 ll


ಕಡಗೋಲಿಂದ ಗಡಿಗೆ ಒಡೆದು 

ತುಡುಗು ಮಾಡಿದ ಹುಡುಗ ಬಂದು

ಉಡುಪಿಯಲ್ಲಿ ಕೃಷ್ಣನಾಗಿ 

ಓಡಿ ಬಂದಿಲ್ಲಿ ವಿಟ್ಠಲನಾದ ll 3 ll


ಎಷ್ಟು ಜನ್ಮದ ಸುಕೃತವೋ ಶ್ರೀ

ಕೃಷ್ಣ ವಿಟ್ಠಲ ರೂಪದಿಂದ

ಭಕ್ತ ಜನರಿಗಾಲಿಂಗನ 

ಭೆಟ್ಟಿ ಕೊಡುತ ನಿಂತುಬಿಟ್ಟ ll 4 ll


ಅನ್ನಬ್ರಹ್ಮ ಉಡುಪಿಯಲ್ಲಿ 

ಚಿನ್ನಬ್ರಹ್ಮ ಬೆಟ್ಟದಲ್ಲಿ

ಸಣ್ಣ ತುಳಸಿಮಾಲೆ ಸಾಕು 

ನಾದ ಬ್ರಹ್ಮ ಭೂಪತಿವಿಟ್ಠಲಗೆ ll 5 ll

***


ಧನ್ಯನಾದೆ ಪಾಂಡುರಂಗನ ಕಣ್ಣಾರೆ ಕಂಡು¥ತಂದೆತಾುಯ ಸೇವೆ ಮಾಡಿಪುಂಡಲೀಕನ ಭಕ್ತಿಗೊಲಿದುಚಂದ್ರಭಾಗಾ ತೀರದಲ್ಲಿಬಂದು ನಿಂತವಿಠ್ಠಲನ ಕಂಡು 1

ವೆಂಕಟೇಶ ಅಲ್ಲಿರುವಶಂಖಚಕ್ರ ಪಿಡಿದ ಕರವಟೊಂಕದ ಮೇಲಿಟ್ಟುಕೊಂಡುನಿಂತು ಇಲ್ಲಿ ವಿಠಲನಾದ 2

ಕಡಗೋಲಿಂದ ಗಡಿಗೆ ಒಡೆದುತುಡುಗು ಮಾಡಿದ್ಹುಡುಗ ಬಂದಉಡುಪಿಯಲ್ಲಿ ಕೃಷ್ಣನಾಗಿಓಡಿಬಂದಿಲ್ಲಿ ವಿಠಲನಾದ 3

ಎಷ್ಟು ಜನ್ಮದ ಸುಕೃತವೊ ಶ್ರೀ-ಕೃಷ್ಣ ವಿಠಲರೂಪದಿಂದಭಕ್ತಜನರಿಗಾಲಿಂಗನಭೆಟ್ಟಿ ಕೊಡುತ ನಿಂತುಬಿಟ್ಟ 4

ಅನ್ನಬ್ರಹ್ಮ ಉಡುಪಿಯಲ್ಲಿಚಿನ್ನ ಬ್ರಹ್ಮ ಬೆಟ್ಟದಲ್ಲಿಸಣ್ಣ ತುಳಸಿಮಾಲೆ ಸಾಕುನಾದಬ್ರಹ್ಮ ಭೂಪತಿವಿಠಲಗೆ 5

ಗಲಗಲಿ ವಾಸಸ್ಥ ಶ್ರೀ ಪಾಂಡುರಂಗ

***