Showing posts with label ಆರ್ತನಾಭೀಷ್ಟವನು ಪೂರ್ತಿ ಮಾಡೋ tandevenkatesha vittala. Show all posts
Showing posts with label ಆರ್ತನಾಭೀಷ್ಟವನು ಪೂರ್ತಿ ಮಾಡೋ tandevenkatesha vittala. Show all posts

Monday 6 September 2021

ಆರ್ತನಾಭೀಷ್ಟವನು ಪೂರ್ತಿ ಮಾಡೋ ankita tandevenkatesha vittala

ankita ತಂದೆವೆಂಕಟೇಶವಿಠಲ

ರಾಗ: ಬೇಗಡೆ /ಕಾಂಬೋಜಿ ತಾಳ: ಝಂಪೆ


ಆರ್ತನಾಭೀಷ್ಟವನು ಪೂರ್ತಿ ಮಾಡೋ


ಕಾರ್ತಸ್ವರಾಭವಪುಸ್ಫೂರ್ತಿ ಕೊಟ್ಟೆನಗೆ ಅ.ಪ


ಏಸೇಸು ವಿಧದಿ ಭವಕ್ಲೇಶ ಸಮನಿಸಿ ಮನೋ-

ಲ್ಹಾಸಗಳನನವರತ ಹ್ರಾಸಗೈಸುತಲಿ

ಲೇಸುನಿನ್ನಯ ಸ್ಮರಣೆಗಾಸೆಯಾಗದ ತೆರದಿ

ಮೋಸಪಡಿಸುವ ಕಲ್ಯಾವೇಶವನು ಬಿಡಿಸಿ 1

ಬಂದೆ ಪ್ರಾಕೃತಬಾಧೆಯಿಂದ ಮನನೊಂದು ಎಳ-

ಗಂದು ತಾಯಿಯ ಕಾಣದಂದು ಕಳೆಗುಂದಿ

ಹಿಂದೆಮುಂದರಚುತ ಸಂಬಂಧಿಗರ ಕಾಣದಲೆ 

ಬೆಂದೊಡಲ ಕೊಡಹಿ ತಾಯ್ಮಂದಿರವ ಹೋಗುವಂತೆ 2

ಆದುದಾಯಿತು ಪೂರ್ಣಬೋಧರ ಸದಾಗಮ ಪ್ರ-

ಮೋದಮಾರ್ಗವ ತೋರಿ ಸಾಧುವರರಾ 

ಪಾದಧೂಳಿಯ ಸುಪ್ರಸಾದ ಕರುಣಿಸಿ ಭವದ 

ಬಾಧೆಯನು ಬಿಡಿಸೊ ಪ್ರಹ್ಲಾದÀಗುರುವೇ 3

ಏನು ಕಾರಣ ಕೈಯ ನೀನು ಪಿಡಿಯದಲಿರುವೆ 

ಪ್ರಾಣರಾಯನ ಭಕ್ತಾಗ್ರಣಿಯೆ ಗುಣಮಣಿಯೇ 

ದೀನಜನವತ್ಸಲನೆಂದಾನು ನಂಬಿದೆನಯ್ಯ 

ಜ್ಞಾನದಾನವ ಕೊಡೊ ಮಹಾನುಭಾವ 4

ತುಂಗಾಸುವೇಶ್ಮಾಂತ ರಂಗದೊಳು ನೀ ನಿಂತು 

ಭಂಗುರದ ವಿಷಯವಿಷ ಭಂಗಿಸುತಲನಿಶಾ 

ಅಂಗಜನ ತಂದೆವೆಂಕಟೇಶವಿಠಲನ ಚರಣ 

ಅಂಗುಲೀನಖದ್ಯುತಿ ಹೃದಂಗಣದಿ ತೋರೋ 5

***

ಕಾರ್ತಸ್ವರಾ ಭವಪುಸ್ಫೂರ್ತಿ=ಬಂಗಾರದಂತೆ 

ಪ್ರಕಾಶಮಾನವಾದ ದೇಹ; 

ಹ್ರಾಸಗೈಸು=ನಾಶ ಮಾಡು; 

ಎಳಗಂದು=ಹೊಸದಾಗಿ ಹುಟ್ಟಿದ ಕರು; 

ತಾಯ್ಮಂದಿರ=ತಾಯಿಯ ಸಮೀಪ; 

ಸುವೇಶ್ಮಾ=ಸುಂದರವಾದ ಮನೆ; 

ಭಂಗುರ=ಬೇಗನೆ ನಾಶ ಹೊಂದುವ; 

ಅಂಗುಲೀ ನಖದ್ಯುತಿ=ಬೆರಳುಗುರಿನ ಕಾಂತಿ;