Showing posts with label ತಪ್ಪುಗಳೆಣಿಸದೆ ಎನ್ನಪ್ಪ ಕಾಯಲಿಬೇಕು gurupranesha vittala TAPPUGALENISADE ENNAPPA KAAYALIBEKU. Show all posts
Showing posts with label ತಪ್ಪುಗಳೆಣಿಸದೆ ಎನ್ನಪ್ಪ ಕಾಯಲಿಬೇಕು gurupranesha vittala TAPPUGALENISADE ENNAPPA KAAYALIBEKU. Show all posts

Thursday 16 December 2021

ತಪ್ಪುಗಳೆಣಿಸದೆ ಎನ್ನಪ್ಪ ಕಾಯಲಿಬೇಕು ankita gurupranesha vittala TAPPUGALENISADE ENNAPPA KAAYALIBEKU

note:  gurupranesha  should be one word


ತಪ್ಪುಗಳೆಣಿಸಾದೆನ್ನಪ್ಪ ಕಾಯಲಿಬೇಕು ।
ಸರ್ಪ ಶಯನನ ದೂತಾ । 
ಇಪ್ಪತ್ತು ವಂದು ಕುಭಾಷ್ಯ -
ಮುರಿದರಾ । ಮ ।
ತ ಪ್ರವರ್ತಕ ರಾಘವೇಂದ್ರ -
ಮುನಿಪ ಮಹಾ ।। ಪಲ್ಲವಿ ।।

ಪ್ರತಿ ವರುಷಕೆ ಬಂದು । 
ನುತಿಸಿ ಪೋಗು ಯೆಂದು ।
ನತ ಸ್ವಪ್ನದಲಿ ನೀ ಬಂದೂ ।।
ಹಿತದಿಂದ ಪೇಳಲು ।
ರತನಾಗಿ ಧನದಿ । ಮ ।
ರತು ಬಿಟ್ಟೆ ನಿಮ್ಮನು ।
ಯತಿ ಕುಲೋತ್ತಮ ಇಂಥಾ ।। ಚರಣ ।।

ಸ್ನಾನ ಸಂಧ್ಯಾನ ಸುಜಪ ।
ತಪ ವ್ರತ ಹೋಮ ।
ಮೌನ ಮಾರ್ಗಗಳರಿಯೆ ।।
ಜ್ಞಾನಿಗಳಾನು । ಸಂ ।
ಧಾನ ಪೂರ್ವಕ ಪೂಜೆ ।
ಯಾನು ಮಾಡದೆ ದುಷ್ಟ ।
ಮಾನವರೊಳಗಿದ್ದೆ ।। ಚರಣ ।।

ಏಸು ಜನ್ಮದಿ ಬಂದಾ ।
ದೋಷವ ಕಳದು । ವಿ ।
ಶೇಷ ಸುಖವ ಕೊಡುವಾ ।।
ಈ ಸುವಾರ್ತಿಯ ಕೇಳಿ -
ಮೊರೆಹೊಕ್ಕ ಗುರುಪ್ರಾ ।
ಣೇಶ ವಿಠಲನ ದೂತಾ -
ಮತ್ಪ್ರೀತಾ ।। ಚರಣ ।।
****

ರಾಗ : ಧನಾಶ್ರೀ    ತಾಳ : ಅಟ್ಟ  (raga, taala may differ in audio)

ತಪ್ಪುಗಳೆಣಿಸದೆ ಎನ್ನಪ್ಪ ಕಾಯಲಿಬೇಕು
ಸರ್ಪಶಯನನ ದೂತಾ                               || ಪ ||
ಇಪ್ಪತ್ತೋಂದು ಕುಭಾಷ್ಯವ ಮುರಿದ ಸುಮತ ಪ್ರ
ವರ್ತಕ ರಾಘವೇಂದ್ರ – ಮುನಿಪ                 || ಅ ||

ಪ್ರತಿವರುಷ ಬಂದು ನುತಿಸಿ  ಪೋಗು ಎಂದು
ನತಸ್ವಪ್ನದಲಿ ನೀ ಬಂದು
ಹಿತದಿಂದ ಪೇಳಲು ರತನಾಗಿ ಧನದಿ ಮ
ರೆತುಬಿಟ್ಟೆ ನಿಮ್ಮನು – ಯತಿಕುಲೋತ್ತಮ            || ೧ ||

ಸ್ನಾನ ಸಂಧ್ಯಾನ ಸುಜಪತಪ ವ್ರತ ಹೋಮ
ಮೌನ ಮಾರ್ಗಗಳರಿಯೇ
ಜ್ಞಾನಿಗಳಾನುಸಂಧಾನಪೂರ್ವಕ ಪೂಜೆ
ಏನೂ ಮಾಡದೆ – ದುಷ್ಟಮಾನವರೊಳಗಿದೆ     || ೨ ||

ಏಸುಜನ್ಮದಿ ಬಂದ ದೋಷವ ಕಳೆದು ವಿ
ಶೇಷ ಸುಖವ ಕೊಡುವ
ಈ ಸುವಾರ್ತೆಯ ಕೇಳಿ ಮೊರೆಹೊಕ್ಕ ಗುರುಪ್ರಾ
ಣೇಶವಿಠ್ಠಲನ ದೂತಾ – ಮತ್ಪ್ರೀತಾ                  || ೩ ||
*******