Showing posts with label ಹರಿಕಥಾಮೃತಸಾರ ಸಂಧಿ 33 ankita shrida vittala ಫಲಶ್ರುತಿ ಸಂಧಿ HARIKATHAMRUTASARA SANDHI 33 PHALASHRUTI SANDHI. Show all posts
Showing posts with label ಹರಿಕಥಾಮೃತಸಾರ ಸಂಧಿ 33 ankita shrida vittala ಫಲಶ್ರುತಿ ಸಂಧಿ HARIKATHAMRUTASARA SANDHI 33 PHALASHRUTI SANDHI. Show all posts

Wednesday 27 January 2021

ಹರಿಕಥಾಮೃತಸಾರ ಸಂಧಿ 33 ankita shrida vittala ಫಲಶ್ರುತಿ ಸಂಧಿ HARIKATHAMRUTASARA SANDHI 33 PHALASHRUTI SANDHI

    


Above Audio by Mrs. Nandini Sripad


ಫಲಶ್ರುತಿ ಸಂಧಿ 33  phalashruti sandhi 

ಶ್ರೀದವಿಠ್ಠಲ ವಿರಚಿತ ಹರಿಕಥಾಮೃತಸಾರ ಸಂಧಿ 33

ರಚನೆ : ಶ್ರೀ ಕರ್ಜಗಿ ಶ್ರೀದವಿಠ್ಠಲದಾಸರು 


ಫಲಶ್ರುತಿ ಸಂಧಿ 33 - ಶ್ರೀ ಜಗನ್ನಾಥ ದಾಸಾರ್ಯರ ಪರಮ ಮುಖ್ಯಶಿಷ್ಯರಾದ ಶ್ರೀ ಶ್ರೀದವಿಠಲರು (ಕರ್ಜಿಗಿ ದಾಸರಾಯರು) ರಚಿಸಿದ ಶ್ರೀ ಫಲಶ್ರುತಿ ಸಂಧಿ


