Showing posts with label ಯಾಕೆ ಕಿರಿಕಿರಿ ಮಾಡುತಿ ನೀನ್ಯಾಕೆ prasannavenkata YAAKE KIRIKIRI MAADUTI NEENYAKE. Show all posts
Showing posts with label ಯಾಕೆ ಕಿರಿಕಿರಿ ಮಾಡುತಿ ನೀನ್ಯಾಕೆ prasannavenkata YAAKE KIRIKIRI MAADUTI NEENYAKE. Show all posts

Saturday 2 November 2019

ಯಾಕೆ ಕಿರಿಕಿರಿ ಮಾಡುತಿ ನೀನ್ಯಾಕೆ ankita prasannavenkata YAAKE KIRIKIRI MAADUTI NEENYAKE

Audio by Mrs. Nandini Sripad

ಶ್ರೀ ಪ್ರಸನ್ನ ವೆಂಕಟದಾಸರ ಕೃತಿ 

 ರಾಗ ಸಿಂಧುಭೈರವಿ           ಆದಿತಾಳ 

ಯಾಕೆ ಕಿರಿಕಿರಿ ಮಾಡುತಿ ನೀ -
ನ್ಯಾಕೆ ಕಿರಿಕಿರಿ ಮಾಡುತಿ ॥ ಪ ॥
ಭಕ್ತವತ್ಸಲ ಭಯನಿವಾರಣ ಬಟ್ಟಲು ಬಾರಿಸಲೇನೋ ॥ ಅ ಪ ॥

ನೀರೊಳು ಮುಳುಗಿದೆ ಏನೋ ನಿನಗೆ ನೆಗಡಿಯಾಯಿತೇನೋ ।
ಭಾರವ ಪೊತ್ತು ನಿನ್ನ ಬೆನ್ನು ನೊಂದಾವೇನೋ ॥
ಧಾರುಣಿ ಬಗೆದು ನಿನ್ನ ದಾಡಿ ನೊಂದಾವೇನೋ ।
ದುರುಳ ಹಿರಣ್ಯಕನ ಬಗೆದು ಬೆರಳು ನೊಂದಾವೇನೋ ॥ 1 ॥

ಭೂಮಿಯ ಅಳೆದು ನಿನ್ನ ಪಾದ ನೊಂದಾವೇನೋ ।
ರಾಯರಾಯರ ಗೆದ್ದು ಬಾಹು ನೊಂದಾವೇನೋ ॥
ಸೇತುವೆ ಕಟ್ಟಿ ನಿನ್ನ ರಟ್ಟೆ ನೊಂದಾವೇನೋ ।
ಅಷ್ಟಮ ಸ್ತ್ರೀಯರನ್ನಾಳಿ ತೋಳು ನೊಂದಾವೇನೋ ॥ 2 ॥

ಬತ್ತಲೆ ನಿಂದು ನಿನಗೆ ಚಳಿಯಾಯಿತೇನೋ ।
ಉತ್ತಮ ತೇಜಿಯನೇರಿ ಪಿತ್ತ ಹತ್ತಿತೇನೋ ॥
ನಾರದ ಗುರುವಿಗೆ ನಾನು ಹೇಳಿ ಕಳಿಸಲೇನೋ ।
ಮಾಯದ ಕಪ್ಪು ನಿನ್ನ ಮೋರೆಗೆ ಹಚ್ಚಿಸಲೇನೋ ।
ಬಾಲ ಲಕುಮಿಲೋಲ ಪ್ರಸನ್ನವೆಂಕಟ ಕೃಷ್ಣ ॥ 3 ॥
********