Showing posts with label ಗುರುರಾಜರ ಸ್ಮರಿಸಿರೋ ದುರಿತವ ಕಳೆದು ಸದ್ಗತಿಯ vijayaranga vittala pradyumna teertha stutih. Show all posts
Showing posts with label ಗುರುರಾಜರ ಸ್ಮರಿಸಿರೋ ದುರಿತವ ಕಳೆದು ಸದ್ಗತಿಯ vijayaranga vittala pradyumna teertha stutih. Show all posts

Thursday 1 July 2021

ಗುರುರಾಜರ ಸ್ಮರಿಸಿರೋ ದುರಿತವ ಕಳೆದು ಸದ್ಗತಿಯ ankita vijayaranga vittala pradyumna teertha stutih

 ರಚನೆ : ಶ್ರೀಯುತ ರಂಗನಾಥ ಭಾರಧ್ವಾಜ್

ಅಂಕಿತ :ಗಜಗಹ್ವರದಲಿ ನೆಲೆನಿಂತ - ಶ್ರೀ ವ್ಯಾಸರಾಜ ಗುರುಸಾರ್ವಭೌಮರ ವರ ಪ್ರಸಾದಾಂಕಿತ " ವಿಜಯರಂಗ ವಿಠ್ಠಲ"


ಗುರುರಾಜರ ಸ್ಮರಿಸಿರೋ ।। ಪಲ್ಲವಿ ।।


ದುರಿತವ ಕಳೆದು ಸದ್ಗತಿಯ -

ಪಡೆವವರೆಲ್ಲ ।। ಅ ಪ ।।


ಪ್ರಿಯತೀರ್ಥ ಮುನಿಗಳ -

ಸಂಜಾತ ಇವ ।

ಅನಿಲದೇವನ ನಿಜ ಭಕುತ ।

ಪಾಮರರನು ಇವ -

ಪಾವನಗೊಳಿಸುವ ।

ಶ್ರೀ ಪ್ರದ್ಯುಮ್ನತೀರ್ಥರೆಂಬೋ -

ಪ್ರಿಯವಾದ ಪೆಸರುಳ್ಳ ।। ಚರಣ ।।


ಬ್ರಹ್ಮಣ್ಯ ಬ್ರಹ್ಮಾಣಿ ಪದಗಳ ಇವ ।

ಸದಾ ಸಂಸ್ಕರಿಸುತ ।

ಗುರು ಮಧ್ವರಾಯರ -

ಮತವ ಸಾಧಿಸುತ ।

ಭಾವಿರಾಯರೆಂಬೋ -

ರಘುಪತಿ ಪ್ರಿಯರ ।। ಚರಣ ।।


ಬ್ರಹ್ಮಣ್ಯತೀರ್ಥರ ಕಂದ ಇವ ।

ಬಂಕಾಪುರದಲ್ಲಿ ಮೆರೆವ ।

ಸೇವಿಪ ಜನರ -

ದುರ್ಬೋಧ ಪರಿಹರಿಸುತ ।

ವಿಜಯರಂಗ ವಿಠ್ಠಲನ -

ಹೃದಯದಿ ನೋಳ್ಪರ ।। ಚರಣ ।।

****