Showing posts with label ಭಾನುಕೋಟಿ ತೇಜ ನಿನ್ನ ಹುಡುಕುವ ಮಾನಿನಿಯರಿಗೆ gopalakrishna BHAANUKOTI TEJA NINNA HUDUKUVA MAANINIYARIGE. Show all posts
Showing posts with label ಭಾನುಕೋಟಿ ತೇಜ ನಿನ್ನ ಹುಡುಕುವ ಮಾನಿನಿಯರಿಗೆ gopalakrishna BHAANUKOTI TEJA NINNA HUDUKUVA MAANINIYARIGE. Show all posts

Friday 10 December 2021

ಭಾನುಕೋಟಿ ತೇಜ ನಿನ್ನ ಹುಡುಕುವ ಮಾನಿನಿಯರಿಗೆ ankita gopalakrishna BHAANUKOTI TEJA NINNA HUDUKUVA MAANINIYARIGE


 

ಬಾನುಕೋಟಿ ತೇಜ ನಿನ್ನ ಹುಡುಕುವ

ಮಾನಿನಿಯರಿಗೆ ನೀ ಕಾಣದಿರುವುದಿದೂ

ಏನು ತುಂಟತನಾ, ಗೇೂಪಾಲಕ್ರಷ್ಣ

ಇದೇನು ತುಂಟತನಾ....

‌‌‌‌‌‌‌‌‌‌‌‌ ||ಬಾನುಕೋಟಿ||


ಸಣ್ಣ ಹುಡುಗರಿಗೆ ಹಣ್ಣು ಕೊಡುವೆನೆಂದು

ಬಣ್ಣಿಸಿ ಕರೆಯುತ ಕಣ್ಣುಗಳಿಗೆ ||ಸಣ್ಣ||

ಪುಡಿ ಮಣ್ಣು ಚೆಲ್ಲಿ ,ಮುಂದೋಡಿ ನಗುತ

ಹೊಸ ಬೆಣ್ಣೆ ಪಾಲು ಮೊಸರುಣ್ಣುತಿರುವುದಿದು

ಏನು ತುಂಟತನಾ ಗೋಪಾಲಕ್ರಷ್ಣ

ಇದೇನು ತುಂಟತನಾ...


ಪಾಲ ಕೊಟ್ಟ ಪೂತನಿಯ ಕೊಂದೆ

ಬಿರುಗಾಳಿ ಬೀಸೆ ಭೂತನ ಬಲಿಗೈದೆ

||ಪಾಲ||

ಗೂಳಿಯೊಡನೆ ಗುದ್ದಾಡಿ ಗೆಲಿದೆ ,ನಿನ್ನ

ಮಾವ ಕಂಸನ ಶಿರವ ತರಿವುದಿದು

ಏನು ತುಂಟತನಾ ಗೋಪಾಲಕ್ರಷ್ಣ

ಇದೇನು ತುಂಟತನಾ...


ಅನ್ಯ ಕನ್ಯೆಯರ ಕೈಯ ಪಿಡಿದು

ಕಣ್ಸನ್ನೆ ಮಾಡಿ ,ಮಂತ್ರಾಕ್ಷತೆ ಜಲವನು

‌‌‌‌‌ ||ಅನ್ಯ||

ಕುನ್ನಿ ಹುಡುಗರಿಂದರ್ಪಣೆ ಗೈಯಿಸಿ

ಇವಳೆನ್ನ ಪತ್ನಿ ಎಂದ್ಹೇಳುತ್ತಿರುವುದಿದು

ಏನು ತುಂಟತನಾ ಗೋಪಾಲಕ್ರಷ್ಣ

ಇದೇನು ತುಂಟತನಾ...


ಕಡು ಕಾಳಿಂಗನ ಮಡುವಿನೊಳಗಿಳಿದು

ಹೆಡೆಯ ಮೇಲೆ ನಿನ್ನಡಿಗಳನಿಡುತಲಿ

||ಕಡು||

ಗುಡುಗುಡುಗುಟ್ಟಿಸಿ ಶಿಕ್ಷಿಸಿ ಸರ್ಪನ

ಎಡಗೈಯಿಂದ ಪೆಡೆ ಎಳೆದಾಡುವುದಿದು

ಏನು ತುಂಟತನಾ ಗೋಪಾಲಕ್ರಷ್ಣ

ಇದೇನು ತುಂಟತನಾ....


ಸುರಗೋಪಾಲರು ನರಹರಿವಿಠ್ಠಲನೆ

ಪರದೇವತೆಯೆಂದು ಹರಕೆಯ ಸಲ್ಲಿಸಲು

‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌ ||ಸುರ||

ಕುರು ಭೂತನು ಕೋಪದಿ ಮಳೆಗರೆಯಲು

ಕಿರು ಬೆರಳಿನಿಂದ ಗಿರಿಯನೆತ್ತುವುದಿದು

ಏನು ತುಂಟತನಾ ಗೋಪಾಲಕ್ರಷ್ಣ

ಇದೇನು ತುಂಟತನಾ....

||ಬಾನುಕೋಟಿ||

****