Showing posts with label ಭಾರಿಶ್ರೀಮಂತನ ಮನೆಯಲಿ ಹಬ್ಬವು ಮೀರಿದುತ್ಸಾಹದಿ ಜರುಗುತಿರೆ karigirisha ಸಾಂಗತ್ಯ sangatya. Show all posts
Showing posts with label ಭಾರಿಶ್ರೀಮಂತನ ಮನೆಯಲಿ ಹಬ್ಬವು ಮೀರಿದುತ್ಸಾಹದಿ ಜರುಗುತಿರೆ karigirisha ಸಾಂಗತ್ಯ sangatya. Show all posts

Wednesday 1 September 2021

ಭಾರಿಶ್ರೀಮಂತನ ಮನೆಯಲಿ ಹಬ್ಬವು ಮೀರಿದುತ್ಸಾಹದಿ ಜರುಗುತಿರೆ ankita karigirisha ಸಾಂಗತ್ಯ sangatya

 ಸಾಂಗತ್ಯ 

[ಉಗಾಭೋಗದಂತೆ ಅನಿಬದ್ಧ ಶೈಲಿಯಲ್ಲಿ ಹಾಡುವ ಪರಿಪಾಠವಿದೆ]


ಭಾರಿಶ್ರೀಮಂತನ ಮನೆಯಲಿ ಹಬ್ಬವು

ಮೀರಿದುತ್ಸಾಹದಿ ಜರುಗುತಿರೆ

ಗೌರವದಿಂದ ಆಹ್ವಾನಪಡೆದಿದ್ದ

ಧಾರುಣಿ ಸುರರನೇಕರು ಸೇರಿರೆ 1

ಧೀಮಂತ ಪರಿಮಳಾಚಾರ್ಯರಿಗಾಹ್ವಾನ

ಶ್ರೀಮಂತ ಕೊಟ್ಟಿರಲಾದರದಿ 

ಆ ಮಹಾಮಹಿಮರು ಪೋಗಿ ಒಂದೆಡೆಯೊಳು

ಸಾಮಾನ್ಯರಂತೆ ಕುಳಿತುನೇಮದಿ 2

ವೇದಸೂಕ್ತಗಳ ಪಾರಾಯಣಮಾಡುತ

ಬೂದಿಮುಚ್ಚಿದ ಕೆಂಡದಂತಿರಲು

ಸಾಧಾರಣ ಜನಕೆಂತು ಸಾಧ್ಯವು ಇವರ-

ಗಾಧ ಮಹಿಮೆಯನು ತಿಳಿಯಲು 3

ಬಂದಿದ್ದ ಭೂಸುರವೃಂದಕ್ಕೆ ತಕ್ಕಷ್ಟು

ಗಂಧವ ತೆಗೆಯಲು ತಕ್ಕವರ

ಮಂದಿಯೊಳರಸುತ ಗೃಹಸ್ಥನ ಪುರೋಹಿತ

ಬಂದು ನೋಡಿದ ನಮ್ಮ ಆಚಾರ್ಯರ 4

ತಕ್ಕವರಿವರೆಂದು ಫಕ್ಕನೆ ಪೇಳಿದ

ತಕ್ಕಷ್ಟು ಗಂಧವ ತೆಗೆಯಿರೆಂದು

ತಕ್ಕ ಸಾಣೆಯಕಲ್ಲು ಗಂಧದ ತುಂಡನು

ಸೊಕ್ಕಿನಿಂ ತಂದಿರಿಸಿದನಂದು 5

ಹರಿಇಚ್ಛೆಯಿಂದಲಿ ಆಚಾರ್ಯರಾದಿನ

ವರ ಅಗ್ನಿಸೂಕ್ತವ ಪಠಿಸುತ್ತಿಹ

ಸರಿಸಮಯಕೆ ಪುರೋಹಿತ ಬಂದವರನು

ಸಿರಿಗಂಧ ತೆಗೆಯಲು ನೇಮಿಸಿದ 6

ಪರಮಶಾಂತತೆಯಿಂದ ಪರಿಮಳಾಚಾರ್ಯರು

ಧರಣಿಸುರರ ಲೇಪನಕೆ ಗಂಧವ

ಅರೆಯುತ ಪಾರಾಯಣ ಮಾಡುತ್ತಿದ್ದರು

ಅರಿಯಲೊಶವೆ ಹರಿಯ ಸಂಕಲ್ಪವ 7

ತೆಗೆದ ಗಂಧವಾಗ ಪುರೋಹಿತನೊಂದೆಡೆ

ತೆಗೆದಿಟ್ಟು ಭೋಜನಪೂರ್ವದಲಿ

ಮಿಗಿಲಾಗಿ ದ್ವಿಜರಿಗೆ ಕೊಡಲವರುಲೇಪಿಸೆ

ಧಗಧಗವೆನಿಸಿತು ತಾಪದಲಿ 8

ಭೂಮಿಸುರರ ತಾಪವ ನೋಡಿ ಸಂತಾಪದ-

ಲಾ ಮಹಾ ಪರಿಮಳಾಚಾರ್ಯರಾಗ

ಸ್ವಾಮಿ ಶ್ರೀಕರಿಗಿರೀಶನ ಸ್ಮರಿಸಿ ಪಠಿಸಿದರ್

ನೇಮದಿ ವರುಣಸೂಕ್ತವ ಬೇಗ 9

***