Showing posts with label ಮಧ್ವರಾಯರ ಚರಿತೆ ಕೇಳಲು prasanna madhwacharya stutih. Show all posts
Showing posts with label ಮಧ್ವರಾಯರ ಚರಿತೆ ಕೇಳಲು prasanna madhwacharya stutih. Show all posts

Friday 27 December 2019

ಮಧ್ವರಾಯರ ಚರಿತೆ ಕೇಳಲು ankita prasanna madhwacharya stutih

ಮಧ್ವರಾಯರ ಚರಿತೆ ಕೇಳಲು
ಶುದ್ಧವಾಯಿತು ಜನತೆ ||pa||

ತಿದ್ದಿತೆಲ್ಲರ ನಡತೆ ಸುಲಭದಿ
ಲಬ್ಧವಾಯಿತು ಘನತೆ ||a.pa||

ಉತ್ತಮ ದಿವಿಜರ ಸತ್ಸಭೆಗಳಲಿ
ನಿತ್ಯ ಪಾಡುವ ಕಥೆ
ಮರ್ತ್ಯಲೋಕದ ಮದ ಮತ್ಸರ ರೋಗಕೆ
ಪಥ್ಯಮಾಡುವವರಿಗೆ ಉತ್ತಮವೀ ಕಥೆ ||1||

ಇಲ್ಲಿಯ ಜೀವನ ಅಲ್ಲಿಗೆ ಸಾಧನ
ಎಲ್ಲಿಯು ಭೇದವ ತೋರಿದರು
ಕ್ಷುಲ್ಲಕ ಮತಗಳ ಬೆಲ್ಲದ ವಚನವು
ಸಲ್ಲದಾಯಿತು ಬಲು ಬಲ್ಲ ಮಹಾತ್ಮ ಶ್ರೀ ||2||

ಹರಿ ಗುರು ಕೃಪೆಯಿದು ಮರುದಂಶರ ಮೈ
ಮರೆಸುವ ಚರಿತೆಯು ಹರಿದುದು ಶ್ರವಣದೊಳ
ದುರಿತವು ತೊಲಗಿತು ಪರಮ ಪ್ರಸನ್ನನ
ಪರಮ ಪದದ ರುಚಿಯರಿತರು ಸುಜನರು ||3||
******

ಮಧ್ವರಾಯರ ಚರಿತೆ ಕೇಳಲು ।

ಶುದ್ಧವಾಯಿತು ಜನತೆ ।। ಪಲ್ಲವಿ ।।


ತಿದ್ದಿತೆಲ್ಲರ ನಡತೆ ಸುಲಭದಿ ।

ಲಬ್ಧವಾಯಿತು ಘನತೆ ।। ಅ ಪ ।।


ಉತ್ತಮ ದಿವಿಜರ 

ಸತ್ಸಭೆಗಳಲಿ ।

ನೃತ್ಯ ಗೀತೆಗಳಿಂದ । 

ನಿತ್ಯ ಪಾಡುವ ಕಥೆ ।

ಮರ್ತ್ಯಲೋಕದ ಮದ ।

ಮತ್ಸರ ರೋಗಕೆ ।

ಪಥ್ಯ ಮಾಡುವವರಿಗೆ ।

ಉತ್ತಮವೀ ಕಥೆ ।। ಚರಣ ।।


ಇಲ್ಲಿಯ ಜೀವನ ।

ಅಲ್ಲಿಗೆ ಸಾಧನ ।

ಎಲ್ಲಿಯು ಭೇದವ -

ತೋರಿದರು ।

ಕ್ಷುಲ್ಲಕ ಮತಗಳ ।

ಬೆಲ್ಲದ ವಚನವು

ಸಲ್ಲದಾಯಿತು ಬಲು 

ಬಲ್ಲ ಮಹಾತ್ಮ ಶ್ರೀ ।। ಚರಣ ।।


ಹರಿ ಗುರು ಕೃಪೆಯಿದು ।

ಮರುದಂಶರ ಮೈ ।

ಮರೆಸುವ ಚರಿತೆಯು ।

ಹರಿದುದು ಶ್ರವಣದೊಳ ।

ದುರಿತವು ತೊಲಗಿತು 

ಪರಮ ಪ್ರಸನ್ನನ ।

ಪರಮ ಪದದ ರುಚಿ

ಯರಿತರು ಸುಜನರು ।। ಚರಣ ।।

***