kruti by ಲಕ್ಷ್ಮೀನಾರಯಣರಾಯರು Lakshminarayanaru
ಧ್ಯಾನವ ಕೊಡು ಹರಿಯೆ | ನಿರಂತರ
ಧ್ಯಾನವ ಕೊಡು ಹರಿಯೆ ಪ
ನೀನೆ ಗತಿಯೆಂದಾನುಪೂರ್ವಕ
ಧ್ಯಾನ ಮಾಳ್ವರ ಜನ್ಮಕರ್ಮಗ
ಳೇನು ನೋಡದೆ ಪೊರೆವೆ ನಿನ್ನ
ಸುನಾಮವೆ ಸುರಧೇನುವೆಂದು ಅ.ಪ.
ನಿನ್ನ ನಾಮವ ನೆನೆದು | ಅಜಾಮಿಳನು
ಧನ್ಯನು ತಾನಾದನು ಈ ಭುವನದಿ
ತನ್ನ ದೇಹಾತುರದೊಳನ್ಯರ
ಬನ್ನ ಬಿಡಿಸುತಲಿದ್ದ ಖಳನು
ನಿನ್ನ ನಾಮಸ್ಮರಣೆ ಮಾತ್ರದಿ
ಘನ್ನ ಮುನಿಪತಿ ಎನ್ನಿಸಿದನು 1
ದುರುಳ ದುಶ್ಯಾಸನನು | ಸಭೆಯೊಳಗಂದು
ತರಳೆ ದ್ರೌಪದಿದೇವಿಯ ಸೆರಗನ್ನು ಸೆಳೆಯೆ
ಮುರಹರನೆ ಹಾ ಕೃಷ್ಣ ದ್ವಾರಕಾ-
ಪುರನಿಲಯ ಪರಮಾತ್ಮ ಭಕ್ತರ
ಸುರತರುವೆ ಎಲ್ಲಿರುವೆ ಏತಕೆ
ಮರೆವೆ ಎನ್ನುತ ಮೊರೆಯೆ ಪೊರೆದೆಯೊ 2
ನರಕ ಕೂಪದೊಳು ಬಿದ್ದು | ಏಳುತ್ತ ಮುಳುಗುತ
ಪರಿಪರಿ ಭಾಷೆಯಲಿ ಮುಂದೋರದೆ
ಹೊರಳುತ್ಹೊರಳುತ ಮರುಕಗೊಳುತ
ಹರಿಹರಿ ನಾರಾಯಣೆನ್ನಲು
ಸುರಲೋಕವನ್ನಿತ್ತು ಸಲಹಿದೆ
ವರದ ಲಕ್ಷ್ಮೀಕಾಂತ ಶಾಶ್ವತ 3
***
ರಾಗ - : ತಾಳ -
ಧ್ಯಾನವ ಕೊಡು ಹರಿಯೆ l ನಿರಂತರ
ಧ್ಯಾನವ ಕೊಡು ಹರಿಯೆ ll ಪ ll
ನೀನೆ ಗತಿಯೆಂದಾನುಪೂರ್ವಕ
ಧ್ಯಾನ ಮಾಳ್ಪರ ಜನ್ಮಕರ್ಮಗ
ಳೇನು ನೋಡದೆ ಪೊರೆವೆ ನಿನ್ನ
ಸುನಾಮವೆ ಸುರಧೇನುವೆಂದು ll ಅ ಪ ll
ನಿನ್ನ ನಾಮವ ನೆನೆದು l ಅಜಾಮಿಳನು
ಧನ್ಯನು ತಾನಾದನು ಈ ಭುವನದಿ
ತನ್ನ ದೇಹಾತುರದೊಳನ್ಯರ
ಬನ್ನ ಬಿಡಿಸುತಲಿದ್ದ ಖಳನು
ನಿನ್ನ ನಾಮಸ್ಮರಣೆ ಮಾತ್ರದಿ
ಘನ್ನ ಮುನಿಪತಿ ಎನ್ನಿಸಿದನು ll 1 ll
ದುರುಳ ದುಶ್ಶಾಸನನು l ಸಭೆಯೊಳಗಂದು
ತರಳೆ ದ್ರೌಪದಿದೇವಿಯ ಸೆರಗನ್ನು ಸೆಳೆಯೆ
ಮುರಹರನೆ ಹಾ ಕೃಷ್ಣ ದ್ವಾರಕಾ-
ಪುರನಿಲಯ ಪರಮಾತ್ಮ ಭಕ್ತರ
ಸುರತರುವೆ ಎಲ್ಲಿರುವೆ ಏತಕೆ
ಮರೆವೆ ಎನ್ನುತ ಮೊರೆಯೆ ಪೊರೆದೆಯೊ ll 2 ll
ನರಕ ಕೂಪದೊಳು ಬಿದ್ದು l ಏಳುತ್ತ ಮುಳುಗುತ
ಪರಿಪರಿ ಭಾಷೆಯಲಿ ಮುಂದೋರದೆ
ಹೊರಳುತ್ಹೊರಳುತ ಮರುಕಗೊಳುತ
ಹರಿಹರಿ ನಾರಾಯಣೆನ್ನಲು
ಸುರಲೋಕವನ್ನಿತ್ತು ಸಲಹಿದೆ
ವರದ ಲಕ್ಷ್ಮೀಕಾಂತ ಶಾಶ್ವತ ll 3 ll
ದಾಸರ ಲಕ್ಷ್ಮೀನಾರಾಯಣರ ಕೀರ್ತನೆ
ಅಂಕಿತ - ಲಕ್ಷ್ಮೀಕಾಂತ
***