Showing posts with label ಶ್ರೀವಿಷ್ಣುವಿನ ದಿವ್ಯ pranesha vittala ankit suladi ಬ್ರಹ್ಮಸೂತ್ರಭಾಷ್ಯ ಸುಳಾದಿ SRI VISHNUVINA DIVYA BRAHMA SUTRA SULADI. Show all posts
Showing posts with label ಶ್ರೀವಿಷ್ಣುವಿನ ದಿವ್ಯ pranesha vittala ankit suladi ಬ್ರಹ್ಮಸೂತ್ರಭಾಷ್ಯ ಸುಳಾದಿ SRI VISHNUVINA DIVYA BRAHMA SUTRA SULADI. Show all posts

Sunday 13 December 2020

ಶ್ರೀವಿಷ್ಣುವಿನ ದಿವ್ಯ pranesha vittala ankit suladi ಬ್ರಹ್ಮಸೂತ್ರಭಾಷ್ಯ ಸುಳಾದಿ SRI VISHNUVINA DIVYA BRAHMA SUTRA SULADI


 Audio by Mrs. Nandini Sripad

ಶ್ರೀ ಪ್ರಾಣೇಶದಾಸಾರ್ಯ ವಿರಚಿತ  ಬ್ರಹ್ಮಸೂತ್ರಭಾಷ್ಯ ಸುಳಾದಿ 

CLICK  ಬ್ರಹ್ಮ ಸೂತ್ರ ಸುಳಾದಿ

 ರಾಗ ಭೈರವಿ 


 ಧ್ರುವತಾಳ 


ಶ್ರೀವಿಷ್ಣುವಿನ ದಿವ್ಯ ಶ್ರವಣ ಮನನ ಧ್ಯಾನ

ಈ ವಿಧವಾದ ವಿಚಾರವನೂ

ಈ ವಸುಧಿಯೊಳು ತ್ರಿವಿಧಾಧಿಕಾರಿಗಳು

ಭಾವ ಶುದ್ಧಿಯಲ್ಲಿ ಬಹು ಬಗೆ ವಿಚಾರಿಸಿ

ಶ್ರೀವರ ಕರುಣಿಸಿ ತನ್ನಪರೋಕ್ಷವಿತ್ತು

ಸ್ಥಾವರಚೇತನ ಜಗಕೆ ಜನ್ಮಾದಿಕರ್ತಾ

ಜೀವ ಭಿನ್ನನು ಕಾಣೋ ಸರ್ವೇಶ

ಪಾವನವಾದ ನಾಲ್ಕು ವೇದ ಭಾರತ ವರ

ಭಾವುಕ ಪಂಚರಾತ್ರ ಮೂಲರಾಮಾಯಣ

ಈ ವಿಧವಾದ ಶಾಸ್ತ್ರಕಗಮ್ಯ

ಆ ಉಪಕ್ರಮ ಉಪಸಂಹಾರ ಅಭ್ಯಾಸ

ಕೇವಲವಾದ ಉಪಪತ್ತಿ ಮೊದಲಾದ ಲಿಂಗದಿಂದ

ಯಾವದ್ವೇದಾರ್ಥವ ವಿಚಾರಿಸೆ

ಆವಾವ ಬಗೆಯಿಂದ ಹರಿಯೇ ಸರ್ವೋತ್ತಮ

ಭಾವಜ್ಞ ಜನರೆಲ್ಲ ತಿಳಿದು ನೋಡಿ

ಈ ವಿಧವಾದ ಈಕ್ಷತೇ ಕರ್ಮನೆನಿಸುವ

ಈ ವಾಸುದೇವಗೆ ಸಮಸ್ತವಾದ ಶಬ್ದವಾಚ್ಯ -

ತ್ವವ ಪೇಳದ ಪಾಪಿಗೆ ಏನೆಂಬೇ

ದೇವೇಶನಾದ ಪ್ರಾಣೇಶವಿಟ್ಠಲನ 

ಈ ವಿಧ ತಿಳಿವುದು ಕಾವ ಕರುಣಿ ॥ 1 ॥ 


 ಮಟ್ಟತಾಳ 


ಸಕಲ ಶಬ್ದಗಳು ನಾಲ್ಕು ವಿಧವೈಯ್ಯಾ

ಪ್ರಕಟದಿಂದ ತತ್ರ ಪ್ರಸಿದ್ಧ ಕೆಲವು

