Showing posts with label ಶ್ರೀಗಯಾದ ಯಾತ್ರಿ vijaya vittala suladi ಗಯಾ ಮಹಾತ್ಮೆ ಸುಳಾದಿ SRI GAYAADA YAATRI GAYA MAHATME SULADI. Show all posts
Showing posts with label ಶ್ರೀಗಯಾದ ಯಾತ್ರಿ vijaya vittala suladi ಗಯಾ ಮಹಾತ್ಮೆ ಸುಳಾದಿ SRI GAYAADA YAATRI GAYA MAHATME SULADI. Show all posts

Monday 9 December 2019

ಶ್ರೀಗಯಾದ ಯಾತ್ರಿ vijaya vittala suladi ಗಯಾ ಮಹಾತ್ಮೆ ಸುಳಾದಿ SRI GAYAADA YAATRI GAYA MAHATME SULADI

Audio by Mrs. Nandini Sripad  ರಾಗ ಹಂಸಾನಂದಿ 

Audio by Vidwan Sumukh Moudgalya    ರಾಗ shanmukhapriya


ಶ್ರೀ ವಿಜಯದಾಸಾರ್ಯ ಕೃತ ಗಯಾದ ಮಹಾತ್ಮೆ ಸುಳಾದಿ 
 

 ಧ್ರುವತಾಳ 

ಶ್ರೀ ಗಯಾದ ಯಾತ್ರಿ ಮಾಡಿ ಸಿದ್ಧ ಸಾಧ್ಯ ಮಾನವರು |
ಆಗಮೋಕ್ತಿಯಿಂದ ತಿಳಿದುನೋಡಿ |
ಭೋಗದಾಸೆಯ ಬಿಟ್ಟು ಭಕುತಿಮಾರ್ಗದಿಂದ |
ಯೋಗಿ ಜನರು ಸಂಗಡದಿಂದಲಿ |
ಯಾಗ ಮೊದಲಾದ ಕರ್ಮಕಲಾಪಂಗಳು |
ತ್ಯಾಗಮಾಡಿದರು ದೋಷವಿಲ್ಲಾ |
ಸಾಗಿ ಬಂದು ಇಲ್ಲಿ ನೂರೊಂದು ಕುಲವ ಲೇ - |
ಸಾಗಿ ಉದ್ಧರಿಸಬೇಕು ತ್ರಿಕರ್ಣದೀ |
ಭಾಗಾದೆಯಾದವ ದ್ವೇಷದಿಂದಲಿ ಬರ - |
ಲಾಗಿ ಮುಕ್ತಿಯುಂಟು ಪಿತ್ರಾದಿಗೇ |
ಈಗಲಾಗೆನ್ನದಿರಿ ಕಂಡ ಮಾತುರ ಬಲು |
ವೇಗಾದಿಂದಲಿ ನರಕಾ ದೂರಾಗೋವೂ |
ಸಾಗರಶಾಯಿ ನಮ್ಮ ವಿಜಯವಿಠಲ ನಂಘ್ರಿ |
ಜಾಗುಮಾಡದೆ ನೆನೆಸೆ ಸಮಸ್ತ ಕಾರ್ಯಸಿದ್ಧಿ ॥ 1 ॥

 ಮಟ್ಟತಾಳ 

ಪರಮ ಪ್ರೀತಿಯಿಂದ ಫಲ್ಗುಣಿ ಶ್ರಾದ್ಧವನು |
ವಿರಚಿಸಿ ವಿನಯದಲಿ ಪ್ರಥಮ ದಿವಸದಲ್ಲಿ |
ತರುವಾಯ ಕಮಲಾಸನ ತೀರ್ಥಪ್ರೇತ ಶಿಲೆಯು |
ಚರಿಸಿ ಚತುರನಾಗಿ ಎರಡನೆ ಸ್ಥಾನದ - |
ಲಿ ರಾಮ ಪರ್ವತರಾಮಾ ಸರೋವರ ಕಾಕಬಲಿ |
ಎರಡೆರಡೂ ಒಂದೂ ಸ್ಥಳ ಒಂದೇ ದಿವಸ |
ಕರಣಶುದ್ಧಿಯಿಂದ ಪಿಂಡ ಪ್ರದಾನವಗೈದು |
ಸುರಸಾರ್ವಭೌಮ ವಿಜಯವಿಠಲ ಗದಾ - |
ಧರನ ಪ್ರೀತಿಬಡಿಸಿ ಕುಲವನು ಉದ್ಧರಿಸಿ ॥ 2 ॥

