Showing posts with label ವಂದಿಪೆ ಮುದದಿಂದಲಿ ನಾನು krishnavittala. Show all posts
Showing posts with label ವಂದಿಪೆ ಮುದದಿಂದಲಿ ನಾನು krishnavittala. Show all posts

Monday 2 August 2021

ವಂದಿಪೆ ಮುದದಿಂದಲಿ ನಾನು ankita krishnavittala

ವಂದಿಪೆ ಮುದದಿಂದಲಿ ನಾನು

ವಂದಿಪೆ ಮುದ್ದು ಗಣಪಗೆ ವಂದಿಪೆ ಪ


ನಂನಂದನನಾಮ ಮನದೊಳು ಆ-

ನಂದದಿ ಭಜಿಸುವ ಚಂದ್ರಶೇಖರಸುತಗೆ ಅ.ಪ.


ಆಕಾಶಕಭಿಮಾನಿ ಶ್ರೀಕಂಠವರಪುತ್ರ

ರಾಕೇಂದುವದನ ಶ್ರೀಕಾಂತ ನಿಜಭಕ್ತ

ಏಕಾಂತದಲಿ ಹರಿ ಆಕಾರತೋರಿಸಿ

ನೂಕುತಭವಪಾಶ ಸಾಕು ಸಾಕು ಎಂದು 1

ವರವರದಾಯಕ ಸುರಗಣಪೂಜಿತ

ವರಕರಿಮುಖವೇಷ ವರಸರ್ಪಕಟಿಸೂತ್ರ

ಸಿರಿಕಾಂತಸೇವೆಗೆ ಬರುವ ವಿಘ್ನಂಗಳೆಲ್ಲ

ಭರದಿಂದ ತರಿಯುತ ಕರುಣದಿ ಸಲಹೆಂದು 2

ವೇದವ್ಯಾಸರಶಿಷ್ಯ ಮೋದಕಗಳ ಪ್ರಿಯ

ಮದನನಸೋದರ ಮುದವಿದ್ಯೆದಾಯಕ

ಮಧ್ವಾಗಮದಲಿ ಅದ್ದುತ ಎಮ್ಮನು

ಶುದ್ಧರನು ಮಾಡೋ ಸಿದ್ಧಿ ವಿನಾಯಕನೆಂದು 3

ಏಕದಂತನೆ ವರ ಆಖುವಾಹನ

ಭಕ್ತರ ಶೋಕ ಹರಿಸೊ ಬೇಗ ಲೋಕ ವಂದಿತನೆ

ರಕ್ತಾಂಬರ ತನು ರಕ್ತಗಂಧಪ್ರಿಯ ವಿ -

ರಕ್ತಿನೀಡುತ ಹರಿಭಕ್ತನೆಂದೆನಿಸು ಎಂದು 4

ಪಾಶಾಂಕುಶ ಶಶಿದರ್ಪಭಂಜನ

ಶ್ರೀಶನಾಭಿವಾಸ ವಿಶಾಲಕರ್ಣಯುತ

ನಾಶಗೈಸುತವಿಷಯ ವಾಸನೆಗಳೆಲ್ಲ

ವಿಶ್ವೋಪಾಸಕ ಪ್ರಭು ಶ್ವಾಸಾವೇಶಯುತನೆಂದು 5

ಚಾರುದೇಷ್ಣನೆ ನಿನ್ನ ಚರಣಕ್ಕೆ ಶರಣೆಂಬೆ

ಸರಿನೀನು ಧನಪಗೆ ಗುರುಶೇಷಶತರಿಗೆ

ತರಿದು ತಾಪತ್ರಯ ವರe್ಞÁನ ವೈರಾಗ್ಯ

ಹರಿಭಕ್ತಿ ಹರಿ ಧ್ಯಾನ ನಿರುತ ಕೊಡು ಎಂದು 6

ಜಯತೀರ್ಥ ಹೃದಯದಿ ವಾಯುವಿನೊಳಿಪ್ಪ

ನವನೀತ ಧರಿಸಿಹ ಸಿರಿ ತಾಂಡವ ಕೃಷ್ಣವಿಠಲ

ರಾಯನ ಧ್ಯಾನ ಕಾಯಾ ವಾಚಾ ಮನಸಾ

ದಯಮಾಡಿ ಸಲಹೈಯ್ಯ ಜೀಯಾ ಗಣಪನೆಂದು7

****