Showing posts with label ಗುರುಗೋವಿಂದವಿಠಲನೆ ನೀನವರ tandemuddu mohana vittala gurugovinda dasa stutih. Show all posts
Showing posts with label ಗುರುಗೋವಿಂದವಿಠಲನೆ ನೀನವರ tandemuddu mohana vittala gurugovinda dasa stutih. Show all posts

Saturday 1 May 2021

ಗುರುಗೋವಿಂದವಿಠಲನೆ ನೀನವರ ankita tandemuddu mohana vittala gurugovinda dasa stutih

 ಮೈಸೂರಿನ ಶ್ರೀ ಗೋವಿಂದರಾಯರಿಗೆ ಪ್ರಮಾಥಿ ನಾಮ ಸಂವತ್ಸರದ ಫಾಲ್ಗುಣ ಬಹುಳ ಪ್ರತಿಪದೆಯಂದು ( 24.03.1940 ) ಅಂಕಿತೋಪದೇಶವನ್ನು ತಮ್ಮ ಬಿಂಬಮೂರ್ತಿಯನ್ನು ಹೀಗೆ ಪ್ರಾರ್ಥಿಸುತ್ತಾ ಅನುಗ್ರಹಿಸಿದರು.

ರಾಗ : ಕಾಂಬೋಧಿ ತಾಳ : ಝಂಪೆ


ಗುರು ಗೋವಿಂದವಿಠಲನೆ ನೀನವರ ।

ಕರುಣಾ ಕಟಾಕ್ಷದಿಂದೀಕ್ಷಿಸುತಾ 

ಕಾಪಾಡೋ ಹರಿಯೇ  ।। ಪಲ್ಲವಿ ।।


ಗರುಡ ಗಮನನೆ ದೇವ -

ಗರ್ವಗಳ ಪರಿಹರಿಸಿ ।

ಸರ್ವಾಂತರಾತ್ಮಕನೇ 

ಕಾಪಾಡೋ ಹರಿಯೇ  ।। ಅ. ಪ ।।

ಸೃಷ್ಟ್ಯಾದಿಕರ್ತನೇ ಸುಗುಣ 

ಮೂರುತಿ ದೇವಾ ।

ಕಷ್ಟಗಳ ಪರಿಹರಿಸಿ 

ಕಾಪಾಡೋ ಹರಿಯೇ ।

ಕೃಷ್ಣಮೂರುತಿ ಹೃದಯ 

ಅಷ್ಟದಳ ಮಧ್ಯದಲ್ಲಿ ।

ದೃಷ್ಟಿ ಗೋಚರನಾಗಿ 

ಕಾಪಾಡೋ ಹರಿಯೇ ।। ಚರಣ ।।

ಅಪಾರ ಮಹಿಮನೆ 

ಆಪದ್ಬಾಂಧವನಾಗಿ ।

ತಾಪತ್ರಯಗಳ ಕಡಿದು 

ಕಾಪಾಡೋ ಹರಿಯೇ ।

ಕೋಪ ತಾಪಾದಿ ದುರ್ಗಗಳನೆ 

ಪರಿಹರಿಸಿ ಭವ ।

ಕೂಪಾರದಿಂದೆತ್ತಿ ನೀ 

ಕಾಪಾಡೋ ಹರಿಯೇ ।। ಚರಣ ।।

ಹರಿಯೇ ಸರ್ವೋತ್ತಮ 

ಶಿರಿವಾಯು ಮೊದಲಾದ ।

ಸುರರೆಲ್ಲ ಕಿಂಕರರೆಂಬ ।

ವರ ಮಧ್ವ ಶಾಸ್ತ್ರ ಸಾರ್ವನೆ 

ತಿಳಿಸಿ ಕಾಪಾಡೋ ಹರಿಯೇ ।

ಪರಮ ಪುರುಷನೆ ತಂದೆ -

ಮುದ್ದುಮೋಹನವಿಠಲನೇ ನಿನ್ನ ।

ಪರತರಾತ್ಮಕವಾದ ರೂಪವನೆ 

ತೋರಿ ಕಾಪಾಡೋ ಹರಿಯೇ ।। ಚರಣ ।।

****