ಹರಿಕಥಾಮೃತಸಾರ ಗುರುಗಳ ಕರುಣದಿಂದಾಪನಿತು ಕೇಳುವೆ

ಪರಮ ಭಗವದ್ಭಕ್ತರು ಇದನಾದರದಿ ಕೇಳುವುದು||


ಹರಿಕಥಾಮೃತಸಾರ ಶ್ರೀಮದ್ಗುರುವರ

ಜಗನ್ನಾಥ ದಾಸರ ಕರತಲಾಮಲಕವನೆ

ಪೇಳಿದ ಸಕಲ ಸಂಧಿಗಳ

ಪರಮ ಪಂಡಿತ ಮಾನಿಗಳು

ಮತ್ಸರಿಸಲೆದೆಗಿಚ್ಚಾಗಿ ತೋರುವುದರಿಸಕರಿಗಿದು

ತೋರಿ ಪೇಳುವದಲ್ಲ ಧರೆಯೊಳಗೆ||1||


ಭಾಮಿನೀ ಷಟ್ಪದಿಯ ರೂಪದಲೀ

ಮಹಾದ್ಭುತ ಕಾವ್ಯದಾದಿಯೊಳಾ

ಮನೋಹರ ತರತರಾತ್ಮಕ ನಾಂದಿ ಪದ್ಯಗಳ

ಯಾಮಯಾಮಕೆ ಪಠಿಸುವವರ

ಸುಧಾಮಸ ಕೈಪಿಡಿಯಲೋಸುಗ

ಪ್ರೇಮದಿಂದಲಿ ಪೇಳ್ದ ಗುರು ಕಾರುಣ್ಯಕೇನೆಂಬೆ||2||


ಸಾರವೆಂದರೆ ಹರಿಕಥಾಮೃತ

ಸಾರವೆಂಬುದೆಮ್ಮ ಗುರುವರ

ಸಾರಿದಲ್ಲದೆ ತಿಳಿಯದೆನುತ ಮಹೇಂದ್ರ ನಂದನನ

ಸಾರಥಿಯ ಬಲಗೊಂಡು ಸಾರಾ

ಸಾರಗಳ ನಿರ್ಣೈಸಿ ಪೇಳ್ದನು

ಸಾರ ನಡೆವ ಮಹಾತ್ಮರಿಗೆ ಸಂಸಾರವೆಲ್ಲಿಹುದೋ||3||


ದಾಸವರ್ಯರ ಮುಖದಿ ನಿಂದು

ರಮೇಶನನು ಕೀರ್ತಿಸುವ ಮನದಭಿಲಾಷೆಯಲಿ

ವರ್ಣಾಭಿಮಾನಿಗಳೊಲಿದು ಪೇಳಿಸಿದ

ಈ ಸುಲಕ್ಷಣ ಕಾವ್ಯದೊಳಗ್ಯತಿ

ಪ್ರಾಸಗಳಿಗೆ ಪ್ರಯತ್ನವಿಲ್ಲದೆ

ಲೇಸುಲೇಸನೆ ಶ್ರಾವ್ಯ ಮಾಡುದೆ ಕುರುಹು ಕವಿಗಳಿಗೆ||4||


ಪ್ರಾಕೃತೋಕ್ತಿಗಳೆಂದು ಬರಿದೆ

ಮಹಾಕೃತಘ್ನರು ಜರಿವರಲ್ಲದೆ

ಸ್ವೀಕೃತವ ಮಾಡದಲೆ ಬಿಡುವರೇ ಸುಜನರಾದವರು

ಶ್ರೀಕೃತೀಪತಿ ಅಮಲ ಗುಣಗಳು

ಈ ಕೃತಿಯೊಳುoಟಾದ ಬಳಿಕ

ಪ್ರಾಕೃತವೆ ಸಂಸ್ಕೃತದ ಸಡಗರವೇನು ಸುಜನರಿಗೆ||5||


ಶ್ರುತಿಗೆ ಶೋಭನಮಾಗದಡೆ

ಜಡಮತಿಗೆ ಮಂಗಳವೀಯದಡೆ

ಶ್ರುತಿಸ್ಮ್ರುತಿಗೆ ಸಮ್ಮತವಾಗದಿದ್ದಡೆ ನಮ್ಮ ಗುರುರಾಯ

ಮಥಿಸಿ ಮಧ್ವಾಗಮ ಪಯೋಬ್ಧಿಯ

ಕ್ಷಿತಿಗೆ ತೋರಿದ ಬ್ರಹ್ಮ ವಿದ್ಯಾ

ರತರಿಗೀಪ್ಸಿತ ಹರಿಕಥಾಮೃತಸಾರವೆನಿಸುವುದು||6||


ಭಕ್ತಿವಾದದಿ ಪೇಳ್ದನೆಂಬ

ಪ್ರಸಕ್ತಿ ಸಲ್ಲದು ಕಾವ್ಯದೊಳು ಪುನರುಕ್ತಿ

ಶುಷ್ಕ ಸಮಾನ ಪದ ವ್ಯತ್ಯಾಸ ಮೊದಲಾದ

ಯುಕ್ತಿ ಶಾಸ್ತ್ರ ವಿರುದ್ಧ ಶಬ್ದ

ವಿಭಕ್ತಿ ವಿಷಮಗಳಿರಲು

ಜೀವನ್ಮುಕ್ತ ಭೋಗ್ಯವಿದೆಂದು ಸಿರಿಮದನಂದ ಮೆಚ್ಚುವನೆ?||7||


ಆಶುಕವಿಕುಲ ಕಲ್ಪತರು

ದಿಗ್ದೇಶವರಿಯಲು ರಂಗನೊಲುಮೆಯ

ದಾಸಕೂಟಸ್ಥರಿಗೆರಗಿ ನಾ ಬೇಡಿಕೊಂಬೆನು

ಈ ಸುಲಕ್ಷಣ ಹರಿಕಥಾಮೃತ

ಮೀಸಲರಿಯದೆ ಸಾರದೀರ್ಘ

ದ್ವೇಷಿಗಳಿಗೆರೆಯದಲೆ ಸಲಿಸುವದೆನ್ನ ಬಿನ್ನಪವ||8||


ಪ್ರಾಸಗಳ ಪೊಂದಿಸದೆ ಶಬ್ದ

ಶ್ಲೇಷಗಳ ಶೋಧಿಸದೆ ದೀರ್ಘ

ಹ್ರಾಸಗಳ ಸಲ್ಲಿಸದೆ ಷಟ್ಪದಿಗತಿಗೆ ನಿಲ್ಲಿಸದೆ

ದೂಷಕರು ದಿನದಿನದಿ ಮಾಡುವ

ದೂಷಣೆಯೆ ಭೂಷಣಗಳೆಂದುಪ

ದೇಶಗಮ್ಯವು ಹರಿಕಥಾಮೃತಸಾರ ಸಾಧ್ಯರಿಗೆ||9||


ಅಶ್ರುತಾಗಮ ಇದರ ಭಾವ

ಪರಿಶ್ರಮವು ಬಲ್ಲವರಿಗಾನಂದಾಶ್ರುಗಳ

ಮಳೆಗರೆಸಿ ಮರೆಸುವ ಚಮತ್ಕ್ರುತಿಯ

ಮಿಶ್ರರಿಗೆ ಮರೆ ಮಾಡಿ ದಿವಿಜರ

ಜಸ್ರದಲಿ ಕಾಯ್ದಿಪ್ಪರಿದರೊಳು

ಪಃಶ್ರುತಿಗಳೈತಪ್ಪವೇ ನಿಜ ಭಕ್ತಿ ಉಳ್ಳವರಿಗೆ||10||


ನಿಚ್ಚ ನಿಜಜನ ನೆಚ್ಚ ನೆಲೆಗೊಂಡಚ್ಚ

ಭಾಗ್ಯವು ಪೆಚ್ಚ ಪೇರ್ಮೆಯು

ಕೆಚ್ಚ ಕೇಳ್ವನು ಮೆಚ್ಚ ಮಲಮರ ಮುಚ್ಚಲೆಂದೆನುತ

ಉಚ್ಚವಿಗಳಿಗೆ ಪೊಚ್ಚ ಪೊಸೆದನ

ಲುಚ್ಚರಿಸದೀ ಸಚ್ಚರಿತ್ರೆಯನುಚ್ಚರಿಸೆ

ಸಿರಿವತ್ಸ ಲಾಂಛನ ಮೆಚ್ಚಲೇನರಿದು||11||


ಸಾಧು ಸಭೆಯೊಳು ಮೆರೆಯೆ ತತ್ವ

ಸುಬೋಧ ವೃಷ್ಟಿಯಗರೆಯೆ ಕಾಮಕ್ರೋಧ

ಬೀಜವು ಹುರಿಯೆ ಖಳರದೆ ಬಿರಿಯೆ ಕರಕರಿಯ

ವಾದಿಗಳ ಪಲ್ಮುರಿಯೆ ಪರಮ

ವಿನೋದಿಗಳ ಮೈಮರೆಯಲೋಸುಗ

