Showing posts with label ನಡೆದು ಬಾರಯ್ಯ ಕೃಷ್ಣ ನಡೆದು bheemesha krishna NADEDU BAARAYYA KRISHNA NADEDU. Show all posts
Showing posts with label ನಡೆದು ಬಾರಯ್ಯ ಕೃಷ್ಣ ನಡೆದು bheemesha krishna NADEDU BAARAYYA KRISHNA NADEDU. Show all posts

Wednesday 1 December 2021

ನಡೆದು ಬಾರಯ್ಯ ಕೃಷ್ಣ ನಡೆದು ankita bheemesha krishna NADEDU BAARAYYA KRISHNA NADEDU



ನಡೆದು ಬಾರಯ್ಯ ಕೃಷ್ಣ ನಡೆದು ಪ


ಪಕ್ಷಿವಾಹನ ಪರಪೇಕ್ಷಾರಹಿತ ನಿನ್ನ ಕುಕ್ಷಿಯೊಳಗೆ ಜಗ

ರಕ್ಷಿಸುವಾತನೆಂದು ವಕ್ಷಸ್ಥಳದಿ ಶ್ರೀಮಾ-

ಲಕ್ಷ್ಮಿಧರಿಸಿ ಪಾಂಡುಪಕ್ಷನೆನಿಸಿ ನೀ ಪ-

ರೀಕ್ಷಕನುಳುಹಿದಂತಕ್ಷದಿ ನೋಡುತಧೋಕ್ಷಜ ಹರಿಯೆ 1


ಸತ್ಯವಂತನೆ ಕೇಳಸತ್ಯ ಅಜ್ಞಾನ ಭವ-

ಕತ್ತಲೊಳಗೆ ಬಹಳ ಶತ್ರು ಸಮೂಹದಲ್ಲಿ

ಸುತ್ತಿ ಬಳಲುವೆ ಕೇಳಾಪತ್ತು ಬಾಂಧವ ನಿನ್ನ

ಚಿತ್ತಕ್ಕೆ ತಂದು ಸಮಸ್ತ ಸುರೇಶ ನಿನ್ನ

ಹತ್ತಿಲೆ ಕರಿ ಸರ್ವೋತ್ತಮ ಹರಿಯೆ 2


ಧೀರ ಗಂಭೀರ ನಿನ್ನ ಸಾರಥ್ಯ ದೊರೆಯಲ್ವಿ-

ಚಾರ ಮಾಡಿದರು ನಿನ್ನಾರು ತಿಳಿಯಲಿಲ್ಲೊ

ಶೂರ ಸುತಗೆ ಸುಕುಮಾರನೆನಿಸಿದಂಥ ಅ-

ಪಾರ ಮಹಿಮನೆ ಸಮೀರಜ ಭವ ಸುರ

ನಾರದಪ್ರಿಯನೆ ಉದ್ಧಾರಮಾಡು ಎನ್ನನು 3


ಗಜರಾಜ ವರದನೆ ತ್ರಿಜಗದೊಡೆಯ ನಿನ್ನ

ಧ್ವಜ ವಜ್ರಾಂಕುಶ ಪಾದಭಜಕರೆನಿಸುವಂಥ

ಸುಜನರ್ವಂದಿತನಾದ ಕುಜನ ಕುಠಾರಿಯೆ ನೀ

ಅಜಮಿಳಗೊಲಿದಂಥಜಗಣೇಂದ್ರನ ಪ್ರಿಯ

ನಿಜವಾಗಿ ನೋಡೆನ್ನ ರಜತಮ ಕಳೆಯುವ 4


ಕಡಲಶಯನನಾದ ಉಡುರಾಜ್ವದನ ಬಿಟ್ಟು

ಭಿಡಿಯ ಭೀಮೇಶ ಕೃಷ್ಣ್ನೆನ್ನೊಡೆಯನೆನುತ ಬಂದ

ಬಡವ ಸುದಾಮಗಿಟ್ಟಿ ಹಿಡಿ ಹಿಡೀ ಎಂದು ಭಾಗ್ಯ

ತಡೆಯದೆ ನಾ ನಿನ್ನಡಿಗಳಿಗೆರಗುವೆ ಕೊಡು

ಕೊಡು ವರಗಳ ಪೊಡವಿ ಪಾಲಿಪನೆ 5

***