Saturday 1 May 2021

ಗುರುಗೋವಿಂದವಿಠಲನೆ ನೀನವರ ankita tandemuddu mohana vittala gurugovinda dasa stutih

 ಮೈಸೂರಿನ ಶ್ರೀ ಗೋವಿಂದರಾಯರಿಗೆ ಪ್ರಮಾಥಿ ನಾಮ ಸಂವತ್ಸರದ ಫಾಲ್ಗುಣ ಬಹುಳ ಪ್ರತಿಪದೆಯಂದು ( 24.03.1940 ) ಅಂಕಿತೋಪದೇಶವನ್ನು ತಮ್ಮ ಬಿಂಬಮೂರ್ತಿಯನ್ನು ಹೀಗೆ ಪ್ರಾರ್ಥಿಸುತ್ತಾ ಅನುಗ್ರಹಿಸಿದರು.

ರಾಗ : ಕಾಂಬೋಧಿ ತಾಳ : ಝಂಪೆ


ಗುರು ಗೋವಿಂದವಿಠಲನೆ ನೀನವರ ।

ಕರುಣಾ ಕಟಾಕ್ಷದಿಂದೀಕ್ಷಿಸುತಾ 

ಕಾಪಾಡೋ ಹರಿಯೇ  ।। ಪಲ್ಲವಿ ।।


ಗರುಡ ಗಮನನೆ ದೇವ -

ಗರ್ವಗಳ ಪರಿಹರಿಸಿ ।

ಸರ್ವಾಂತರಾತ್ಮಕನೇ 

ಕಾಪಾಡೋ ಹರಿಯೇ  ।। ಅ. ಪ ।।

ಸೃಷ್ಟ್ಯಾದಿಕರ್ತನೇ ಸುಗುಣ 

ಮೂರುತಿ ದೇವಾ ।

ಕಷ್ಟಗಳ ಪರಿಹರಿಸಿ 

ಕಾಪಾಡೋ ಹರಿಯೇ ।

ಕೃಷ್ಣಮೂರುತಿ ಹೃದಯ 

ಅಷ್ಟದಳ ಮಧ್ಯದಲ್ಲಿ ।

ದೃಷ್ಟಿ ಗೋಚರನಾಗಿ 

ಕಾಪಾಡೋ ಹರಿಯೇ ।। ಚರಣ ।।

ಅಪಾರ ಮಹಿಮನೆ 

ಆಪದ್ಬಾಂಧವನಾಗಿ ।

ತಾಪತ್ರಯಗಳ ಕಡಿದು 

ಕಾಪಾಡೋ ಹರಿಯೇ ।

ಕೋಪ ತಾಪಾದಿ ದುರ್ಗಗಳನೆ 

ಪರಿಹರಿಸಿ ಭವ ।

ಕೂಪಾರದಿಂದೆತ್ತಿ ನೀ 

ಕಾಪಾಡೋ ಹರಿಯೇ ।। ಚರಣ ।।

ಹರಿಯೇ ಸರ್ವೋತ್ತಮ 

ಶಿರಿವಾಯು ಮೊದಲಾದ ।

ಸುರರೆಲ್ಲ ಕಿಂಕರರೆಂಬ ।

ವರ ಮಧ್ವ ಶಾಸ್ತ್ರ ಸಾರ್ವನೆ 

ತಿಳಿಸಿ ಕಾಪಾಡೋ ಹರಿಯೇ ।

ಪರಮ ಪುರುಷನೆ ತಂದೆ -

ಮುದ್ದುಮೋಹನವಿಠಲನೇ ನಿನ್ನ ।

ಪರತರಾತ್ಮಕವಾದ ರೂಪವನೆ 

ತೋರಿ ಕಾಪಾಡೋ ಹರಿಯೇ ।। ಚರಣ ।।

****

No comments:

Post a Comment