Showing posts with label ಜಯರಾಯ ಭವಹರಣ ಪಾಲಿಸೆಮ್ಮ jayesha vittala JAYARAYA BHAVAHARANA PAALISEMMA. Show all posts
Showing posts with label ಜಯರಾಯ ಭವಹರಣ ಪಾಲಿಸೆಮ್ಮ jayesha vittala JAYARAYA BHAVAHARANA PAALISEMMA. Show all posts

Thursday 26 December 2019

ಜಯರಾಯ ಭವಹರಣ ಪಾಲಿಸೆಮ್ಮ ankita jayesha vittala JAYARAYA BHAVAHARANA PAALISEMMA

Audio by Vidwan Sumukh Moudgalya

ಶ್ರೀ ಜಯೇಶವಿಠಲ ದಾಸರ ಕೃತಿ 
(Sri. Attaji Venkatarayaru, Mysore 1850-1932)ರಾಗ : ಸರಸ್ವತಿ 
ತಾಳ : ತಿಶ್ರನಡೆ 

ಜಯರಾಯ ಭವಹರಣ ಪಾಲಿಸೆಮ್ಮ ॥ ಪ ॥
ಜಯದೇವಿಪತಿ ರೂಪಗುಣಕ್ರಿಯದಿ ರತ ಯತಿಯೇ ॥ ಅ ಪ ॥

ಅಮರೇಶ ಸ್ವರ್ಗಪದ ತೃಣ ಮಾಡಿ ಕ್ಷಿತಿಯಲ್ಲಿ ।
ಅಮಿತಮತಿ ಶ್ರೀಪಾದ ಸೇವೆಗಾಗಿ ॥
ಅಮಿತ ಸೌಭಾಗ್ಯದಿಂ ಪಶುವಾಗಿ ನೀನಂದು ।
ಭ್ರಮರವದ್ಗುರುಚರಣ ಕಮಲಮಧು ಸೇವಿಸಿದೆ ॥ 1 ॥

ತ್ರಿತಿಯೇಶರೆನಿಸುವಾ ಅಹಿಗರುಡ ಮಹರುದ್ರ ।
ಪ್ರತಿಕ್ಷಣದಿ ಅತಿಭಕುತಿಭಾರದಿಂದಾ ॥
ನತಿಸಿ ಸೇವಿಪ ಪರಮ ಗುರುಚರಣವಾಶ್ರೈಸಿದ ।
ಅತಿಸುಕೃತ ನಿಧಿ ನಮ್ಮ ಅತಿದಯದಿ ಈಕ್ಷಿಪುದು ॥ 2 ॥

ಶ್ರೀಭೂಮಿ ದುರ್ಗೇಶ ನಮಿತ ಮಂಗಳಮೂರ್ತಿ ।
ಶೋಭನಾನಂತ ಗುಣಕ್ರಿಯ ನಿವಹಗಳನು ॥
ಅದ್ಭುತದಿ ಧರಿಸಿಹಾ ಮಧ್ವಕೃತ ಗ್ರಂಥಗಳ ।
ಸದ್ಭಕ್ತಿಯಲಿ ಪೊತ್ತೆ ಸೌಭಾಗ್ಯನಿಧಿ ಗುರುವೇ ॥ 3 ॥

ಪವಮಾನರಾಯನಾ ಕೃಪೆಯೆಷ್ಟೋ ನಿನ್ನಲ್ಲಿ ।
ಅವನಿಯೊಳು ಸಿದ್ಧಾಂತಗ್ರಂಥಗಳ ಟೀಕಾ ॥
ಕವಿಶ್ರೇಷ್ಠರಿರಲಾಗಿ ನಿನ್ನಿಂದ ರಚಿಸಿದಾ ತ್ರಿ - ।
ಭುವನ ಮಾನ್ಯ ಧನ್ಯತಮ ಪೊರೆ ಎನ್ನಾ ॥ 4 ॥

ಪಾರ್ಥನಾಗಂದು ಶ್ರೀಯದುಪತಿಯ ಸಖ್ಯವನು ।
ಪೂರ್ತಿ ಪೊಂದಿದೆ ಸರ್ವ ಪುರುಷಾರ್ಥವೆಂದೂ ॥
ಸಾರ್ಥಮತಿಯಲಿ ಹರಿಯ ಒಲಿಸಿದಾ ಮಹನಿಪುಣ ।
ಪ್ರಾರ್ಥಿಸುವೆ ತವಪಾದಪಾಂಸು ರಕ್ಷಿಸಲೆಂದೂ ॥ 5 ॥

ದೇವಕೀಸುತ ನಿನ್ನ ಸಖನೆಂದು ಪವಮಾನ - ।
ದೇವ ನಿನ್ನಲಿ ಮಾಡ್ದ ಪರಮಪ್ರೀತಿ ॥
ಕೈವಲ್ಯಪತಿದಾಸ್ಯ ಪೂರ್ಣಪದ ಆರೂಢ ।
ಕೃಪೆ ಮಾಡೊ ಹರಿದಾಸಮಣಿ ಗುರುವೇ ॥ 6 ॥

ಭಾರತೀಪತಿಗೊಡೆಯ ಜಯೇಶವಿಟ್ಠಲನ ।
ವೈರಾಗ್ಯಶಿದ್ಧಿಯಲಿ ಏಕಾಂತ ಪೊಂದೀ ॥
ಭೂರಿ ಭಕ್ತಿಲಿ ಭಜಿಪ ಭವ ಕರುಣಸತ್ಪಾತ್ರ ।
ಸೂರಿ ಸುರಿ ದಯವೃಷ್ಟಿ ಹರಿಗುರುಗಳೊಲಿವಂತೆ ॥ 7 ॥
*****