Showing posts with label ಳಳ- RSS- ಅರಳಲಿದೆ ನವ ಭಾರತ ARALIDE NAVA BHAARATA rss. Show all posts
Showing posts with label ಳಳ- RSS- ಅರಳಲಿದೆ ನವ ಭಾರತ ARALIDE NAVA BHAARATA rss. Show all posts

Friday 24 December 2021

ಅರಳಲಿದೆ ನವ ಭಾರತ others ARALIDE NAVA BHAARATA rss


  

RSS song  


ಅರಳಲಿದೆ ನವಭಾರತದೇಶ ಕಗ್ಗತ್ತಲ ಒಡಲಿಂದ

ಬೆಳಗಲಿದೆ ಭುವಿಯಂಗುಲ ಅಂಗುಲ ಹಿಂದುತ್ವದ ಪ್ರಭೆಯಿಂದ ||ಪ||


ಮನುಜನ ಜನುಮವ ಸಾರ್ಥಕಗೊಳಿಸಿಹ ಮುನಿಜನರಮೃತ ವಾಣಿ

ಅನುಜತ್ವದ ಆದರ್ಶವ ಸಾರಿದ ಕಾವ್ಯಗಳದ್ಭುತ ಶೇಣಿ

ಚಿಮ್ಮಲಿದೆ ಚೈತನ್ಯದ ಚಿಲುಮೆ ಪ್ರಾಚೀನದ ನೆಲೆಯಿಂದ ||೧||


ಶತಶತಮಾನದ ಆ ಗತವೈಭವ ಭೂಗವಾಗುವ ಮುನ್ನ

ಜಾಗೃತಗೊಳಿಸಿ ಸುಷುಪ್ತ ಜನಾಂಗದ ಸಮಯವು ಮೀರುವ ಮುನ್ನ

ಉದಿಸಲಿದೆ ನವ ಹಿಂದುಸಮಾಜ ಶತ ಅವಶೇಷಗಳಿಂದ ||೨||


ಹಬ್ಬಿದ ಮಬ್ಬಲಿ ಗುರಿಯನು ತಪ್ಪಿದ ಮೌಢ್ಯವನಪ್ಪಿದ ಜನಕೆ

ಅರಿವಿನ ಈ ಅರುಣೋದಯಕಾಲದಿ ಇಳೆಯನೆ ಬೆಳಗುವ ಬಯಕೆ

ಮೂಡಲಿದೆ ನೂತನ ಆಶೋತ್ತರ ಹತ ಆಕಾಂಕ್ಷೆಗಳಿಂದ ||೩||


ದಿಡುಕಿದ ಅನುಜರ ಸಿಡುಕಿನ ಕೃತ್ಯವು ತಂದಿರೆ ನಾಡಿಗಪಾಯ

ಒಡಕಿನ ಜಾಲಕೆ ಕೆಡುಕಿನ ಕಾಲಕೆ ಸಾರುತ ಅಂತ್ಯವಿದಾಯ

ಉಕ್ಕಲಿದೆ ಸಂಜೀವಿನಿ ಅಮೃತ ಹಾಲಾಹಲದೆಡೆಯಿಂದ ||೪||

***

araLalide navaBaaratadESa kaggattala oDaliMda

beLagalide BuviyaMgula aMgula hiMdutvada praBeyiMda ||pa||


manujana janumava saarthakagoLisiha munijanaramRuta vANi

anujatvada AdarSava sArida kAvyagaLadButa SRENi

cimmalide caitanyada cilume prAcInada neleyiMda ||1||


SataSatamAnada A gatavaiBava BUgavAguva munna

jAgRutagoLisi suShupta janAMgada samayavu mIruva munna

udisalide nava hiMdusamAja Sata avaSEShagaLiMda ||2||


habbida mabbali guriyanu tappida mouDhyavanappida janake

arivina I aruNOdayakAladi iLeyane beLaguva bayake

mUDalide nUtana ASOttara hata AkAMkShegaLiMda ||3||


diDukida anujara siDukina kRutyavu taMdire nADigapAya

oDakina jAlake keDukina kAlake sAruta aMtyavidAya

ukkalide saMjIvini amRuta hAlAhaladeDeyiMda ||4||

***

ಅರಳಲಿದೆ ನವಭಾರತದೇಶ ಕಗ್ಗತ್ತಲ ಒಡಲಿಂದ

ಬೆಳಗಲಿದೆ ಭುವಿಯಂಗುಲ ಅಂಗುಲ ಹಿಂದುತ್ವದ ಪ್ರಭೆಯಿಂದ ||ಪ||

ಮನುಜನ ಜನುಮವ ಸಾರ್ಥಕಗೊಳಿಸಿಹ ಮುನಿಜನರಮೃತ ವಾಣಿ

ಅನುಜತ್ವದ ಆದರ್ಶವ ಸಾರಿದ ಕಾವ್ಯಗಳದ್ಭುತ ಶೇಣಿ

ಚಿಮ್ಮಲಿದೆ ಚೈತನ್ಯದ ಚಿಲುಮೆ ಪ್ರಾಚೀನದ ನೆಲೆಯಿಂದ ||೧||


ಶತಶತಮಾನದ ಆ ಗತವೈಭವ ಭೂಗವಾಗುವ ಮುನ್ನ

ಜಾಗೃತಗೊಳಿಸಿ ಸುಷುಪ್ತ ಜನಾಂಗದ ಸಮಯವು ಮೀರುವ ಮುನ್ನ

ಉದಿಸಲಿದೆ ನವ ಹಿಂದುಸಮಾಜ ಶತ ಅವಶೇಷಗಳಿಂದ ||೨||


ಹಬ್ಬಿದ ಮಬ್ಬಲಿ ಗುರಿಯನು ತಪ್ಪಿದ ಮೌಢ್ಯವನಪ್ಪಿದ ಜನಕೆ

ಅರಿವಿನ ಈ ಅರುಣೋದಯಕಾಲದಿ ಇಳೆಯನೆ ಬೆಳಗುವ ಬಯಕೆ

ಮೂಡಲಿದೆ ನೂತನ ಆಶೋತ್ತರ ಹತ ಆಕಾಂಕ್ಷೆಗಳಿಂದ ||೩||


ದಿಡುಕಿದ ಅನುಜರ ಸಿಡುಕಿನ ಕೃತ್ಯವು ತಂದಿರೆ ನಾಡಿಗಪಾಯ

ಒಡಕಿನ ಜಾಲಕೆ ಕೆಡುಕಿನ ಕಾಲಕೆ ಸಾರುತ ಅಂತ್ಯವಿದಾಯ

ಉಕ್ಕಲಿದೆ ಸಂಜೀವಿನಿ ಅಮೃತ ಹಾಲಾಹಲದೆಡೆಯಿಂದ ||೪||

***