ಹಾದಿತೋರಿದ ಹಿರಿಯ ಬಹುಚಾತುರ್ಯ ಹೊಸಪರಿಯ||12||


ವ್ಯಾಸತೀರ್ಥರೊಲವೆಯೊ ವಿಠಲೋಪಾಸಕ

ಪ್ರಭುವರ್ಯ ಪುರಂದರದಾಸರಾಯರ

ದಯವೋ ತಿಳಿಯದು ಓದಿ ಕೇಳದಲೆ

ಕೇಶವನ ಗುಣಮಣಿಗಳನು

ಪ್ರಾಣೇಶಗರ್ಪಿಸಿ ವಾದಿರಾಜರ

ಕೋಶಕೊಪ್ಪುವ ಹರಿಕಥಾಮೃತಸಾರ ಪೇಳಿದರು||13||


ಹರಿಕಥಾಮೃತಸಾರ ನವರಸಭರಿತ

ಬಹು ಗಂಭೀರ ರತ್ನಾಕರ

ರುಚಿರ ಶೃಂಗಾರ ಸಾಲಂಕಾರ ವಿಸ್ತಾರ

ಸರಸ ನರ ಕಂಠೀರವಾಖ್ಯಾರ್ಯರ

ಜನಿತ ಸುಕುಮಾರ ಸಾತ್ವೀಕರಿಗೆ

ಪರಮೋದಾರ ಮಾಡಿದ ಮರೆಯದುಪಕಾರ||14||


ಅವನಿಯೊಳು ಜ್ಯೋತಿಷ್ಮತೀ ತೈಲವನು

ಪಾಮರನುಂಡು ಜೀರ್ಣಿಸಲವನೆ

ಪಂಡಿತನೋಕರಿಪವಿವೇಕಿಯಪ್ಪಂತೆ

ಶ್ರವಣ ಮಂಗಳ ಹರಿಕಥಾಮೃತ

ಸವಿದು ನಿರ್ಗುಣಸಾರ ಮಕ್ಕಿಸಲವ

ನಿಪುಣನೈ ಯೋಗ್ಯಗಲ್ಲದೆ ದಕ್ಕಲರಿಯದಿದು||15||


ಅಕ್ಕರದೊಳೀ ಕಾವ್ಯದೊಳೊಂದಕ್ಕರವ

ಬರೆದೋದಿದವ ದೇವರ್ಕಳಿಂ

ದುಸ್ತಜ್ಯನೆನಿಸಿ ಧರ್ಮಾರ್ಥಕಾಮಗಳ

ಲೆಕ್ಕಿಸದೆ ಲೋಕೈಕನಾಥನ

ಭಕ್ತಿ ಭಾಗ್ಯವ ಪಡೆವ ಜೀವನ್ಮುಕ್ತಗಲ್ಲದೆ

ಹರಿಕಥಾಮೃತಸಾರ ಸೊಗಸುವದೆ||16||


ವತ್ತಿಬಹ ವಿಘ್ನಗಳ ತಡೆದಪ

ಮೃತ್ಯುವಿಗೆ ಮರೆಮಾಡಿ ಕಾಲನ

ಭೃತ್ಯರಿಗೆ ಭೀಕರವ ಪುಟ್ಟಿಸಿ ಸಕಲ ಸಿದ್ಧಿಗಳ

ಎತ್ತಿಗೊಳ್ಳಿಸಿ ವನರುಹೇಕ್ಷಣ

ನ್ರುತ್ಯಮಾಡುವವನ ಮನೆಯೊಳು

ನಿತ್ಯಮಂಗಳ ಹರಿಕಥಾಮೃತಸಾರ ಪಠಿಸುವರ||17||


ಆಯುರಾರೋಗ್ಯೈಶ್ವರ್ಯ ಮಾಹಾಯಶೋ

ಧೈರ್ಯ ಬಲ ಸಮ ಸಹಾಯ

ಶೌರ್ಯೋದಾರ್ಯ ಗುಣಗಾಂಭೀರ್ಯ ಮೊದಲಾದ

ಆಯುತಗಳುಂಟಾಗಲೊಂದಧ್ಯಾಯ

ಪಠಿಸಿದ ಮಾತ್ರದಿಂ ಶ್ರವಣೀಯವಲ್ಲದೆ

ಹರಿಕಥಾಮೃತಸಾರ ಸುಜನರಿಗೆ||18||


ಕುರುಡ ಕಂಗಳ ಪಡೆವ ಬಧಿರನಿಗೆರೆಡು

ಕಿವಿ ಕೇಳ್ಬಹವು ಬೆಳೆಯದ

ಮುರುಡ ಮದನಾಕೃತಿಯ ತಾಳ್ವನು ಕೇಳ್ದ ಮಾತ್ರದಲಿ

ಬರಡು ಹೈನಾಗುವದು ಪೇಳ್ದರೆ

ಕೊರಡು ಪಲ್ಲೈಸುವದು ಪ್ರತಿದಿನ

ಹುರುಡಿಲಾದರು ಹರಿಕಥಾಮೃತಸಾರವನು ಪಠಿಸೆ||19||


ನಿರ್ಜರ ತರಂಗಿಣಿಯೊಳನುದಿನ

ಮಜ್ಜನಾದಿ ಸಮಸ್ತ ಕರ್ಮ

ವಿವರ್ಜಿತಾಶಾಪಾಶದಿಂದಲಿ ಮಾಡಿದಧಿಕ ಫಲ

ಹೆಜ್ಜೆಹೆಜ್ಜೆಗೆ ದೊರೆಯದಿಪ್ಪವೆ

ಸಜ್ಜನರು ಶಿರತೂಗುವಂದದಿ


ಘರ್ಜಿಸುತಲೀ ಹರಿಕಥಾಮೃತಸಾರ ಪಠಿಸುವರ||20||


ಸತಿಯರಿಗೆ ಪತಿಭಕುತಿ ಪತ್ನೀವ್ರತ

ಪುರುಷರಿಗೆ ಹರುಷ ನೆಲೆಗೊಂಡತಿ

ಮನೋಹರರಾಗಿ ಗುರು ಹಿರಿಯರಿಗೆ ಜಗದೊಳಗೆ

ಸತತ ಮಂಗಳವೀವ ಬಹು

ಸುಕೃತಿಗಳೆನಿಸುತ ಸುಲಭದಿಂ ಸದ್ಗತಿಯ

ಪಡೆವರು ಹರಿಕಥಾಮೃತಸಾರವನು ಪಠಿಸೆ||21||


ಎಂತು ಬಣ್ಣಿಸಲೆನ್ನಳವೆ

ಭಗವಂತನಮಲ ಗುಣಾನುವಾದಗಳೆಂತು

ಪರಿಯಲಿ ಪೂರ್ಣಬೋಧರ ಮತವ ಪೊಂದಿದರ

ಚಿಂತನಗೆ ಬಪ್ಪಂತೆ ಬಹು ದೃಷ್ಟಾಂತ

ಪೂರ್ವಕವಾಗಿ ಪೇಳ್ದ ಮಹಂತರಿಗೆ

ನರರೆಂದು ಬಗೆವರೆ ನಿರಯ ಭಾಗಿಗಳು||22||


ಮಣಿಖಚಿತ ಹರಿವಾಣದೊಳು ವಾರಣ

ಸುಭೋಜ್ಯ ಪದಾರ್ಥ ಕೃಷ್ಣಾರ್ಪಣವೆನುತ

ಪಸಿದವರಿಗೋಸುಗ ನೀಡುವಂದದಲಿ

ಪ್ರಣತರಿಗೆ ಪೊಂಗನಡ ವರ

ವಾನ್ಗ್ಮಣಿಗಳಿಂ ವಿರಚಿಸಿದ ಕೃತಿಯೊಳುಣಿಸಿ

ನೋಡುವ ಹರಿಕಥಾಮೃತಸಾರ ವನುದಾರ||23||


ದುಷ್ಟರೆನ್ನದೆ ದುರ್ವಿಷಯದಿಂ

ಪುಷ್ಟರೆನ್ನದೆ ಪೂತಕರ್ಮ

ಭ್ರಷ್ಟರೆನ್ನದೆ ಶ್ರೀದವಿಠಲ ವೇಣುಗೋಪಾಲ

ಕೃಷ್ಣ ಕೈಪಿಡಿವನು ಸುಸತ್ಯ

ವಿಶಿಷ್ಟ ದಾಸತ್ವವನು ಪಾಲಿಸಿ

ನಿಷ್ಠೆಯಿಂದಲಿ ಹರಿಕಥಾಮೃತಸಾರ ಪಠಿಸುವರ||24||

*****

kruti by Srida Vittala Dasaru  Karjagi Dasappa

ಹರಿಕಥಾಮೃತಸಾರ ಫಲಸ್ತುತಿ (33ನೆಯ ಸಂಧಿ)