 ರೂಪಕತಾಳ 

ಉತ್ತರ ಮಾನಸ ಕನಕ ತೀರ್ಥ ಸೂರ್ಯ |
ಹತ್ತಿಲಿ ದಕ್ಷಿಣ ಮಾನಸ ಮಧುಕುಲ್ಯಾ |
ಸತ್ಯವಾಗಿ ಐದು ಸ್ಥಾನದಲ್ಲಿ ತಮ್ಮ |
ಪಿತೃಗಳನುದ್ಧರಿಸೆ ಅಲ್ಲಿಂದಾ ಮರುದಿವಸಾ |
ಮಾತೆಮಾತಂಗ ಧರ್ಮಕೂಪ ಅಶ್ವತ್ಥ |
ತತ್ತಳಿಸುವ ಬ್ರಹ್ಮಕುಂಡಕ ಕಾಶ್ವಾನ |
ಪ್ರತ್ಯೇಕವಾಗಿ ಪಿಂಡ ಪ್ರದಾನವ ಗೈದು |
ಪಿತೃಮಾತೃವಂಶ ಗತಿಗೆ ಪೊಂದಿಸುವದು |
ಸತ್ಯಸಂಕಲ್ಪ ವಿಜಯವಿಠಲ ರೇಯ |
ಆತ್ಮಸಮ್ಮತ ಪಾಲಿಸುತಿಪ್ಪ ಪ್ರತಿದಿನ ॥ 3 ॥

 ತ್ರಿವಿಡಿತಾಳ 

ಇನಿತು ಮಾಡಿದ ಮೇಲೆ ಪಿಷ್ಠಯಳ್ಳು ಪರಮಾನ್ನ |
ಘನಕ್ಷೀರ ತರ್ಪಣ ದೀಪವ ವಿರಚಿಸಿ |
ಅಣೋರಣಿಯಾದ ಶ್ರೀ ವಿಷ್ಣುಮೂರ್ತಿಯ ಮತ್ತೆ |
ವನಜಾಸನಾ ರುದ್ರ ಇಂದ್ರ ಸ್ಕಂದಾರ್ಕಾಬ್ಜಾ |
ಅನಲೈದು ಗಣೇಶ್ವರ ಕ್ರೋಂಚಕಲಶೋದ್ಭವ |
ಮುನಿ ಕಾಣ್ವ ದಧಿಚಿ ಮಾತಂಗಾ ಕಶ್ಯಪಮುನಿ |
ಎಣಿಸಿ ಹತ್ತೊಂಭತ್ತು ಪಾದದ ಮೇಲೆ ಸ - |
ದ್ಗುಣದಿಂದ ಪೂರ್ವೋಕ್ತ ಪ್ರಕಾರಮಾಳ್ಪದೂ |
ಗುಣಪೂರ್ಣ ವಿಜಯವಿಠಲ ಗದಾಧರಗೆ ವಂ - |
ದನೆ ಮಾಡು ಗಜರೂಪದಲ್ಲಿಗೆ ಬಂದು ನಿಂದೂ ॥ 4 ॥

 ಝಂಪೆತಾಳ 

ಭಕುತಿಯಿಂದಲಿ ಮೂಲವಟದಲ್ಲಿ ಶ್ರಾದ್ಧವನು |
ಸಕಲ ಗೋತ್ರಗಳು ಉದ್ಧಾರಾರ್ಥವಾಗಿ |
ಲಕುಮಿ ಕುಂಡ ಗದಾ ಲೋಲ ಕರ್ನಿಕೆಯಲ್ಲಿ |
ಮಖ ಸಮನಾದ ಪಿಂಡಗಳನಿಟ್ಟೂ |
ಭಕುತಿಯಿಂದಲಿ ಕ್ಷೇತ್ರವಾಸಿಗಳ ಪೂಜಿಸಿ |
ಸುಖಬಡಿಸಿ ವಟದಲ್ಲಿ ಪಿಂಡ ಪ್ರದಾನವಗೈದು |
ಕಕುಲಾತಿ ಸಲ್ಲಾ ನಿಮಗೆಲ್ಲಿ ಈ ನಿಧಿಯಲ್ಲಿ |
ದುಃಖದಿಂದ ಕಡೆಬಿದ್ದು ಪೋಪ ನರನು |
ಅಖಿಳ ಲೋಕೇಶ ಸಿರಿ ವಿಜಯವಿಠಲರೇಯಾ |
ಅಕಳಂಕ ಜನರೊಡನೆ ಇಡುವ ಕರುಣದಲಿ ॥ 5 ॥

