Showing posts with label ಚಂದಿರ ಉದಯವಾಯಿತೇ ಕೃಷ್ಣಾರ್ಯರೆಂಬೋ ankita indiresha CHANDIRA UDAYAVAAYITE KRISHNARYAREMBO APPAVARA STUTIH. Show all posts
Showing posts with label ಚಂದಿರ ಉದಯವಾಯಿತೇ ಕೃಷ್ಣಾರ್ಯರೆಂಬೋ ankita indiresha CHANDIRA UDAYAVAAYITE KRISHNARYAREMBO APPAVARA STUTIH. Show all posts

Thursday 26 December 2019

ಚಂದಿರ ಉದಯವಾಯಿತೇ ಕೃಷ್ಣಾರ್ಯರೆಂಬೋ ankita indiresha CHANDIRA UDAYAVAAYITE KRISHNARYAREMBO APPAVARA STUTIH

Audio by Mrs. Nandini Sripad

ಹರಪನಹಳ್ಳಿ ಶ್ರೀ ರಾಮಾಚಾರ್ಯ ದಾಸರ ಕೃತಿ 
 ( ಇಂದಿರೇಶ ಅಂಕಿತ ) 

ರಾಗ ಭೂಪಾಳಿ        ಖಂಡಛಾಪುತಾಳ 

ಚಂದಿರ ಉದಯವಾಯಿತೇ ಕೃಷ್ಣಾರ್ಯರೆಂಬೋ ॥ ಪ ॥
ಚಂದಿರನುದಿಸಿದ ತನ್ನಯ 
ಸುಂದರಿ ಸೂರಿಗಳ ಸುಕೃತ ।
ಬಿಂದ್ಯವೆಂಬೋ ಉದಯಾಚಲದ 
ಕಂದರದಿಂ ಕುಣಿದು ಬಂದು ॥ ಅ ಪ ॥

ಮಂಗಳಾಂಗ ಮನುಜರ ದುರಿ -
ತಂಗಳೊಳು ಗಾಢ ತಿಮಿರ ।
ಭಂಗಗೈದು ಸುಜನರ ಬೆಳ -
ದಿಂಗಳು ಸೂರಾಡುವಂಥ ॥ 1 ॥

ರಾಜಿಸುವನು ಕುಜನರ ಮುಖಾಂ -
ಬುಜಗಳನೆ ಬಳಲಿ ಸೋಮ ।
ತೇಜ ಸುಜನರೆಂಬೋ ಕುಮುದ -
ರಾಜಿಗಳ ವಿಕಾಸಗೈವ ॥ 2 ॥

 ಇಂದಿರೇಶನೆ ಪರದೈವ -
ವೆಂದು ಜಗಕೆ ಸಾರುತಿರಲು , ಆ - ।
ನಂದತೀರ್ಥರ ಮತವೆಂಬೋ 
ಸಿಂಧುರಾಜ ವರ್ಧಿಸಿದನ ॥ 3 ॥
******