ಹರಿಕಥಾಮೃತಸಾರ ಶ್ರೀಮ-

ದ್ಗುರುವರ ಜಗನ್ನಾಥದಾಸರ

ಕರತಳಾಮಲಕವೆನೆ ಪೇಳಿದ ಸಕಲ ಸಂಧಿಗಳ

ಪರಮಪಂಡಿತಾಭಿಮಾನಿಗಳು ಮ-

ತ್ಸರಿಸಲೆದೆಗಿಚ್ಚಾಗಿ ತೋರುವು-

ದರಸಿಕರಿಗಿದು ತೋರಿ ಪೇಳುವುದಲ್ಲ ಧರೆಯೊಳಗೆ 1

ಭಾಮಿನಿಯ ಷಟ್ಪದಿಯ ರೂಪದ-

ಲೀ ಮಹಾದ್ಭುತ ಕಾವ್ಯದಾದಿಯೊ-

ಳಾ ಮನೋಹರ ತರತಮಾತ್ಮಕ ನಾಂದಿಪದ್ಯಗಳ

ಯಾಮಯಾಮಕೆ ಪಠಿಸುವರ ಸು-

ಧಾಮಸಖ ಕೈಪಿಡಿಯಲೋಸುಗ

ಪ್ರೇಮದಿಂದಲಿ ಪೇಳ್ದ ಗುರುಕಾರುಣ್ಯಕೇನೆಂಬೆ 2

ಸಾರವೆಂದರೆ ಹರಿಕಥಾಮೃತ

ಸಾರವೆಂಬುವುದೆಮ್ಮ ಗುರುವರ

ಸಾರಿದಲ್ಲದೆ ತಿಳಿಯೆಂದೆನುತ ಮಹೇಂದ್ರನಂದನನ

ಸಾರಥಿಯ ಬಲಗೊಂಡು ಸಾರಾ-

ಸಾರಗಳ ನಿರ್ಣೈಸಿ ಪೇಳ್ದನು

ಸಾರ ನಡೆವ ಮಹಾತ್ಮರಿಗೆ ಸಂಸಾರವೆಲ್ಲಿಹುದೊ 3

ದಾಸವರ್ಯರ ಮುಖದಿ ನಿಂದು ರ-

ಮೇಶನನು ಕೀರ್ತಿಸುವ ಮನದಭಿ-

ಲಾಶೆಯಲಿ ವರ್ಣಾಭಿಮಾನಿಗಳೊಲಿದು ಪೇಳಿಸಿದ

ಈ ಸುಲಕ್ಷಣ ಕಾವ್ಯದೋಳ್ ಯತಿ

ಪ್ರಾಸಗಳಿಗೆ ಪ್ರಯತ್ನವಿಲ್ಲದೆ

ಲೇಸುಲೇಸೆನೆ ಶ್ರಾವ್ಯಮಾದುದೆ ಕುರುಹು ಕವಿಗಳಿಗೆ 4

ಪ್ರಾಕೃತೋಕ್ತಿಗಳೆಂದು ಬರಿದೆ ಮ-

ಹಾಕೃತಘ್ನರು ಜರಿವರಲ್ಲದೆ

ಸ್ವೀಕೃತವ ಮಾಡದಲೆ ಬಿಡುವರೆ ಸುಜನರಾದವರು

ಶ್ರೀಕೃತೀಪತಿಯಮಲಗುಣಗಳು

ಈ ಕೃತಿಯೊಳುಂಟಾದ ಬಳಿಕ

ಪ್ರಾಕೃತವೆ ಸಂಸ್ಕøತದ ಸಡಗರವೇನು ಸುಗುಣರಿಗೆ 5

ಶ್ರುತಿಗೆ ಶೋಭನವಾಗದೊಡೆ ಜಡ

ಮತಿಗೆ ಮಂಗಳವೀಯದೊಡೆ ಶ್ರುತಿ

ಸ್ಮøತಿಗೆ ಸಮ್ಮತವಲದಿದ್ದೊಡೆ ನಮ್ಮ ಗುರುರಾಯ

ಮಥಿಸಿ ಮಧ್ವಾಗಮಪಯೋಬ್ಧಿಯ

ಕ್ಷಿತಿಗೆ ತೋರಿಸಿ ಬ್ರಹ್ಮವಿದ್ಯಾ

ರತರಿಗೀಪ್ಸಿತ ಹರಿಕಥಾಮೃತಸಾರ ಸೊಗಸುವುದು 6

ಭಕ್ತಿವಾದದಿ ಪೇಳ್ದನೆಂಬ ಪ್ರ-

ಸಕ್ತಿ ಸಲ್ಲದು ಕಾವ್ಯದೊಳು ಪುನ-

ರುಕ್ತಿ ಶುಷ್ಕ ಸಮಾಸ ಪದವ್ಯತ್ಯಾಸ ಮೊದಲಾದ

ಯುಕ್ತಿ ಶಾಸ್ತ್ರ ವಿರುದ್ಧ ಶಬ್ದ ವಿ-

ಭಕ್ತಿ ವಿಷಮಗಳಿರಲು ಜೀವ-

ನ್ಮುಕ್ತಿಯೋಗ್ಯವಿದೆಂದು ಸಿರಿಮದನಂತ ಮೆಚ್ಚುವನೆ 7

ಆಶುಕವಿಕುಲಕಲ್ಪತರು ದಿ-

ಗ್ದೇಶವರಿಯಲು ರಂಗನೊಲುಮೆಯ

ದಾಸಕೂಟಸ್ಥರಿಗೆರಗಿ ನಾ ಬೇಡಿಕೊಂಬುವೆನು

ಈ ಸುಲಕ್ಷಣ ಹರಿಕಥಾಮೃತ

ಮೀಸಲಳಿಯದೆ ಸಾರ ದೀರ್ಘ

ದ್ವೇಷಿಗಳಿಗೆರೆಯದಲೆ ಸಲಿಸುವುದೆನ್ನ ಬಿನ್ನಪವ 8

ಪ್ರಾಸಗಳ ಪೊಂದಿಸದೆ ಶಬ್ದ

ಶ್ಲೇಷಗಳ ಶೋಧಿಸದೆ ದೀರ್ಘ

ಹ್ರಸ್ವಗಳ ಸಲ್ಲಿಸದೆ ಷಟ್ಪದಿಗತಿಗೆ ನಿಲ್ಲಿಸದೆ

ದೂಷಕರು ದಿನದಿನದಿ ಮಾಡುವ

ದೂಷಣವೇ ಭೂಷಣವು ಎಂದುಪ-

ದೇಶಗಮ್ಯವು ಹರಿಕಥಾಮೃತಸಾರ ಸಾಧ್ಯರಿಗೆ 9

ಅಶ್ರುತಾಗಮಭಾವ ಇದರ ಪ-

ರಿಶ್ರಮವು ಬಲ್ಲವರಿಗಾನಂ-

ದಾಶ್ರುಗಳ ಮಳೆಗರಿಸಿ ಮೈಮರೆಸುವ ಚಮತ್ಕøತಿಯ

ಮಿಶ್ರರಿಗೆ ಮರೆಮಾಡಿ ದಿತಿಜರ

ಶಸ್ತ್ರದಲಿ ಕಾಯದಿಪ್ಪರಿದರೊಳು-

