Thursday 16 December 2021

ತಪ್ಪುಗಳೆಣಿಸದೆ ಎನ್ನಪ್ಪ ಕಾಯಲಿಬೇಕು ankita gurupranesha vittala TAPPUGALENISADE ENNAPPA KAAYALIBEKU

note:  gurupranesha  should be one word


ತಪ್ಪುಗಳೆಣಿಸಾದೆನ್ನಪ್ಪ ಕಾಯಲಿಬೇಕು ।
ಸರ್ಪ ಶಯನನ ದೂತಾ । 
ಇಪ್ಪತ್ತು ವಂದು ಕುಭಾಷ್ಯ -
ಮುರಿದರಾ । ಮ ।
ತ ಪ್ರವರ್ತಕ ರಾಘವೇಂದ್ರ -
ಮುನಿಪ ಮಹಾ ।। ಪಲ್ಲವಿ ।।

ಪ್ರತಿ ವರುಷಕೆ ಬಂದು । 
ನುತಿಸಿ ಪೋಗು ಯೆಂದು ।
ನತ ಸ್ವಪ್ನದಲಿ ನೀ ಬಂದೂ ।।
ಹಿತದಿಂದ ಪೇಳಲು ।
ರತನಾಗಿ ಧನದಿ । ಮ ।
ರತು ಬಿಟ್ಟೆ ನಿಮ್ಮನು ।
ಯತಿ ಕುಲೋತ್ತಮ ಇಂಥಾ ।। ಚರಣ ।।

ಸ್ನಾನ ಸಂಧ್ಯಾನ ಸುಜಪ ।
ತಪ ವ್ರತ ಹೋಮ ।
ಮೌನ ಮಾರ್ಗಗಳರಿಯೆ ।।
ಜ್ಞಾನಿಗಳಾನು । ಸಂ ।
ಧಾನ ಪೂರ್ವಕ ಪೂಜೆ ।
ಯಾನು ಮಾಡದೆ ದುಷ್ಟ ।
ಮಾನವರೊಳಗಿದ್ದೆ ।। ಚರಣ ।।

ಏಸು ಜನ್ಮದಿ ಬಂದಾ ।
ದೋಷವ ಕಳದು । ವಿ ।
ಶೇಷ ಸುಖವ ಕೊಡುವಾ ।।
ಈ ಸುವಾರ್ತಿಯ ಕೇಳಿ -
ಮೊರೆಹೊಕ್ಕ ಗುರುಪ್ರಾ ।
ಣೇಶ ವಿಠಲನ ದೂತಾ -
ಮತ್ಪ್ರೀತಾ ।। ಚರಣ ।।
****

ರಾಗ : ಧನಾಶ್ರೀ    ತಾಳ : ಅಟ್ಟ  (raga, taala may differ in audio)

ತಪ್ಪುಗಳೆಣಿಸದೆ ಎನ್ನಪ್ಪ ಕಾಯಲಿಬೇಕು
ಸರ್ಪಶಯನನ ದೂತಾ                               || ಪ ||
ಇಪ್ಪತ್ತೋಂದು ಕುಭಾಷ್ಯವ ಮುರಿದ ಸುಮತ ಪ್ರ
ವರ್ತಕ ರಾಘವೇಂದ್ರ – ಮುನಿಪ                 || ಅ ||

ಪ್ರತಿವರುಷ ಬಂದು ನುತಿಸಿ  ಪೋಗು ಎಂದು
ನತಸ್ವಪ್ನದಲಿ ನೀ ಬಂದು
ಹಿತದಿಂದ ಪೇಳಲು ರತನಾಗಿ ಧನದಿ ಮ
ರೆತುಬಿಟ್ಟೆ ನಿಮ್ಮನು – ಯತಿಕುಲೋತ್ತಮ            || ೧ ||

ಸ್ನಾನ ಸಂಧ್ಯಾನ ಸುಜಪತಪ ವ್ರತ ಹೋಮ
ಮೌನ ಮಾರ್ಗಗಳರಿಯೇ
ಜ್ಞಾನಿಗಳಾನುಸಂಧಾನಪೂರ್ವಕ ಪೂಜೆ
ಏನೂ ಮಾಡದೆ – ದುಷ್ಟಮಾನವರೊಳಗಿದೆ     || ೨ ||

ಏಸುಜನ್ಮದಿ ಬಂದ ದೋಷವ ಕಳೆದು ವಿ
ಶೇಷ ಸುಖವ ಕೊಡುವ
ಈ ಸುವಾರ್ತೆಯ ಕೇಳಿ ಮೊರೆಹೊಕ್ಕ ಗುರುಪ್ರಾ
ಣೇಶವಿಠ್ಠಲನ ದೂತಾ – ಮತ್ಪ್ರೀತಾ                  || ೩ ||
*******

No comments:

Post a Comment