Showing posts with label ಕೊಡುವಕರ್ತ ಬೇರೆ ಇರುತಿರೆ ಬಿಡು ಬಿಡು ಚಿಂತೆಯನು purandara vittala KODUVA KARTRU BERE IRUTIRE BIDU BIDU CHINTEYANU. Show all posts
Showing posts with label ಕೊಡುವಕರ್ತ ಬೇರೆ ಇರುತಿರೆ ಬಿಡು ಬಿಡು ಚಿಂತೆಯನು purandara vittala KODUVA KARTRU BERE IRUTIRE BIDU BIDU CHINTEYANU. Show all posts

Wednesday 17 November 2021

ಕೊಡುವಕರ್ತ ಬೇರೆ ಇರುತಿರೆ ಬಿಡು ಬಿಡು ಚಿಂತೆಯನು purandara vittala KODUVA KARTRU BERE IRUTIRE BIDU BIDU CHINTEYANU



ಕೊಡುವ ಕರ್ತು ಬೇರೆ ಇರುತಿರೆ
ಬಿಡು ಬಿಡು ಚಿಂತೆಯನು ||ಪ||

ಒಡೆಯನಾಗಿ ಮೂರ್ಜಗವನು ಪಾಲಿಪ
ಬಡವರುದ್ಧಾರಕ ಭಕ್ತರೊಡೆಯ ಹರಿ ||ಅ.ಪ||

ಕಲ್ಲಿನೊಳಗೆ ಇರುವ ಕಪ್ಪೆಗೆ
ಅಲ್ಲಿ ಉದಕ ಕೊಡುವ
ಎಲ್ಲ ಕೋಟಿ ಜೀವರಾಶಿಗಳನೆ ಕಾಯ್ವ
ವಲ್ಲಭ ಶ್ರೀಹರಿ ಎಲ್ಲೆಲ್ಲಿರುತಿರೆ ||

ಆನೆಗೈದು ಮಣದ ಆಹಾರವ
ತಾನೆ ತಂದು ಕೊಡುವ
ದೀನರೊಡೆಯ ಶ್ರೀನಿವಾಸ ದಯಾನಿಧಿ
ಮಾನದಿಂದಲಿ ಕಾಯ್ವ ಭಾನುಕೋಟಿತೇಜ ||

ಸರಸಿಜಾಕ್ಷ ತನ್ನ ಸೇರಿದ
ನರರ ಬಿಡನು ಘನ್ನ
ಪರಮದಯಾನಿಧಿ ಭಕುತರ ಸಲಹುವ
ಪುರಂದರವಿಟ್ಠಲ ಪುಷ್ಪಶರನ ಪಿತ ||
***

ರಾಗ ಸುರುಟಿ ಅಟತಾಳ  (raga, taala may differ in audio)
ರಾಗ ಸುರುಟಿ ಆದಿತಾಳ

pallavi

koDuva kartu bEre irutire biDu biDu cinteyanu

anupallavi

oDeyanAgi mUjagavanu pAlipa badavaruDDhAraka bhaktateraDeya hari

caraNam 1

kalliloLage iruva kappage alli udaga koDuva ella kOTi
jIva rAshigaLane kAiva vallabha shrI hari ellellirutire

caraNam 2

Ane kaidu maNada AhArava tAne tandu koDuva dInaroDeya
shrInivAsa dayAnidhi mAnadindali kAiva bhAnu kOTi tEja

caraNam 3

sarasijAkSa tanna sErida narara biDanu ghanna parama
dayAnidhi bhakutara salahuva purandara viTTala puSpa sharana pita
***


ಕೊಡುವ ಕರ್ತು ಬೇರೆ , ಮನದಲ್ಲಿ ಬಿಡು ಬಿಡು ಚಿಂತೆಯನು ||ಪ||
ಬಡತನೈಶ್ವರ್ಯ ಎರಡಕ್ಕೆ ಕಾರಣ , ಒಡೆಯ ಶ್ರೀವೆಂಕಟರಮಣನು ತಾನೆ ||ಅ||

ಜನನವಾಗದ ಮುನ್ನ ಜನನಿಯ ತನುವಿನೊಳಗೆ ಪಾಲ
ಜನನವಾದ ಬಳಿಕ ಜನನಿಯ ಮೊಲೆಯ ತುಳಿಯ ತುಳಿ-
ಯುಣಿಸುತ ಬೆಳೆಸುವ ಜನವ ||

ಹೆಣ್ಣು ಹೊನ್ನು ಮಣ್ಣು, ಈ ಮೂರನು, ಮುನ್ನ ಪಡೆಯಲಿಲ್ಲ
ಅನ್ಯರ ನೋಡಿ ಸಹಿಸಲಾರದೆ, ಖಿನ್ನನಾಗಿ ನೀ ಬಳಲುವುದೇಕೆ ||

ತಂದೆ ಫಲಗಳಿಲ್ಲದೆ ಇರುತಿರೆ, ತಂದು ಬಯಸಲುಂಟೆ
ತಂದೆ ಪುರಂದರವಿಠಲರಾಯನ ದಯಬಾರೆ, ಅಂದಿಗೆ ಇಹಪರ ಸುಖಭೋಗ ||
***

ಕೊಡುವಕರ್ತ ಬೇರೆ ಇರುತಿರೆ -ಬಿಡುಬಿಡು ಚಿಂತೆಯನು ಪ.

ಒಡೆಯನಾಗಿ ಮೂಜಗವನು ಪಾಲಿಪ |ಬಡವರಾಧಾರಿಯು ಭಕ್ತರ ಪ್ರಿಯನು ಅಪಕಲ್ಲಿನೊಳಗೆ ಇರುವ - ಕಪ್ಪೆಗೆ - |ಅಲ್ಲೆ ಉದಕಕೊಡುವ |ಎಲ್ಲ ಕೋಟಿ ಜೀವರಾಶಿಗಳನೆ ಕಾಯ್ವ |ವಲ್ಲಭಶ್ರೀಹರಿ ಎಲ್ಲಿಯು ಇರುತಿರೆ|1||

ಆನೆಗೈದುಮಣದಾ - ಆಹಾರವ |ತಾನೆ ತಂದು ಕೊಡುವ |ದೀನರೊಡೆಯ ಶ್ರೀನಿವಾಸ ದಯಾನಿಧಿ |ಮಾನದಿಂದಲಿ ಕಾಯ್ವ ಭಾನುಕೋಟಿತೇಜ2

ಸರಸಿಜಾಕ್ಷ ತನ್ನ - ಸೇರಿದ |ನರರನು ಬಿಡನಣ್ಣ |ಪರಮದಯಾನಿಧಿ ಭಕುತರ ಸಲಹುವ |ಪುರಂದರವಿಠಲನು ಪುಷ್ಪಶರನ ಪಿತ 3
****