ಪಶ್ರುತಿಗಳು ತಪ್ಪುವುವೇ ನಿಜ ಭಕ್ತಿಯುಳ್ಳರಿಗೆ 10

ನಿಚ್ಚ ನಿಜಜನ ಮೆಚ್ಚ ಗೋಧನ

ಅಚ್ಚ ಭಾಗ್ಯವು ಪೆಚ್ಚೆ ಪೇರ್ಮೆಯು

ಕೆಚ್ಚ ಕೇಳ್ವನು ಮೆಚ್ಚ ಮಲಮನ ಮುಚ್ಚಲೆಂದೆನುತ

ಉಚ್ಚವಿಗಳಿಗೆ ಪೊಚ್ಚ ಪೊಸದೆನ-

ಲುಚ್ಚರಿಸಿದೀ ಸಚ್ಚರಿತ್ರೆಯ

ನುಚ್ಚರಿಸೆ ಸಿರಿವತ್ಸಲಾಂಛನ ಮೆಚ್ಚಲೇನರಿದು 11

ಸಾಧು ಸಭೆಯೊಳು ಮೆರೆಯೆ ತತ್ವಸು-

ಬೋಧವೃಷ್ಟಿಯ ಗರೆಯೆ ಕಾಮ

ಕ್ರೋಧ ಬೀಜವ ಹುರಿಯೆ ಖಳರೆದೆ ಬಿರಿಯೆ ಕರಕರಿಯ

ವಾದಿಗಳ ಪಲ್ಮುರಿಯೆ ಪರಮವಿ-

ನೋದಿಗಳ ಮೈ ಮರೆಯಲೋಸುಗ

ಹಾದಿ ತೋರಿದ ಹಿರಿಯ ಬಹು ಚಾತುರಿಯ ಹೊಸ ಪರಿಯ 12

ವ್ಯಾಸತೀರ್ಥರ ಒಲವೊ ವಿಠಲೋ-

ಪಾಸಕ ಪ್ರಭುವರ್ಯ ಪುರಂದರ

ದಾಸರಾಯರ ದಯವೊ ತಿಳಿಯದು ಓದಿ ಕೇಳದಲೆ

ಕೇಶವನ ಗುಣಮಣಿಗಳನು ಪ್ರಾ-

ಣೇಶಗರ್ಪಿಸಿ ವಾದಿರಾಜರ

ಕೋಶಕೊಪ್ಪುವ ಹರಿಕಥಾಮೃತಸಾರ ಕೇಳಿದರು 13

ಹರಿಕಥಾಮೃತಸಾರ ನವರಸ

ಭರಿತ ಬಹುಗಂಭೀರ ರತ್ನಾ-

ಕರ ರುಚಿರ ಶೃಂಗಾರ ಸಾಲಂಕಾರ ವಿಸ್ತಾರ

ಸರಸ ನರಕಂಠೀರವಾಚಾ-

ರ್ಯರ ಜನಿತ ಸುಕುಮಾರ ಸಾತ್ವೀ-

ಕರಿಗೆ ಪರಮೋದಾರ ಮಾಡಿದ ಮರೆಯದುಪಕಾರ 14

ಅವನಿಯೊಳು ಜ್ಯೋತಿಷ್ಮತಿಯ ತೈ-

ಲವನು ಪಾಮರನುಂಡು ಜೀರ್ಣಿಸ-

ಲವನೆ ಪಂಡಿತನೋಕರಿಪವಿವೇಕಿಯಪ್ಪಂತೆ

ಶ್ರವಣಮಂಗಳ ಹರಿಕಥಾಮೃತ

ಸವಿದು ನಿರ್ಗುಣಸಾರಮಕ್ಕಿಸ-

ಲವ ನಿಪುಣನೈ ಯೋಗ್ಯಗಲ್ಲದೆ ದಕ್ಕಲರಿಯದಿದು 15

ಅಕ್ಕರದೊಳೀ ಕಾವ್ಯದೊಳು ಒಂ-

ದಕ್ಕರವ ಬರೆದೋದಿದವ ದೇ-

ವರ್ಕಳಿಂ ದುಸ್ತ್ಯಜ್ಯನೆನಿಸಿ ಧರ್ಮಾರ್ಥಕಾಮಗಳ

ಲೆಕ್ಕಿಸದೆ ಲೋಕೈಕನಾಥನ

ಭಕ್ತಿಭಾಗ್ಯವ ಪಡೆದ ಜೀವ

ನ್ಮುಕ್ತಗಲ್ಲದೆ ಹರಿಕತಾಮೃತಸಾರ ಸೊಗಸುವದೆ16

ಒತ್ತಿ ಬಹ ವಿಘ್ನಗಳ ತಡೆದಪ

ಮೃತ್ಯುವಿಗೆ ಮರೆಮಾಡಿ ಕಾಲನ

ಭೃತ್ಯರಿಗೆ ಭೀಕರವ ಪುಟ್ಟಿಸಿ ಸಕಲಸಿದ್ಧಿಗಳ

ಒತ್ತಿಗೊಳಿಸಿ ವನರುಹೇಕ್ಷಣ

ನೃತ್ಯಮಾಡುವನವನ ಮನೆಯೊಳು

ನಿತ್ಯಮಂಗಳ ಹರಿಕಥಾಮೃತಸಾರ ಪಠಿಸುವರ 17

ಆಯುರಾರೋಗ್ಯೈಶ್ವರ್ಯ ಯಶ

ಧೈರ್ಯ ಬಲ ಸಮಸಹಾಯ ಶೌರ್ಯೋ

ದಾರ್ಯ ಗುಣಗಾಂಭೀರ್ಯ ಮೊದಲಾದ

ಆಯತಗಳುಂಟಾಗಲೊಂದ-

ಧ್ಯಾಯ ಪಠಿಸಿದ ಮಾತ್ರದಿಂ ಶ್ರವ-

ಣೀಯವಲ್ಲದೆ ಹರಿಕಥಾಮೃತಸಾರ ಸುಜನರಿಗೆ 18

ಕುರುಡ ಕಂಗಳ ಪಡೆವ ಬಧಿರನಿ-

ಗೆರಡುಕಿವಿ ಕೇಳ್ವಹವು ಬೆಳೆಯದ

ಮುರುಡ ಮದನಾಕೃತಿಯ ತಾಳ್ವನು ಕೇಳ್ದಮಾತ್ರದಲಿ

ಬರಡು ಹೈನಾಗುವುದು ಕೇಳ್ದರೆ

ಕೊರಡು ಪಲ್ಲವಿಸುವುದು ಪ್ರತಿದಿನ

ಹುರುಡಿಲಾದರು ಹರಿಕಥಾಮೃತಸಾರವನು ಪಠಿಸೆ 19

ನಿರ್ಜರತರಂಗಿಣಿಯೊಳನುದಿನ

ಮಜ್ಜನಾದಿ ಸಮಸ್ತ ಕರ್ಮವಿ-

ವರ್ಜಿತಾಶಾಪಾಶದಿಂದಲಿ ಮಾಡಿದಧಿಕಫಲ

ಹೆಜ್ಜೆಹೆಜ್ಜೆಗೆ ದೊರೆಯದಿಪ್ಪವೆ

ಸಜ್ಜನರು ಶಿರತೂಗುವಂದದಿ

ಘರ್ಜಿಸುತಲೀ ಹರಿಕಥಾಮೃತಸಾರ ಪಠಿಸುವರ 20

