Showing posts with label ವಶವಲ್ಲ ವರ್ಣಿಸಲು ಸುಶೀಲೇಂದ್ರತೀರ್ಥರ shyamasundara susheelendra teertha stutih. Show all posts
Showing posts with label ವಶವಲ್ಲ ವರ್ಣಿಸಲು ಸುಶೀಲೇಂದ್ರತೀರ್ಥರ shyamasundara susheelendra teertha stutih. Show all posts

Wednesday 1 September 2021

ವಶವಲ್ಲ ವರ್ಣಿಸಲು ಸುಶೀಲೇಂದ್ರತೀರ್ಥರ ankita shyamasundara susheelendra teertha stutih

..

ವಶವಲ್ಲ ವರ್ಣಿಸಲು ಸುಶೀಲೇಂದ್ರತೀರ್ಥರ

ಅಸದೃಶಮಹಿಮೆಯನು ಪ


ಬಿಸಜಸಖ ಕಿರಣ ತರಂಗ ವಸುಧೀತಳದೊಳು ಇವರ

ಸುಶಿತ ಸತ್ಕೀರ್ತಿಯ ಪಸರಿಸಿರುವುದು ಘನ್ನ ಅ.ಪ


ಭಕುತಿಪೂರ್ವಕವಾಗಿ ಸತಲಕ್ಷೇತ್ರವ ಸಂಚರಿಸಿ |

ನಿಖಿಲ ಭೂದೇವಗಣಕೆ | ವಿಖಿನಾರ್ಚಿನ ಮೂಲ ಲಕುಮೀಶ

ದರುಶನದಿ | ಸುಖವಿತ್ತು ಪಾಲಿಸಿದ ಅಕಳಂಕಮಹಿಮ 1


ಭಯ ಭಕುತಿಯಲಿವರ ಸೇವಿಸುವ ನರರಿಗೆ ಆವಾವ

ಭಯವಿಲ್ಲವೋ | ಗೋವತ್ಸನ್ಯಾಯದಲಿ ತಾವು

ಬೆಂಬಲರಾಗಿ | ಭೂವರಜನದಿ ವಾಸರಿವರಿಗೆ ಜಯವ 2


ಈ ಯತಿಯೊಲುಮೆಯೇ ರಾಯರೋಲಿಮೆಯೋ ಕೇಳೋ

ರಾಯರೊಲಿಯಲು ಗುರುವಾಯು ವಲಿವಾ | ವಾಯು

ವಲಿದಾ ಮಾತ್ರದಿ | ಕಾಯಜ ಜನಕ

ಯಮರಾಯನಂಬಿಸಿ ಬಿಡಿಸಿ ಕಾಯುವನು 3


ಸು ವಿನಲು ಸುಜ್ಞಾನ | ಶೀ ಎನಲು ಶೀಲತ್ವ |

ಲ ಯೆನಲು ಲಯದೂರವೋ | ಕಾಯ ಶುದ್ಧಿಯಲಿ

ಇಂದ್ರಾ ಎಂದುಚ್ಚರಿಸಲಾ ಇಂದ್ರಲೋಕ ಸುಖವೊ ನಿಜವೋ 4


ವೃಂದಾರ ಕಾಂಶಜರು | ಸಂದೇಹ ವಿಲ್ಲಿವರ ವೃಂದಾ

ಮಂದಾಕಿನಿಯೊಳಗೆ ಮಿಂದ ಫಲಸಂಪ್ರಾಪ್ತಿ

ಇಂದಿರಾಪತಿ ಶಾಮಸುಂದರನ ಕರಪಿಡಿವ 5

***