Showing posts with label ಸಂತತ ಶ್ರೀಮದನಂತ ಗಿರೀಶನ ಚಿಂತಿಸುತಿರು karpara narahari. Show all posts
Showing posts with label ಸಂತತ ಶ್ರೀಮದನಂತ ಗಿರೀಶನ ಚಿಂತಿಸುತಿರು karpara narahari. Show all posts

Monday 2 August 2021

ಸಂತತ ಶ್ರೀಮದನಂತ ಗಿರೀಶನ ಚಿಂತಿಸುತಿರು ankita karpara narahari

ಸಂತತ ಶ್ರೀಮದನಂತ ಗಿರೀಶನ ಚಿಂತಿಸುತಿರು

ಮನವೆ ಪೇಳುವೆ ಪ


ಅಂತರಂಗದಲಿ ಚಿಂತಿಪರಘಶುಲಧ್ವಾಂತ

ದಿವಾಕರನಾ ಶ್ರೀವರನಾ ಅ.ಪ


ಎಂತು ಸುಕೃತವೂ ಸಿರಿಕಾಂತನುಯನ್ನೊಳು

ನಿಂತಿರುವನು ಎನುತ ಪರ್ವತ

ಸಂತೋಷದಲಿರುವಂತೆ ತೋರುವದು ಸು-

ಕಾಂತ ಶಿಖರದಿಂದ ಛಂದ 1

ವರಶಿಲೆಯೊಳಿರುವ ಹರಿಯ ಶೇವಿಸಲು

ಹರುಷದಿ ಸುರನಿಕರ ಭಾಸುರ

ತರುಲತೆರೂಪದಿ ಇರುತಿಹರೆನ್ನುತ

ಮೆರೆವನು ಗಿರಿರಾಜಾ ಸುತೇಜಾ2

ಸರಸಿಜನಾಭಗೆ ಸರಿತಾನೆಂಬುವ ತೆರದಲಿ

ಗಿರಿನಾಥಾ ತೋರುತ ಅರಳಿದ ಪೂವಿನ

ಪರಿಮಳ ಬೀರುವ ಸುರಚಿರ ತರುವ್ರಾತಾ

ಶೋಭಿತ3

ಪವನ ಶೇವಿತನು ಭುವನೋದರ ತಾ

ದಿವಿಜರಿಂದ ಸಹಿತ ಸೇವಿತ

ಅವನಿಧರನು ಮಾಧವನ ತೆರದಿ ತೋ

ರು ವೆನೆಂಬುಗರ್ವಾದಿಂದಿರುವ 4

ಸಿದ್ಧಚಾರಣ ತಪೋವೃದ್ಧರಿದೇ ಸ್ಥಳ

ಸಿದ್ಧಿದಾಯಕವೆಂದೂ ಬಂದೂ

ಪದ್ಮಾಕ್ಷನ ಪದಪದ್ಮವ ಧ್ಯಾನಿಸು-

ತಿದ್ದರು ಗುಹೆಗಳಲಿ ಪೂರ್ವದಲಿ5

ಮುನಿ ಮಾರ್ಕಾಂಡೇಯನು ಬಹುದಿನದಲಿ

ಘನ ತಪವಾಚರಿಸಿ ಸೇವಿಸಿ

ವನಜನಾಭನ ಪದವನಜ ಮಧುಪ ನೆಂ

ದೆನಿಸುತಲಿರೆ ಗುಹದಿ ತಪೋನಿಧಿ6

ಗಿರಿಯ ಬಲದಿ ಅಹೋಬಲ ನರಸಿಂಹನ

ದರ್ಶನವನು ಕೊಳುತ ನಿರುತ

ಇರುತಿರಲೊಂದಿನ ಬರಲಾಷಾಢದ

ಹರಿವಾಸರ ವೃತವಾ ಚರಿಸುವ 7

ದ್ವಾದಶಿ ಸಾಧನೆ ಬರಲು ಪ್ರತಿದಿನದಿ

ಶ್ರೀದನ ದರ್ಶನದಾ ನೇಮದ ಸಾಧನೆ

ವಿಷಯದಿ ಯೋಚಿಸುತಿರೆ ಹರಿ

ಮೋದದಿ ಮುನಿಗೊಲಿದಾ ಸೂಚಿಸಿದಾ 8

ಅರುಣೋದಯದಲಿ ಸುರಗಂಗೆಯು ತಾ

ವರ ಪುಷ್ಕರಣಿಯೊಳು ಬರುವಳು

ತರುರೂಪದಿ ನಾ ಬರುವೆನು ಬಿಡದಿರು

ಮರುದಿನದಾ ಚರಣೆ ಪಾರಣೆ9

ಎಂತು ಕರುಣವೊ ನಿರಂತರ ಭಜಿಪರ

ಚಿಂತಿತ ಫಲವೀವ ಕೇಶವ

ಇಂತು ಹರಿಯ ಗುಣ ಚಿಂತಿಸುತಿರಲು ನಿ

ಶಾಂತದಿ ಸರೋವರದಿ ವೇಗದಿ10


ಭಾಗೀರಥಿ ಜಲದಾಗಮ ವೀಕ್ಷಿಸಿ

ರಾಗದಿ ವಂದಿಸಿದ ತುತಿಸಿದ

ಯೋಗಿವರನುತ ಸ್ನಾನವಮಾಡಿ

ಬರುವಾಗಲೆ ಧ್ಯಾನಿಸಿದ ಹರಿಪದ11


ಆ ತರುವಾಯದಿ ಪಾರಿಜಾತ ತರು

ವ್ರಾತವ ನೋಡಿದನು ವಂದಿಸಿದನು

ಈತನೆ ನರಮೃಗನಾಥನೆನುತ ಮುನಿ

ಪ್ರಾತ:ಪಾರಣವ ಮಾಡಿದ ಜವ12


ಮೀಸಲು ಮನದಲಿ ಶೇಷಶಯನಗಾ-

ವಾಸಗಿರಿಯ ಸೇವಾ ಮಾಡುವ

ಭೂಸುರ ಗಣದಭಿಲಾಷೆಗಳನು

ಪೂರೈಸಿ ಪೊರೆವನೀತಾ ಪ್ರಖ್ಯಾತಾ 13

ಶ್ರೀಯುತ ಮಾರ್ಕಾಂಡೇಯರ ಚರಿತೆಯ

ಗಾಯನ ಫಲವಿದನು ಪೇಳುವೆನು

ಶ್ರೇಯಸ್ಸಾದನ ಕಾಯದಿ ಬಲದೀ-

ರ್ಘಾಯುತ್ವವ ಪಡೆವ ಮಾನವ 14

ಶರಣು ಜನರ ಸುರತರು ಕಾರ್ಪರ ಶಿರಿ

ನರಸಿಂಹನೆ ಈತ ಎನ್ನುತ

ನಿರುತ ಅನಂತನ ಗಿರಿಯ ಮಹಿಮೆಯನು

ಸ್ಮರಿಸುವ ನರಧನ್ಯಾ ಸನ್ಮಾನ್ಯ 15