Showing posts with label ವೃಂದಾವನದ ಸೇವೆಯ hayavadana ತುಲಸೀ ಮಹಿಮ VRUNDAVANADA SEVEYA TULASI MAHIMA. Show all posts
Showing posts with label ವೃಂದಾವನದ ಸೇವೆಯ hayavadana ತುಲಸೀ ಮಹಿಮ VRUNDAVANADA SEVEYA TULASI MAHIMA. Show all posts

Monday 6 September 2021

ವೃಂದಾವನದ ಸೇವೆಯ ankita hayavadana ತುಲಸೀ ಮಹಿಮ VRUNDAVANADA SEVEYA TULASI MAHIMA

Audio by Vidwan Sumukh Moudgalya


ಶ್ರೀ ವಾದಿರಾಜ ಕೃತ ಶ್ರೀ ತುಲಸೀ ಮಹಿಮಾ ಪದ 


 ರಾಗ : ಭೌಳಿ   ಆದಿತಾಳ 


ವೃಂದಾವನದ ಸೇವೆಯ ॥ಪ॥


ವೃಂದಾವನದ ಸೇವೆ ಮಾಡಿದವರಿಗೆ ಭೂ-

ಬಂಧನ ಬಿಡುಗಡೆಯಾಗುವುದು ॥ಅ.ಪ॥


ಏಳುತಾಲಿರೆ ಕಂಡು ಕರವ ಮುಗಿದು ಬೇಗೀ-

ರೇಳು ಲೋಕದ ಮಾತೆಗೆ ನಮೋಯೆಂಬೊದಲ್ಲದೆ

ಏಳು ಪರದಕ್ಷಿಣೆಯನು ಮಾಡಿದವರಿಗೆ

ಏಳು ಜನುಮದ ಪಾಪ ಹಿಂಗುವುದು ॥೧॥


ಸಾರಿಸಿ ರಂಗವಲ್ಲಿಯನಿಟ್ಟು ಮೇಲೆ ಪ-

ನ್ನೀರನೆರೆದು ಪ್ರತಿದಿವಸದಲ್ಲಿ

ಸಾರಿ ಸೇವೆಯ ಮಾಡಿದವರಿಗೊಲಿದು ಮುನ್ನ

ಸೇರಿಸುವಳು ತನ್ನ ಪದವಿಯನು ॥೨॥


ಒಡೆಯನ ಮನೆಗೆ ನೀರುತರುತಲೊಬ್ಬಳು

ಎಡಹಿ ಬಿದ್ದಳು ತನ್ನ ಕೊಡನೊಡೆಯೆ

ಸಿಡಿದು ಶ್ರೀತುಲಸಿಗೆ ತಂಪಾಗಲು ಮುನ್ನ

ಕೊಡಳೆ ಅವಳಿಗೆ ಮೋಕ್ಷಪದವಿಯನು॥೩॥


ಕೇಶವ ಎಂಬ ಭೂಸುರಗೆ ಶುಕಯೋಗಿ ಉಪ-

ದೇಶಿಸಿದನು ತನ್ನ ಭಾಗವತದಲ್ಲಿ

ಕಾಸುವೀಸ ಹೊನ್ನು ಹಣ ಸವೆಯದ ಮುನ್ನ ನಿ-

ರಾಶೆಯಿಂದಲಿ ಮುಕ್ತಿ ದೊರಕುವುದು ॥೪॥


ಪೊಡವಿಗಧಿಕವಾದ ಸೋದೆಪುರದ ತ್ರಿವಿಕ್ರಮ

ಎಡಭಾಗದಲಿ ಲಕ್ಷ್ಮೀದೇವಿಯ ಸಹಿತ

ಸಡಗರದಿಂದಲಿ ಹಯವದನನ ಪಾದ

ಬಿಡದೆ ಪೂಜಿಸಿ ಭಕ್ತಿ ಪಡೆಯಿರಯ್ಯ ॥೫॥

***


ವೃಂದಾವನದ ಸೇವೆಯ ಪ.


ವೃಂದಾವನದ ಸೇವೆಮಾಡಿದವರಿಗೆ ಭೂ-ಬಂಧನ ಬಿಡುಗಡೆಯಾಗುವುದು ಅ.ಪ.


ಏಳುತಾಲಿದಿರೆ ಕಂಡು ಕರವ ಮುಗಿದು ಬೇಗೀ-ರೇಳು ಲೋಕದ ಮಾತೆಗೆ ನಮೋಯೆಂಬೋದಲ್ಲದೆಏಳು ಪರದಕ್ಷಿಣೆಯನು ಮಾಡಿದವರಿಗೆಏಳು ಜನಮದ ಪಾಪ ಹಿಂಗುವುದು1


ಸಾರಿಸಿ ರಂಗವಲ್ಲಿಯನಿಟ್ಟು ಮೇಲೆ ಪ-ನ್ನೀರನೆರೆದು ಪ್ರತಿದಿವಸದಲ್ಲಿಸಾರಿ ಸೇವೆಯ ಮಾಡಿದವರಿಗೊಲಿದು ಮುನ್ನಸೇರಿಸುವಳು ತನ್ನ ಪದವಿಯನು 2


ಒಡೆಯನ ಮನೆಗೆ ನೀರುತರುತಲೊಬ್ಬಳುಎಡಹಿ ಬಿದ್ದಳು ತನ್ನ ಕೊಡನೊಡೆಯೆಸಿಡಿದು ಶ್ರೀತುಳಸಿಗೆ ತಂಪಾಗಲು ಮುನ್ನಕೊಡಳೆ ಅವಳಿಗೆ ಮೋಕ್ಷಪದವಿಯನು 3


ಕೇಶವ ಎಂಬ ಭೂಸುರಗೆ ಶುಕಯೋಗಿ ಉಪ-ದೇಶಿಸಿದನು ತನ್ನ ಭಾಗವತದಲ್ಲಿಕಾಸುವೀಸ ಹೊನ್ನು ಹಣ ಸವೆಯದಾಮುನ್ನ ನಿ-ರಾಶೆಯಿಂದಲಿ ಮುಕ್ತಿ ದೊರಕುವುದು 4


ಪೊಡವಿಗಧಿಕವಾದ ಸೋದೆ ಪುರದ ತ್ರಿವಿಕ್ರಮಎಡಭಾಗದಲಿ ಲಕ್ಷ್ಮಿದೇವಿಯ ಸಹಿತಸಡಗರದಿಂದಲಿ ಹಯವದನನ ಪಾದಬಿಡದೆ ಪೂಜಿಸಿ ಭಕ್ತಿ ಪಡೆಯಿರಯ್ಯ 5

***