ಸತಿಯರಿಗೆ ಪತಿಭಕುತಿ ಪತ್ನಿ

ವ್ರತ ಪುರುಷರಿಗೆ ಹರಿಷ ನೆಲೆಗೊಂ-

ಡತಿಮನೋಹರರಾಗಿ ಗುರುಹಿರಿಯರಿಗೆ ಜಗದೊಳಗೆ

ಸತತ ಮಂಗಳವೀವ ಬಹು ಸು-

ಕೃತಿಗಳೆನಿಸುತ ಸುಲಭದಿಂ ಸ

ದ್ಗತಿಯು ಪಡೆವರು ಹರಿಕಥಾಶಮೃತಸಾರವನು ಪಠಿಸೆ 21

ಎಂತು ವರ್ಣಿಸಲೆನ್ನಳವೆ ಭಗ-

ವಂತನಮಲ ಗುಣಾನುವಾದಗ-

ಳೆಂತು ಪರಿಯಲಿ ಪೂರ್ಣಭೋಧರ ಮತವ ಹೊಂದಿದರ

ಚಿಂತನೆಗೆ ಬಪ್ಪಂತೆ ಬಹು ದೃ-

ಷ್ಟಾಂತಪೂರ್ವಕವಾಗಿ ಪೇಳ್ದ ಮ-

ಹಂತರಿಗೆ ನರರೆಂದು ಬಗೆವರೆ ನಿರಯಭಾಗಿಗಳು 22

ಮಣಿಖಚಿತ ಹರಿವಾಣದಲಿ ವಾ

ರಣಸುಭೋಜ್ಯ ಪದಾರ್ಥ ಕೃಷ್ಣಾ

ರ್ಪಣವೆನುತರ್ಪಿಸಿದವರಿಗೋಸುಗ ನೀಡುವಂದದಲಿ

ಪ್ರಣತರಿಗೆ ಪೊಂಗನಡ ವರವಾ

ಙ್ಮಣಿಗಳಿಂ ವಿರಚಿಸಿದ ಶ್ರುತಿಯೊ

ಳುಣಿಸಿ ನೋಡುವ ಹರಿಕಥಾಮೃತಸಾರವನುದಾರ 23

ದುಷ್ಟರೆನ್ನದೆ ದುರ್ವಿಷಯದಿಂ

ಪುಷ್ಟರೆನ್ನದೆ ಪೂತಕರ್ಮ

ಭ್ರಷ್ಟರೆನ್ನದೆ ಶ್ರೀದವಿಠ್ಠಲ ವೇಣುಗೋಪಾಲ

ಕೃಷ್ಣ ಕೈಪಿಡಿಯುವನು ಸತ್ಯ ವಿ-

ಶಿಷ್ಟ ದಾಸತ್ವವನು ಪಾಲಿಸಿ

ನಿಷ್ಠೆಯಿಂದಲಿ ಹರಿಕಥಾಮೃತಸಾರ ಪಠಿಸುವರ 24

****


ಹರೇ ಶ್ರೀನಿವಾಸ 

ಕುರ್ಯಾತ್ ಸದಾ ಮಂಗಳಂ

ಮಂಗಳ.. ಪ್ರಶಸ್ತಾಚರಣಂ ನಿತ್ಯಂ ಅಪ್ರಶಸ್ತಸ್ಯ ವರ್ಜನಂ ಏತದ್ಧಿ ಮಂಗಳಂ ಪ್ರೋಕ್ತಂ.. 

ಪ್ರಶಸ್ತವಾದುದನ್ನು ಮಾಡಿಸಲಿ..

ಕರುಣಿಸೆಮಗೆ ಮಂಗಳವ


ಗಾಯತ್ರಿ ಮಂತ್ರದಲ್ಲಿ ಧಿಯೋ ಯೋ ನ: ಪ್ರಚೋದಯಾತ್ ಎಂಬಲ್ಲಿ ಕರುಣಿಸೆಮಗೆ ಮಂಗಳವ ಅಂತ ಅರ್ಥ.. ಎಂಥವನನ್ನು ಧ್ಯಾನಿಸುತ್ತೇವೆ ಎಂಬಲ್ಲಿ.. 

ನಮಿಪೆ ಕರುಣಿಪುದೆಮಗೆ ಮಂಗಳವ.. 

ಯಾರನ್ನು ಎಂದಾಗ ಶ್ರೀರಮಣಿಕಮಲಪೂಜಿತ ಅಂತ ಪ್ರಾರಂಭ

ಯಾರಿಂದ ಮಂಗಳ.. 

ಕರುಣಿಸೆಮಗೆ ಮಂಗಳವ

ಶ್ರೀಮತ್ ಟೀಕಾಕೃತ್ಪಾದರ ಶ್ರೀಮನ್ ನ್ಯಾಯಸುಧಾ ಗ್ರಂಥದ ಪ್ರಥಮ ಶ್ಲೋಕ. 

ಶ್ರಿಯ:ಪತ್ಯೆ ನಿತ್ಯಾಗಣಿತಗುಣಮಾಣಿಕ್ಯವಿಷದ ಪ್ರಭಾಜಾಲೋಲ್ಲಾಸೋಪಹತಸಕಲಾವದ್ಯತಮಸೇ ಜಗಜ್ಜನ್ಮಸ್ಥೇಮಪ್ರಲಯ ರಚನಾಶೀಲವಪುಷೇ ನಮ:ಅಶೇಷ ಆಮ್ನಾಯ ಸ್ಮೃತಿ ಹೃದಯ ದೀಪ್ತಾಯ ಹರಯೇ

ಶ್ರಿಯ:ಪತ್ಯೆ.. ಲಕ್ಷ್ಮೀಪತಿ ನಾರಾಯಣ.. 

ಶ್ರೀ ಜಗನ್ನಾಥದಾಸಾರ್ಯರ ಹರಿಕಥಾಮೃತಸಾರದ ಮಂಗಳಾಚರಣ ಸಂಧಿಯಲ್ಲಿ ಶ್ರೀಹರಿಯನ್ನು ಕರುಣಿಸೆಮಗೆ ಮಂಗಳವ ಅಂತ ಹೇಳುವಾಗ ಶ್ರೀರಮಣಿಕಮಲಪೂಜಿತ ಚಾರುಚರಣ ಸರೋಜ ಎಂಬಲ್ಲಿ ಲಕ್ಷ್ಮೀಪತಿ

 ನಾರಾಯಣ

ಬ್ರಹ್ಮಸಮೀರವಾಣಿ... ಮುಖವಿನುತ.. ಎಂಬಲ್ಲಿ ಅವರು ಆರಾಧಿಸುವ. 

ಗುಣಪೂರ್ಣ.. ಇತ್ಯಾದಿ ಪ್ರಮೇಯಗಳು.. ಶ್ರೀ ಟೀಕಾಕೃತ್ಪಾದರ.. ನಿತ್ಯಾಗಣಿತಗುಣ.. ಎಂಬಲ್ಲಿ ಅನ್ವಯ.. 

ನೀರಜಭವಾಂಡೋದಯ ಸ್ಥಿತಿ ಕಾರಣನೇ ಕೈವಲ್ಯ ದಾಯಕ ನಾರಸಿಂಹನೇ 

ಎಂಬಲ್ಲಿ ಉದಯ.. ಸೃಷ್ಟಿಗೆ ಪ್ರದ್ಯುಮ್ನ ರೂಪ ಬರತದ.. 

