Showing posts with label ಆವ ಮನುಜನು ಒಂದು ಗದೆಯನ್ನು ಲಲಾಟದಲ್ಲಿ ಇಡುವನೋ kalimardhanakrishna. Show all posts
Showing posts with label ಆವ ಮನುಜನು ಒಂದು ಗದೆಯನ್ನು ಲಲಾಟದಲ್ಲಿ ಇಡುವನೋ kalimardhanakrishna. Show all posts

Monday 2 August 2021

ಆವ ಮನುಜನು ಒಂದು ಗದೆಯನ್ನು ಲಲಾಟದಲ್ಲಿ ಇಡುವನೋ ankita kalimardhanakrishna

Name: Kalasada Sundaramma ಕಳಸದ ಸುಂದರಮ್ಮ

Ankita: KalimardhanaKrishna

No of Krutis available: Arround 30


ಆವ ಮನುಜನು ಒಂದು ಗದೆಯನ್ನು

ಲಲಾಟದಲ್ಲಿ ಇಡುವನೋ

ಕಾವನು ಅವನನು ನಮ್ಮ ಪವಮಾನನೊಡೆಯನು

ಆವಾವನೂ ಒಂದು ಇದೇ ಆಯುಧವನ್ನು

ವಾಮ ಉದರದಲ್ಲಿ

ಯಾವಾನಲೂ ಇಟ್ಟು ಮೆರೆಯುವನೋ ಅವನ

ಗೊವತ್ಸ ನ್ಯಾಯದಿ ಕರವನು ಪಿಡಿವನು ಗಧಾಧರನು

ಹಾವನ್ನೆ ಹಾಸಿಗೆ ಮಾಡಿಕೊಂಡ ಶ್ರೀಧರನ ಸ್ಥಾನದ ಕೆಳೆಗೆ

ಪವಮಾನಿಗುವ ಮತಾ ಎರಡು ಗಧಾಯುಧ ಧರಿಸಲು

ಪಾವನನಂತಾದವನು ಅವರ ದುರಿತಕಾನನಕೆ

ಸಾವು ಹುಟ್ಟಿಲ್ಲದ ಪರಮಪುರುಷನ ಈ ಆಯುಧವ

ಅವನು ವಾಮಸ್ತನದಿ ತಾನೊಮ್ಮೆ ಇಕ್ಕುವನೋ

ಸಾನು ಹುಟ್ಟುಗಳಿಂದ ದೂರಗೈಸುವ

ಗುರು ಕಾಳೀಮರ್ಧನಕೃಷ್ಣ 4

ಪದ್ಮ ಮುದ್ರೆಯನ್ನು ಭಕುತಿ ಪೂರ್ವಕವಾಗಿ ಹೃತ್

ಪದ್ಮದಿ ಬಂದು ಧರಿಸಲುಬೇಕು ದಕ್ಷ ಭುಜದ ಕೆಳೆಗೆ

ಪದ್ಮಂಗಳೆರಡನ್ನು ದಕ್ಷ ಉದರಕೆಳೆಗೆ

ಪದ್ಮವೆ ಒಂದನ್ನು ವಕ್ಷಸ್ಥಾನದಿ ಒಂದು

ಪದ್ಮವ ಧರಿಸಲು ಭಕ್ತವತ್ಸಲನಾದ

ಪದ್ಮ ರಮಣಗುರು ಕಾಳಿಮರ್ಧನಕೃಷ್ಣ ಪೊಳೆವಾ 5

****