Friday 27 December 2019

ಮಧ್ವರಾಯರ ಚರಿತೆ ಕೇಳಲು ankita prasanna madhwacharya stutih

ಮಧ್ವರಾಯರ ಚರಿತೆ ಕೇಳಲು
ಶುದ್ಧವಾಯಿತು ಜನತೆ ||pa||

ತಿದ್ದಿತೆಲ್ಲರ ನಡತೆ ಸುಲಭದಿ
ಲಬ್ಧವಾಯಿತು ಘನತೆ ||a.pa||

ಉತ್ತಮ ದಿವಿಜರ ಸತ್ಸಭೆಗಳಲಿ
ನಿತ್ಯ ಪಾಡುವ ಕಥೆ
ಮರ್ತ್ಯಲೋಕದ ಮದ ಮತ್ಸರ ರೋಗಕೆ
ಪಥ್ಯಮಾಡುವವರಿಗೆ ಉತ್ತಮವೀ ಕಥೆ ||1||

ಇಲ್ಲಿಯ ಜೀವನ ಅಲ್ಲಿಗೆ ಸಾಧನ
ಎಲ್ಲಿಯು ಭೇದವ ತೋರಿದರು
ಕ್ಷುಲ್ಲಕ ಮತಗಳ ಬೆಲ್ಲದ ವಚನವು
ಸಲ್ಲದಾಯಿತು ಬಲು ಬಲ್ಲ ಮಹಾತ್ಮ ಶ್ರೀ ||2||

ಹರಿ ಗುರು ಕೃಪೆಯಿದು ಮರುದಂಶರ ಮೈ
ಮರೆಸುವ ಚರಿತೆಯು ಹರಿದುದು ಶ್ರವಣದೊಳ
ದುರಿತವು ತೊಲಗಿತು ಪರಮ ಪ್ರಸನ್ನನ
ಪರಮ ಪದದ ರುಚಿಯರಿತರು ಸುಜನರು ||3||
******

ಮಧ್ವರಾಯರ ಚರಿತೆ ಕೇಳಲು ।

ಶುದ್ಧವಾಯಿತು ಜನತೆ ।। ಪಲ್ಲವಿ ।।


ತಿದ್ದಿತೆಲ್ಲರ ನಡತೆ ಸುಲಭದಿ ।

ಲಬ್ಧವಾಯಿತು ಘನತೆ ।। ಅ ಪ ।।


ಉತ್ತಮ ದಿವಿಜರ 

ಸತ್ಸಭೆಗಳಲಿ ।

ನೃತ್ಯ ಗೀತೆಗಳಿಂದ । 

ನಿತ್ಯ ಪಾಡುವ ಕಥೆ ।

ಮರ್ತ್ಯಲೋಕದ ಮದ ।

ಮತ್ಸರ ರೋಗಕೆ ।

ಪಥ್ಯ ಮಾಡುವವರಿಗೆ ।

ಉತ್ತಮವೀ ಕಥೆ ।। ಚರಣ ।।


ಇಲ್ಲಿಯ ಜೀವನ ।

ಅಲ್ಲಿಗೆ ಸಾಧನ ।

ಎಲ್ಲಿಯು ಭೇದವ -

ತೋರಿದರು ।

ಕ್ಷುಲ್ಲಕ ಮತಗಳ ।

ಬೆಲ್ಲದ ವಚನವು

ಸಲ್ಲದಾಯಿತು ಬಲು 

ಬಲ್ಲ ಮಹಾತ್ಮ ಶ್ರೀ ।। ಚರಣ ।।


ಹರಿ ಗುರು ಕೃಪೆಯಿದು ।

ಮರುದಂಶರ ಮೈ ।

ಮರೆಸುವ ಚರಿತೆಯು ।

ಹರಿದುದು ಶ್ರವಣದೊಳ ।

ದುರಿತವು ತೊಲಗಿತು 

ಪರಮ ಪ್ರಸನ್ನನ ।

ಪರಮ ಪದದ ರುಚಿ

ಯರಿತರು ಸುಜನರು ।। ಚರಣ ।।

***

No comments:

Post a Comment