ಸ್ಥಿತಿಗೆ ಅನಿರುದ್ಧ ರೂಪ.. ಲಯ ಕ್ಕ ಸಂಕರ್ಷಣ ಅದರ ಕೂಡ ನರಸಿಂಹ ರೂಪ.. ಕೈವಲ್ಯದಾಯಕ ವಾಸುದೇವ ರೂಪ 

ಅಂದ್ರ.. ನಾರಾಯಣ ಪ್ರದ್ಯುಮ್ನ ಅನಿರುದ್ಧ ಸಂಕರ್ಷಣ ವಾಸುದೇವ ರೂಪ ಪಂಚರೂಪ.. ಪಂಚವ್ಯೂಹ.. ನಾರಾಯಣ ಮೂಲರೂಪ ತಗೊಂಡರೆ ಚತುರ್ವ್ಯೂಹ ದ ರೂಪಗಳು.. 

ಒಟ್ಟು 5 ರೂಪಗಳು.. 

ಶ್ರೀ ಟೀಕಾಕೃತ್ಪಾದರ ಶ್ರೀಮನ್ ನ್ಯಾಯಸುಧಾ ಗ್ರಂಥದ ಪ್ರಥಮ ಶ್ಲೋಕದಲ್ಲಿ ಕೂಡ.. 

ಜಗಜ್ಜನ್ಮಸ್ಥೇಮಪ್ರಲಯ ರಚನಾಶೀಲರಚನಾಶೀಲವಪುಷೇ.. ಎಂಬಲ್ಲಿ ಸೃಷ್ಟಿ ಸ್ಥಿತಿ ಲಯ ಎಂಬಲ್ಲಿ ಪ್ರದ್ಯುಮ್ನ ಅನಿರುದ್ಧ ಸಂಕರ್ಷಣ ಬಂತು.. ಕಡೆಗೇ ಹರಯೇ ಎಂಬಲ್ಲಿ.. ಭವ ಹರಿಸುವ ಲಿಂಗದೇಹ ಹರಿಸುವ ಎಂಬಲ್ಲಿ ಮೋಕ್ಷ ಪ್ರದ ವಾಸುದೇವ ತಗೋಬೇಕು..

ಮಂಗಳವೀವನು ಸರ್ವೋತ್ತಮ ಶ್ರೀಮನ್ನಾರಾಯಣ ದೋಷದೂರ ಗುಣಪೂರ್ಣ ಅನಂತಕಲ್ಯಾಣಗುಣನಿಧಿ ಸ್ವತಂತ್ರ. ಕ್ಷರಾಕ್ಷರ ವಂದಿತ ಶ್ರೀಹರಿ.. 

ಅವನ ಸಾಕ್ಷಾತ್ ನಿತ್ಯ ತನ್ನ ಕರಕಮಲಗಳಿಂದ ಪೂಜಿಸುವ ಲಕ್ಷ್ಮೀದೇವಿಯು 

ಸಂತೈಸಲನುದಿನವು

ನಿರುಪಮಾನಂದಾತ್ಮಭವ... ವಂದಿಸುವೆ ಪಾಲಿಪುದು ಸನ್ಮತಿಯ

ಗುರು ಪವಮಾನ ಸಲಹೆಮ್ಮ

ಚತುರವದನನ ರಾಣಿ... ಸನ್ಮತಿಯ ಪಾಲಿಸಿ ನೆಲೆಸು ನೀಮದ್ವದನ ಸದನದಲಿ

ಮಾರುತನ ನಿಜಪತ್ನಿ.... ಶಾಸ್ತ್ರಗಳರುಪು ಕರುಣದಲಿ

ಹೀಗೆ ತಾರತಮ್ಯೋಕ್ತ ರಮಾಕಳತ್ರನ ದಾಸವರ್ಗಕೆ ನಮಿಸುತ್ತ ಮಂಗಳವಾಗಲಿ ಎಂದು ಅವರೆಲ್ಲರ ಅಂತರ್ಗತ ಶ್ರೀ ಹರಿಗೆ ಪ್ರಾರ್ಥಿಸಿದ್ದಾರೆ..

ಈ ಪಂಚರೂಪ ಪರಮಾತ್ಮನ ರೂಪಗಳ ವ್ಯಾಪಾರ ಬಹಳ.. ಶ್ರೀ ತರುಣಿವಲ್ಲಭನ ಪರಮ ವಿಭೂತಿ ರೂಪವ ಕಂಡಕಂಡಲ್ಲೀ ತೆರದಿ ಚಿಂತಿಸಿ ನೋಡು ಮನದಿ ಸಂಭ್ರಮದಿ ನೀತ ಸಾಧಾರಣ ವಿಶೇಷ ಸಜಾತಿ ನೈಜಾಹಿತವು ಸಹಜ ವಿಜಾತಿ ಖಂಡಾಖಂಡ ಬಗೆಗಳನರಿತು ಬುಧರಿಂದ. ಹಾಗಾದರೆ ಪರಮ ಭಾಗವತರು ಹರಿಯ ಭಕುತರ ಅನುಗ್ರಹವೂ ಬೇಕು.. ಜಗನ್ನಾಥ ವಿಠಲನ ಕರುಣ ಪಡೆವ ಮುಮುಕ್ಷು ಜೀವರು ಪರಮ ಭಾಗವತರನ್ನು ಕೊಂಡಾಡುವುದು ಪ್ರತಿದಿನವು..

ರಮಾಕಳತ್ರನ ದಾಸವರ್ಗಕೆ ನಮಿಪೆನನವರತ

ಬ್ರಹ್ಮಾದಿ ಸಕಲ ದೇವತೆಗಳು ಎರಡನೇ ಕಕ್ಷೆಯಿಂದ ಆರಂಭ ಮಾಡಿಕೊಂಡು ಸಕಲ ಕಕ್ಷೆಯಲ್ಲಿ ಬರುವ.. ದೇವತೆಗಳು..ತತ್ವಾಭಿಮಾನಿ ದೇವತೆಗಳು.. ಋಷಿಗಳು ಗಂಧರ್ವರು... 

ಬ್ರಹ್ಮಾದಿ ದೇವತೆಗಳು 

ವಿಶ್ವಾಮಿತ್ರಾದಿ ಋಷಿಗಳು 

ಮಾಂಧಾತಾ ಸೇರಿದಂತೆ ಭುವಿ ಭೂಭುಜರು.. 

ಮೇರು ಸೇರಿದಂತೆ ಸಕಲ ಅಚಲ ಪರ್ವತಗಳು. 

ಗಂಗಾದಿ ನದಿ ತೀರ್ಥಗಳು

ವೇದೋಪನಿತ್ ಪುರಾಣ ವೇದಾಂತ ತಂತ್ರ ಮಂತ್ರ ತರ್ಕ ಸ್ಮೃತಿ ಗಳು.. 