 ಅಟ್ಟತಾಳ 

ಸೀತರಾಮ ಗಯ ಗಯ ಶೀರ್ಷ ಗಯ ರೂಪ |
ನೀತಾ ಮುಂಡ ಪೃಷ್ಠಗಿರಿ ಆದಿಗಯ ಮುಂದೆ |
ಧೌತ ಪಾಪ ಭೀಮ ಗಯ ಗೋಪಾದವು |
ವೈತರಣಿ ತೀರ್ಥ ಇನಿತು ಸ್ಥಾನದಲ್ಲಿ |
ಕಾತುರದಿಂದಲಿ ಪಿಂಡ ಪ್ರದಾನವ |
ಮಾತಾ ಪಿತೃಗಳಿಗೋಸುಗ ಸ್ವಾಮಿ ಕೈಯಲ್ಲಿ ಕೊಟ್ಟುಕೊಂಡಾಡಿ |
ಆತುಮಾರ್ಥವಾಗಿ ದಧ್ಯಾನ್ನದ ಪಿಂಡ |
ದಾತ ಜನಾರ್ದನ ಸ್ವಾಮಿಯ ಕೈಯಲ್ಲಿ |
ತಾ ತೃಪ್ತಿಯಿಂದಲಿ ತಿಲರಹಿತವಾಗಿ |
ಪ್ರೀತಿಯಿಂದಲಿ ಕೊಟ್ಟು ಸ್ತೋತ್ರವ ಮಾಡೀ |
ಗಾತುರ ತೊಲಗಿದಾಗಲಿ ಮುದದಿಂದ ಪ್ರ - |
ಖ್ಯಾತ ವಿಷ್ಣು ಪಾದದಲ್ಲಿ ಹಾಕೆಂದು ಭ -|
ಕೂತಿಯಿಂದಲಿ ಪೇಳಿ |
ಸಂತೋಷವಹುದು ಹೇಯ ದಾನವ ಹರ
 ವಿಜಯವಿಠಲರೇಯಾ |
ಭೂತಳದೊಳಗೆ ಈ ತೆರದಲ್ಲಿ ಮೆರೆವ ॥ 6 ॥

 ಆದಿತಾಳ 

ಶ್ರೀ ಗಯಾ ಯಾತ್ರಿ ಸಾವಿತ್ರಿ ಸರಸ್ವತಿ ತೀರ್ಥ ಮಿಂದು ನಿತ್ಯ |
ಈ ಗಿರಿಗಳಲ್ಲಿ ಇಷ್ಟಾರ್ಥ ಬೇಡುವುದು |
ಯೋಗಿ ಜನರು ಇಲ್ಲಿ ಧ್ಯಾನ ಮಾಡುವದು, ಲೇ - |
ಸಾಗಿ ನಾನಾ ತೀರ್ಥದಲ್ಲಿ ವಾಸವಾಗಿ |
ಭೋಗಭೂಷಣ ಬಹುರೂಪದಲ್ಲಿ ನಿಂದು |
ಸಾಗರತಲ್ಪನ ಧ್ಯಾನ ಮಾಡುವನು |
ಆಗಮೋಕ್ತಿಯಿಂದ ಸಿದ್ಧವಾಗಿದೆ ಕೇಳಿ |
ನಾಗವಹನ ಮಿಕ್ಕಾ ದೇವಾದಿಗಳು, ಅನು - |
ರಾಗ ಮತಿಯಲ್ಲಿ ಹರಿಯ ಪೂಜಿಸುವರು |
ಈ ಗಯಾದ ಯಾತ್ರೆ ಮಾಡೆ ನೂರೊಂದು ಕುಲದವರು |
ಸಾಗುವರು ಸರ್ವಬಾಧೆ ಗೆದ್ದು ಹರಿಪುರಕೆ |
ಭಾಗೀರಥಿ ಜನಕ ವಿಜಯವಿಠಲ ನಂಘ್ರಿಗೆ |
ಬಾಗಿ ಸಮಸ್ತ ಸೌಖ್ಯ ಪಡೆದು ಧನ್ಯನಾಗಿ ॥ 7 ॥

 ಜತೆ 

ಪಿತ್ರಾದಿಕುಲ ಇಲ್ಲಿ ಉದ್ಧಾರವಾಗುವದು |
ಗೋತ್ರದೊಳಗೆ ಇಪ್ಪಾ ವಿಜಯವಿಠಲ ಬಂಧೂ ॥
*********