Showing posts with label ಶರಣಾಗತರ ಪೊರೆವ ಪರಮಾದ್ಭುತಚರ್ಯ tandevenkatesha vittala. Show all posts
Showing posts with label ಶರಣಾಗತರ ಪೊರೆವ ಪರಮಾದ್ಭುತಚರ್ಯ tandevenkatesha vittala. Show all posts

Monday 6 September 2021

ಶರಣಾಗತರ ಪೊರೆವ ಪರಮಾದ್ಭುತಚರ್ಯ ankita tandevenkatesha vittala

 ankita ತಂದೆವೆಂಕಟೇಶವಿಠಲ

ರಾಗ: ಭೈರವಿ ತಾಳ: ಆದಿ


ಶರಣಾಗತರ ಪೊರೆವ ಪರಮಾದ್ಭುತಚರ್ಯ

ಗುರುವೇ ಪಾಲಿಸೊ ನಿರುತ ಶ್ರೀರಾಘವೇಂದ್ರಾ


ದುರುಳ ದುಸ್ತರ್ಕದುಸ್ತರ ಮೋಹತಿಮಿರಕೆ

ತರುಣಾರ್ಕಸನ್ನಿಭ ಗುರುರಾಘವೇಂದ್ರಾ ಅ.ಪ


ಪ್ರಥಿತ ಚತೂಷಷ್ಟಿವಿತರಣವಿದ್ಯಾಮಾ-

ನಿತ ಮನ್ಮಥಾಹಿತಾಪ್ರತಿ ರಾಘವೇಂದ್ರ

ಕೃತಕ್ರತುಸದ್ಮ ಸನ್ಹಿತಶ್ರಿತಜನಪರಿ-

ವೃತ ಬೃಂದಾವನಸ್ಥಿತ ಶ್ರೀ ರಾಘವೇಂದ್ರಾ 1

ಅಲವಬೋಧಾಗಮ ಜಲನಿಧಿ ಚಂದ್ರಮ

ವಿಲಸಿತಗುಣಗಣಾನ್ವಿತ ರಾಘವೇಂದ್ರಾ

ಖಳರಾಜಸುಕುಮಾರ ಖಳರಾಜಸೋದರ

ಖಳಚರ ಖಳಹರಕುಲಜ ರಾಘವೇಂದ್ರಾ 2

ಸ್ತುತ್ಯ ಗ್ರಹಫಲ ಸಕಲಸತ್ತೀರ್ಥಾಮಿತ ಫಲ-

ವಿತ್ತಪುದು ತವ ಸ್ತವನ ಶ್ರೀರಾಘವೇಂದ್ರಾ

ವಿತ್ತವಿಹೀನತಾಪತ್ಯರಾಹಿತ್ಯಾದಿ

ತೆತ್ತದೋಷಕೆ ಅಪಮೃತ್ಯು ನೀ ರಾಘವೇಂದ್ರಾ 3

ಖಂಡಾರ್ಥ ವಿವೃತ್ತ್ಯಾದ್ಯ ಖಂಡಾಲಾಯುಧಧರ

ಪಂಡಿತೋತ್ಪಲಮುಖಾ ಖಂಡೇಂದು ರಾಘವೇಂದ್ರಾ

ದಂಡಕಾಷಾಯ ಕಮಂಡಲುಧಾರಿ ಕೋ-

ದಂಡಪಾಣಿ ಪಾದ ಬಂಡುಣಿ ರಾಘವೇಂದ್ರಾ 4

ತಂದೆವೆಂಕಟೇಶಾವಿಠಲಾ ಪಾದಾರ್ಚಕ

ನಿಂದಕಜನಕದಳಿ ಸಿಂಧೂರ ರಾಘವೇಂದ್ರಾ

ಸುಂದರ ಯತಿವರ ವೃಂದಾವನವಾಸಿ

ವಂದಿತಜನಸುರಮಂದಾರ ರಾಘವೇಂದ್ರಾ 5

***

ದುಸ್ತರ್ಕ=ಕೆಟ್ಟ ವಾದ; ದುಸ್ತರ=ದಾಟಲಶಕ್ಯವಾದ; 

ಪ್ರಥಿತ=ಹೆಸರುವಾಸಿಯಾದ; ಚತೂಷಷ್ಠಿ ವಿತರಣ 

ವಿದ್ಯ=64 ವಿದ್ಯೆಗಳು; ಕೃತಕ್ರತು ಸದ್ಮ=ಯಾಗ 

ಮಾಡಿದ ಸ್ಥಳ; ಖಳ ರಾಜ ಸೋದರ=ವಿಭೀಷಣ; 

ಖಳಚರ=ಬಾಹ್ಲೀಕ (ದುರ್ಯೋಧನನಿಗೆ ಸಹಾಯಕನಾಗಿ);

 ಖಳಹರಕುಲಜ=ವಾಯುದೇವರ ಅಂದರೆ 

 ಶ್ರೀಮಧ್ವಾಚಾರ್ಯರ ಪರಂಪರೆಯಲ್ಲಿ ಬಂದ 

 ಶ್ರೀ ವ್ಯಾಸರಾಜರು ; ಆಖಂಡಾಲಾಯುದಧರ=ಇಂದ್ರನ 

 ವಜ್ರಾಯುಧಕ್ಕೆ ಸಮನಾದ ಗ್ರಂಥಗಳನ್ನು ಹೊಂದಿರುವ 

 (ರಚಿಸಿರುವ); ಪಂಡಿತೋತ್ಪಲ ಮುಖ 

 ಖಂಡೇಂದು=ಪಂಡಿತರ ಮುಖವೆಂಬ ನೈದಿಲೆಗೆ 

 ಪೂರ್ಣಚಂದ್ರ ಸದೃಶ; ಬಂಡುಣಿ=ದುಂಬಿ; 

 ನಿಂದಕಜನಕದಳಿ ಸಿಂಧೂರ=ನಿಂದಕರೆಂಬ 

 ಬಾಳೆಯ ತೋಟಕ್ಕೆ ಆನೆಯಂತೆ;