Showing posts with label ದಾತನೀತ ಯತಿನಾಥ ನಿಜಪದ ದೂತಜನರ ಪೊರೆವಾ gurujagannatha vittala. Show all posts
Showing posts with label ದಾತನೀತ ಯತಿನಾಥ ನಿಜಪದ ದೂತಜನರ ಪೊರೆವಾ gurujagannatha vittala. Show all posts

Wednesday 1 September 2021

ದಾತನೀತ ಯತಿನಾಥ ನಿಜಪದ ದೂತಜನರ ಪೊರೆವಾ ankita gurujagannatha vittala

 ..

ದಾತನೀತ ಯತಿನಾಥ ನಿಜಪದ

ದೂತಜನರ ಪೊರೆವಾ ಪ


ಧಾತನಾಂಡದೊಳತಿ ಖ್ಯಾತನಾಗಿ ಶಿರಿ

ನಾಥ ನೊಲಿಸಿ ಮೆರೆವಾ

ನೀತಮನದಿ ತನ ಮಾತು ಮೀರಿದಿಹ -

ಗೀತೆರದಿ ತಾನೆ ಒಲಿವಾ

ತಾತನೆ ಮನೋಗತ ಭೀತಿಯ ಬಿಡಿಸೆನೆ

ಪ್ರೀತಿ ಮನದಿ ತಾ ಬರುವಾ ಅ.ಪ


ರಾಮ ಕೃಷ್ಣ ನರಹರ್ಯಂಘ್ರಿಯ

ಪ್ರೇಮಮನದಿ ಭಜಿಪಾ

ನೇಮದಿ ತನ್ನನು ಕಾಮಿಪ ಜನರಿಗೆ

ಕಾಮಿತ ಫಲರೂಪಾ

ಈ ಮಹಾ ಮಹಿಮೆಯ ನೇಮದಿ ತೋರುವ

ಭೂವಿ ಸುರರ ಭೂಪಾ

ತಾಮಸ ಮತಿ ನಿರ್ಧೂಮ ಗೈಸುವ

ಧೂಮಕೇತುನೆನಿಪಾ 1


ಮಂದ ಜನರಿಗೆ ಎಂದಿಗಲಭ್ಯನ -

ಮಂದ ಜನರ ಪ್ರೀಯಾ

ಪೊಂದಿದ ಜನರಾ ಕುಂದೆÀಣಿಸದೆ ತಾ

ನಂದ ಕೊಡವೊ ಮಹಾರಾಯಾ

ವಂದಿಪ ಜನರಘ - ವೃಂದವ ದರುಶನ -

ದಿಂದ ತರಿವೊ ಜೀಯಾ

ಸುಂದರತರ ವೃಂದಾವನ ನಿಜ

ಮಂದಿರ ಗತ ಧ್ಯೇಯಾ 2


ದಾತಗುರು ಜಗನ್ನಾಥ ವಿಠಲನತಿ

ಪ್ರೀತಿಯಿಂದ ಭಜಿಪಾ

ದೂತ ಜನರು ಬಲು ಆತುರದಲಿ ಕರಿಯೆ

ಪ್ರೀತ ಮನದಿ ತಾ ಬಪ್ಪ

ಮಾತೆಯತೆರ ನಿಜ ದೂತರÀ ಮನಸಿನ

ಮಾತು ನಡೆಸುವ ನೀಭೂಪಾ

ಈತಗೆ ಸರಿಯತಿನಾಥ ಕಾಣೆನೊ

ಭೂತಳೇಶರಧಿಪಾ 3

***