Showing posts with label ಮಧ್ವಮತವೇ ದೊಡ್ಡದೆಂದು ತಿಳಿದು ಮನ namagiri. Show all posts
Showing posts with label ಮಧ್ವಮತವೇ ದೊಡ್ಡದೆಂದು ತಿಳಿದು ಮನ namagiri. Show all posts

Thursday 5 August 2021

ಮಧ್ವಮತವೇ ದೊಡ್ಡದೆಂದು ತಿಳಿದು ಮನ ankita namagiri

 ..

kruti by ವಿದ್ಯಾರತ್ನಾಕರತೀರ್ಥರು vidyaratnakara teertharu 


ಮಧ್ಯಮತವೇ ದೊಡ್ಡದೆಂದು ತಿಳಿದು ಮನ

ಶುದ್ಧಿಯಿಂದ ಮತವನನುಸರಿಸೋ ಪ


ಶ್ರೀ ಮಧ್ವಮತದಲ್ಲಿ ಹರಿಯೇ ಸವೋತ್ತಮ

ಭೇದಪಂಚ ಜಗತೆರಡು ಸತ್ಯ

ಶ್ರೀ ಬ್ರಹ್ಮಾದಿಗಳೆಲ್ಲ ಹರಿಪರಿವಾರರು

ತಾರತಮ್ಯವೇ ಸದಾ ಇವರಲ್ಲಿ 1


ಮುಕ್ತಿ ಎಂಬುದು ನಿಜಾನಂದದ ಅನುಭವ

ಭಕ್ತಿಯೆಂಬುದೇ ದೊಡ್ಡ ಸಾಧನವು

ಅಕ್ಷಾನುಮಾಗಮ ಮೂರು ಪ್ರಮಾಣ ಶ್ರೀ

ಲಕ್ಷ್ಮೀಶನೇ ಸರ್ವಶ್ರುತಿವೇದ್ಯನು 2


ಸ್ವತಂತ್ರ ಪರತಂತ್ರ ಎರಡು ತತ್ವಗಳು

ಸ್ವತಂತ್ರ ತತ್ವವು ಹರಿಯೊಬ್ಬನೇ ಪ

ರತಂತ್ರ ಮಿಕ್ಕಿದ್ದಲ್ಲಾ ಇದಕೆ ಪ್ರಮಾಣವು

`ಏಷ ಸರ್ವೇಶ್ವರ ' ವೆನ್ನುತ ಶ್ರುತಿಯು 3


ಹರಿಯೇ ಸರ್ವೋತ್ತಮ ತದನು ರಮಾದೇವಿ

ತದನು ವಿಧಿ ಪ್ರಾಣರಿವರಿಬ್ಬರು

ತದನು ಸರಸ್ವತಿ ಭಾರತೇರಿಬ್ಬರು

ಶಿವ ಶೇಷ ಗರುಡ ಶ್ರೀ ಹರಿನಾರೇರು 4


ವಾರುಣಿ ಸೌಪರ್ಣಿ ಪಾರ್ವತಿಯರು ಸಮ

ಶಕ್ರ ಕಾಮರು ಸಮ ಸ್ಮರರಮಣಿ

ಗುರು ಶಚಿ ಮನು ದಕ್ಷ ಸಮರು ಆ ಮಾನವಿ

ಪ್ರವಹ ಯಮೇಂದ್ವರ್ಕ ಸಮರೈವರು 5


ನಿಖಿಲ ದಿವಿಜರಲ್ಲಿ ಈ ವಿಧ ತಾರತಮ್ಯ

ನಿಖಿಲ ಸುರೋತ್ತಮ ಹರಿಯೊಬ್ಬನೇ

ಮಿಕ್ಕವರಲವೆಂದು ಇಂದ್ರಿಯೇಭ್ಯಃ ಪರಃ

ದ್ವಾವಿಮಾ ಇತ್ಯಾದಿ ಶ್ರುತಿವಚನ 6


ಈಶ್ವರ ಜಡ ಭೇದ ಜೀವ ಜಡಕೆ ಭೇದ

ಜೀವ ಜೀವಕೆ ಭೇದ ಜಡ ಜಡಕೆ

ಜೀವೇಶರಿಗೆ ಭೇದ ಈಶ ಲಕ್ಷ್ಮೀ ಭೇದ

ಪರತಂತ್ರ ಚಿತ್ಪರ ಜೀವ ಶಬ್ದ 7


ಬ್ರಹ್ಮವಿಚಾರ ತತ್ ಜ್ಞಾನಕೆ ಸಾಧನ

ಜ್ಞಾನಪ್ರಸಾದಕೆ ಇದು ಮುಕ್ತಿಗೆ

ಆದ ಕಾರಣದಿಂದ ಶಮದಮಯುತನಿಗೆ

ಬ್ರಹ್ಮ ಜಿಜ್ಞಾಸವು ಕರ್ತವ್ಯವು 8


ಜಿಜ್ಞಾಸ್ಯಬ್ರಹ್ಮನು ಜೀವನಲ್ಲವೊ ಜಗ

ತ್ಕಾರಣತ್ವವು ಜೀವಗೆಲ್ಲಿಹುದೊ

ರುದ್ರಾದಿಗಳು ಜಗತ್ಕಾರಣರಲ್ಲವೊ

ಶಾಸ್ತ್ರವೇದ್ಯನೆ ಜಗತ್ಕಾರಣನು 9


ಉಪಕ್ರಮಾದಿಗಳ ವಿಚಾರ ಮಾಡಲು ಸರ್ವ

ಶಾಸ್ತ್ರ ತಾತ್ಪರ್ಯಗೋಚರ ಹರಿಯೆ

ಅಕ್ಷಾದ್ಯವೇದ್ಯನ ಜ್ಞೇಯನಾಗುವ ಹರ್ಯ

ವಾಚ್ಯನೆಂಬುವುದದು ಸರಿಯಲ್ಲವೊ10


ಆನಂದಮಯ ಮೊದಲಾದ ವಾಚ್ಯನು ಮತ್ತೆ

ಸರ್ವಗತತ್ವಾದಿ ಲಿಂಗಯುತ

ದ್ಯುಭ್ವಾದಿಗಳಿಗಾಧಾರನು ಅವ್ಯಕ್ತ

ಜ್ಯೋತಿರಾದಿ ಶಬ್ದ ಮುಖ್ಯಾರ್ಥನು 11


ದೋಷವರ್ಜಿತ ಹರಿ ವಿಷಯವಿರಕ್ತಿ ಭಕ್ತ್ಯು

ಪಾಸನದಿಂದಲೆ ಅಪರೋಕ್ಷನೊ

ಇಂತು ಪ್ರಸನ್ನನು ಮುಕ್ತಿಯನೀವನು

ಎಂಬುವುದೆ ಸರ್ವ ಶಾಸ್ತ್ರಾರ್ಥವೊ 12


ವರನಾಮಗಿರಿ ನರಹರಿಯ ಪಾದಾಂಬುಜ

ನಿರತ ಹೃದಯನಾಗಿ ಅನುದಿನದಿ

ಧರಣಿ ಸುರನು ಇದ ಪೇಳಲು ನರಹರಿ

ಚರಣಕಮಲ ಭಕ್ತಿ ಪೊಂದುವನು 13

***