ಯುಕುತಿವಂತರು ಕೇಳಿ ಅನ್ಯತ್ರ ಪ್ರಸಿದ್ಧ

ಅಖಿಳ ಚತುರ್ವಿಧ ವಚನಗಳಿಂದ ಪ್ರಾಣೇಶವಿಟ್ಠಲ 

ಅಕಳಂಕತ್ವದಲಿ ವಾಚ್ಯ ಪರಮ ವಾಚ್ಯ ॥ 2 ॥ 


 ತ್ರಿವಿಡಿತಾಳ 


ಈ ಶಬ್ದಗಳಿಗೆಲ್ಲ ಯುಕ್ತ ಸಮಯ ಶ್ರುತಿ

ದೋಷಿ ನ್ಯಾಯಾಪೇತ ಶ್ರುತಿಗಳಿಂದ

ಈಸೇಸು ವಿರೋಧವು ಹರಿ ವಾಚ್ಯತ್ವದಲ್ಲಿ

ಸೂಸಿ ಬಂದರು ವೇದವ್ಯಾಸದೇವಾ

ಘಾಸಿ ಇಲ್ಲದಂತೆ ಪ್ರಬಲ ಬಾಧಕ ಪೇಳಿ

ಘಾಸಿಯ ಬಿಡಿಸಿದ ವಿರೋಧವ 

ಈ ಸೊಲ್ಲು ಪುಶಿಯಲ್ಲ ವೇದವಚನ ಸಿದ್ಧ

ಲೇಶ ಸಂದೇಹವಗೊಳಸಲ್ಲದು

ತಾಸು ತಾಸಿಗೆ ಇದನೆ ಸ್ಮರಿಸಿ ಅಧಿಕಾರಿಗಳು

ದೋಷರಹಿತ ಜ್ಞಾನಾನಂದಪೂರ್ಣ

ಶ್ರೀಶನೊಬ್ಬನೆ ಎಂದು ತಿಳಿದು ಪಾಡಿರೊ ನಿತ್ಯ

ಈಶ ಪ್ರಾಣೇಶವಿಟ್ಠಲ ನೋಳ್ಪ ಕರುಣದಿ ॥ 3 ॥ 


 ಅಟ್ಟತಾಳ 


ಸ್ವರ್ಗಾದಿಗಳಲ್ಲಿ ಗತಿ ಅಗತಿ ಮುಖ್ಯ

ದುರ್ಗಮ ದುಃಖಗಳ ತಿಳಿದು ನಿರ್ವೇದದಿ

ಭಾರ್ಗವಿರಮಣನ ಅತಿಶಯ ಮಹಿಮೆಗಳ

ನಿರ್ಗತದಲಿ ತಿಳಿದು ಹರುಷದಿ ತನು ಉಬ್ಬಿ

ನಿರ್ಗಮವಿಲ್ಲದ ಭಕುತಿ ಸಂಪಾದಿಸಿ

ದುರ್ಗತಿ ಮಾರ್ಗವ ದೂರದಿ ಬಿಟ್ಟಪ -

ವರ್ಗಪ್ರದಾ ತನ್ನ ಯೋಗ್ಯತೆಯನುಸರಿಸಿ

ನಿರ್ಗಮಿಸದಲೆ ಧೇನಿಸಿದರೆ ಕರುಣಾಬ್ಧಿ

ಸರ್ಗದಿ ವಿಮಲ ತನ್ನಪರೋಕ್ಷ

ಮಾರ್ಗವನೀವನು ಮಿಗೆ ಕಡಿಮೆ ಆಗದೆ

ಸ್ವರ್ಗಾಪವರ್ಗದಿ ಪ್ರಾಣೇಶವಿಟ್ಠಲ ವಾ -

ಲಗೈಸಿಕೊಂಬನು ಕರುಣಾದಿಂದೀ ಬಗೆ ॥ 4 ॥ 


 ಆದಿತಾಳ 


ಈ ತರುವಾಯದಿ ಅಖಿಳ ಜನರಕರ್ಮ

ವ್ರಾತವ ಕಳೆವನು ವಧುನವ ಮೊನೆ ಮಾಡಿ

ಈ ತರುಣೀಶನು ಸಕಲ ಜೀವರದೇಹ

ಘಾತ ವಿಕ್ರಾಂತಿ ಭೇದದಿ ಅರ್ಚಿರಾದಿ

ನೀತಮಾರ್ಗದಿಂದ ನೀರಜಭವನಿಂದ

ಪ್ರೀತಿಯಿಂದಲಿ ತನ್ನ ಸೇರಿಸಿಕೊಂಬನು

ವೀತಲಿಂಗರ ಮಾಡಿ ವಿಧಿಮುಖರೆಲ್ಲರ

ಈ ತರುವಾಯ ದಿನಭುಂಜಿಸಿರಭೋಗ

ಜಾತವ ಕೊಡುತಲಿ ಜನನ ಮರಣನೀಗೆ

ವಾತಜನಕ ನಮ್ಮ ಪ್ರಾಣೇಶವಿಟ್ಠಲ 

ಈ ತೆರದಲಿ ಜೀವಜಾತರ ಪಾಲಿಪಾ ॥ 5 ॥ 


 ಜತೆ 


ದೋಷರಹಿತ ಗುಣಪೂರ್ಣನೆಂದರಿದರೆ

ವಾಸುದೇವ ವೊಲಿವ ಪ್ರಾಣೇಶವಿಟ್ಠಲ ॥

******