Showing posts with label ಮುದ್ದು ಮೋಹನವಿಟ್ಠಲ ಸಲಹೋ ಇವನಾ ಸಿರಿ ಮನೋಹರ ನಿನ್ನ shreevara vittala muddu mohana vittala stutih. Show all posts
Showing posts with label ಮುದ್ದು ಮೋಹನವಿಟ್ಠಲ ಸಲಹೋ ಇವನಾ ಸಿರಿ ಮನೋಹರ ನಿನ್ನ shreevara vittala muddu mohana vittala stutih. Show all posts

Saturday 1 May 2021

ಮುದ್ದು ಮೋಹನವಿಟ್ಠಲ ಸಲಹೋ ಇವನಾ ಸಿರಿ ಮನೋಹರ ನಿನ್ನ ankita shreevara vittala muddu mohana vittala stutih

 ಶ್ರೀ ರಾಘವೇಂದ್ರಾಚಾರ್ಯರು ಒಮ್ಮೆ ಶ್ರೀ ವಿಜಯರಾಯರ ಆರಾಧನೆಗೆ ಚಿಪ್ಪಗಿರಿಗೆ ಹೋಗಿದ್ದಾಗ ಶ್ರೀ ಶ್ರೀವರವಿಠ್ಠಲರನ್ನು ಭೇಟಿಯಾಗಿ ಅವರಿಂದ ಶ್ರೀ ವಿಜಯರಾಯರ ಮುಂಭಾಗದಲ್ಲಿಯೇ " ಮುದ್ದು ಮೋಹನ ವಿಠ್ಠಲ " ಎಂಬ ಅಂಕಿತವನ್ನು ಪಡೆದ ಸುಜೀವಿಗಳು.



ಮುದ್ದು ಮೋಹನವಿಟ್ಠಲ ಸಲಹೋ ಇವನಾ ಪ

ಸಿರಿ ಮನೋಹರ ನಿನ್ನ ಪ್ರಾರ್ಥಿಸುವೆ ನಿರುತ ಅ.ಪ


ಶಿರಿ ಬೊಮ್ಮ ಮೊದಲಾದ ಸುರರಿಂದ ಸೇವಿತನೆ

ಪರಮ ಕರುಣಾಳು ಹರಿ ಕರಿವರದನೇ

ನಿರುತದಲಿ ನಿನ್ನ ನಾಮ ಸ್ಮರಣೆಯನಿತ್ತು

ಕರುಣದಲಿ ರಕ್ಷಿಸೋ ಪರಮ ಪಾವನನೇ 1


ಗುರು ಹಿರಿಯರಲಿ ಭಕುತಿ ವಿಷಯದಲಿ ವಿರುಕುತೀ

ಪಿರಿದಾದ ಪಂಚಭೇದವನು ಅರುಪೀ

ಕರಿವರದನೇ ನಿನ್ನ ನಾಮಾಮೃತಸಾರ ಉಣಿಸೀ

ದುರಿತಗಳ ಪರಿಹರಿಸೋ ಪರಮಪಾವನನೇ 2


ನಾನು ನನ್ನದು ಎಂಬದುರಭಿಮಾನವನು ಬಿಡಿಸೀ

ಸಾನುರಾಗದಲಿ ತಾರತಮ್ಯಗಳ ತಿಳಿಸೋ

ಮಾನನಿಧಿ ನೀನೆ ಸರ್ವೋತ್ತಮಾನೆಂಬಂಥ

ಜ್ಞಾನದಾಯಕನಾಗೋ ಶ್ರೀ ವರವಿಟ್ಠಲಾ 3

***

ಮುದ್ದು ಮೋಹನವಿಟ್ಠಲ

ಸಲಹೋ ಇವನಾ ।। ಪಲ್ಲವಿ ।। 


ಸಿರಿ ಮನೋಹರ ನಿನ್ನ 

ಪ್ರಾರ್ಥಿಸುವೆ ನಿರುತಾ ।। ಅ. ಪ ।।


ಶಿರಿ ಬೊಮ್ಮ ಮೊದಲಾದ 

ಸುರರಿಂದ ಸೇವಿತನೆ ।

ಪರಮ ಕರುಣಾಳು 

ಹರಿ ಕರಿವರದನೆ ।

ನಿರುತದಲಿ ನಿನ್ನ ನಾಮ

ಸ್ಮರಣೆಯನ್ನಿತ್ತು ।

ಕರುಣದಲಿ ರಕ್ಷಿಸೋ 

ಪರಮ ಪಾವನನೆ ।। ಚರಣ ।। 


ಗುರು ಹಿರಿಯರಲಿ ಭಕುತಿ 

ವಿಷಯದಲಿ ವಿರಕುತಿ ।

ಪಿರಿದಾದ ಪಂಚ 

ಭೇದವನ್ನು ಅರುಹೀ ।

ಕರಿವರದನೆ ನಿನ್ನ 

ನಾಮಾಮೃತಸಾರ ಉಣಿಸಿ ।

ದುರಿತಗಳ ಪರಿಹರಿಸೋ 

ಪರಮ ಪಾವನನೆ ।। ಚರಣ ।।


ನಾನು ನನ್ನದುಯೆಂಬ 

ದುರಾಭಿಮಾನವನು ಬಿಡಿಸೀ ।

ಸಾನುರಾಗದಲಿ 

ತಾರತಮ್ಯವನ್ನು ತಿಳಿಸೋ ।

ಮಾನನಿಧಿ ನೀನೇ 

ಸರ್ವೋತ್ತಮನೆಂಬಂಥ ।

ಜ್ಞಾನದಾಯಕನಾಗೋ 

ಶ್ರೀವರವಿಠ್ಠಲಾ ।। ಚರಣ ।।

***