ಆದಿತ್ಯಾದಿ ನವಗ್ರಹಗಳು. ಮೇಷಾದಿ ರಾಶಿಗಳು ಅಶ್ವಿನಿ ಸೇರಿದಂತೆ ನಕ್ಷತ್ರಗಳು. 

ಯೋಗ ಕರಣಾದಿಗಳು

ಮಾಸ ಋತುಗಳು.. ಹಗಲು ರಾತ್ರಿ ಸಂಧ್ಯಾ ಕಾಲಗಳು. ಸಕಲ ಸ್ಥಾವರ ಜಂಗಮ.. ಇವುಗಳಿಗೆಲ್ಲ ಇರುವ ಅಭಿಮಾನಿ ದೇವತೆಗಳು ಇವರುಗಳಲ್ಲಿ ನೆಲೆನಿಂತ ಭಾರತೀರಮಣ ಮುಖ್ಯಪ್ರಾಣಾಂತರ್ಗತ ಸ್ವತಂತ್ರ ಮಂಗಳಪ್ರದ ಶ್ರೀ ಹರಿಯ ಅನುಗ್ರಹ ಸಂಪಾದನೆ ಅವಶ್ಯ

ಮಂಗಳಾಷ್ಟಕ ದಲ್ಲಿ ಬಂದಂತೆ.. 

ಅಭೀಷ್ಟಫಲದಾ.. ಸರ್ವಾಶುಭ ಧ್ವಂಸಕ

ಮಂಗಳಾಂಗನ ಮಂಗಳಪ್ರದನ ಮಂಗಳ ಚರಿತೆಯ ಶ್ರವಣ ಮನನಾದಿಗಳು ಮಂಗಳ ಪ್ರದಗಳು.. ಶ್ರೀ ಹರಿ.. 

ರಮಾ ಬ್ರಹ್ಮಾದಿಗಳು.. ಸಮಸ್ತ ದಾಸವರ್ಗದ ಅನುಗ್ರಹ ಸದಾ ಇರಲಿ.

end

 ‌(received in WhatsApp)

***


ಶ್ರೀ ಶ್ರೀದ ವಿಠಲರ ಫಲ ಶ್ರುತಿ ( 24 ಪದ್ಯಗಳು )

ಆದಿ :

ಹರಿಕಥಾಮೃತಸಾರ ಶ್ರೀಮ ।

ದ್ಗುರುವರ ಜಗನ್ನಾಥದಾಸರ ।

ಕರತಲಾಮಲಕವೆನೆ -

ಪೇಳಿದ ಸಕಲ ಸಂಧಿಗಳ ।।

ಪರಮ ಪಂಡಿತಾಭಿಮಾನಿಗಳು । ಮ ।

ತ್ಸರಿಸಲೆದೆಗಿಚ್ಚಾಗಿ ತೋರುವ ।

ದರಸಿಕರಿಗಿದು ಪೇಳಿ -

ಕೇಳುವದಲ್ಲ ಧರೆಯೊಳಗೆ ।। 1 ।।

ಶ್ರೀ ಸಹ್ಲಾದಾಂಶ ಜಗನ್ನಾಥದಾಸರ ಈ ಕೃತಿಯಲ್ಲಿ ಶಾಸ್ತ್ರ ಪ್ರಮೇಯಗಳನ್ನು ಅತ್ಯಂತ ಸ್ಫುಟವಾಗಿ  ನಿರೂಪಿಸಿರುವರು.

ತಾವೇ ಮಹಾ ಪಂಡಿತರು ಎಂದು ಅಹಂಕಾರ ಪಡುವವರಿಗೆ ಅಸೂಯೆ ಹುಟ್ಟಿಸುವಂಥಾ ಮಹೋನ್ನತ ಕೃತಿ.

ಭಗವನ್ಮಹಿಮೆ ತಿಳಿಸುವ ಅಭಿರುಚಿ ಇಲ್ಲದ ಜನಕ್ಕೆ ಹರಿಕಥಾಮೃತಸಾರವನ್ನು ತಿಳಿಸಕೂಡದು.

ಅಂತ್ಯ :

ದುಷ್ಟರೆನ್ನದೆ ದುರ್ವಿಷಯದಿಂ ।

ಪುಷ್ಟರೆನ್ನದೆ ಪೂತಕರ್ಮ ।

ಭ್ರಷ್ಟರೆನ್ನದೆ ಶ್ರೀದ -

ವಿಠ್ಠಲವೇಣುಗೋಪಾಲ ।।

ಕೃಷ್ಣ ಕೈವಿಡಿವನು ಸುಸತ್ಯ । ವಿ ।

ಶಿಷ್ಟ ದಾಸತ್ವವನು ಪಾಲಿಸಿ ।

ನಿಷ್ಠೆಯಿಂದಲಿ -

ಹರಿಕಥಾಮೃತಸಾರ ।। 24 ।।

ಕಾರಣಾಂತರದಿಂದ ದುಷ್ಟರಾಗಿದ್ದವರೂ, ದುರ್ವಿಷಯಗಳಲ್ಲಿ ಮುಳುಗಿದವರೂ, ಸತ್ಕರ್ಮಗಳನ್ನು ತೊರೆದು ಭಷ್ಟರಾದವರೂ ಸಹ ಪಶ್ಚಾತ್ತಾಪ ಪಟ್ಟು ಈ ಹರಿಕಥಾಮೃತಸಾರವನ್ನು ನಿಷ್ಠೆಯಿಂದ ಪಠಿಸ ತೊಡಗಿದರೆ ಶ್ರೀ ಕೃಷ್ಣ ಪರಮಾತ್ಮ ಅವರನ್ನು ನಿಶ್ಚಿತವಾಗಿಯೂ ಕೈ ಹಿಡಿಯುವನು ಮತ್ತು ತನ್ನ ಭಕ್ತ ವರ್ಗದಲ್ಲಿ ಸೇರಿಸಿಕೊಳ್ಳುವನು.

ಸ್ವಭಾವತಃ ಯೋಗ್ಯರಾದವರು ಕಾರಣಾಂತರದಿಂದ ಅಯೋಗ್ಯ ಕಾರ್ಯದಲ್ಲಿ ತೊಡಗಿದ್ದರೂ, ಈ ಶ್ರೀ ಹರಿಕಥಾಮೃತಸಾರ ಪಠನೆಯಿಂದ ಪರಿಶುದ್ಧರಾಗಿ ಶ್ರೀ ಹರಿ ಪರಮಾತ್ಮನ ಪರಮಾನುಗ್ರಹಕ್ಕೆ ಪಾತ್ರರಾಗುವರು ಎಂದು ತಾತ್ಪರ್ಯ!!

 ‌(received in WhatsApp)

***


ಹರಿಕಥಾಮೃತಸಾರ ಸಂಧಿ 1 ರಿಂದ 32  - ರಚನೆ ಜಗನ್ನಾಥ ದಾಸರು 

for saahitya click   ಹರಿಕಥಾಮೃತಸಾರ ಸಂಧಿ 1 to 32  

*********