Showing posts with label ಭಜಿಸಿ ಬದುಕು ನಿತ್ಯ ವಿಜಯದಾಸರ gopala vittala BHAJISI BADUKU NITYA VIJAYADASARA VIJAYADASA STUTIH. Show all posts
Showing posts with label ಭಜಿಸಿ ಬದುಕು ನಿತ್ಯ ವಿಜಯದಾಸರ gopala vittala BHAJISI BADUKU NITYA VIJAYADASARA VIJAYADASA STUTIH. Show all posts

Thursday 26 December 2019

ಭಜಿಸಿ ಬದುಕು ನಿತ್ಯ ವಿಜಯದಾಸರ ankita gopala vittala BHAJISI BADUKU NITYA VIJAYADASARA VIJAYADASA STUTIH



ರಾಗ ಸಾರಂಗ       ಖಂಡಛಾಪುತಾಳ
Audio by Mrs. Nandini Sripad
 

ಶ್ರೀ ಗೋಪಾಲದಾಸರ ಕೃತಿ  


ಭಜಿಸಿ ಬದುಕು ನಿತ್ಯ ವಿಜಯದಾಸರ ಪಾದ ।

ರಜವು ಸೇವಿಸು ಬ್ಯಾಗ ನಿಜವೊ ನಿಜವೊ ॥ ಪ ॥


ಕಾಮಧೇನಿನ ಕಂಡು ಕರದು ಕೊಂಡಂತೆನ್ನ ।

ಗ್ರಾಮಗೋವಿನ ಪಾಲು ಕರೆದು ಕೊಂಬುವಿಯಾ ॥

ತಾಮರಸ ಬಂಧು ಕಂಡರೆ ತಮಸು ಹಾರಿದಂತೆ ।

ಧೂಮ ಪೊರಡುವ ಉರಿಗೆ ತಮವು ಓಡುವುದೇ ॥ 1 ॥


ಕಲ್ಪವೃಕ್ಷವು ಕಂಡು ಬೇಡಿದ್ದು ಕೊಡುವಂತೆ ।

ಮಳ್ಪೇ ಮುತ್ತದ ಗಿಡವು ಕೊಡಬಲ್ಲದೆ ॥

ಕಲ್ಪಾಯು ಕೊಡುವ ಚಿಂತಾಮಣಿಯು ಕೊಡುವಂತೆ ।

ಅಲ್ಪ ಚಿಂತಾಕ ಬೀಜವನು ತಾ ಕೊಡುವದೆ ॥ 2 ॥


ಹಲವು ಸಾಧನ ಮಾಡಿ ಬಳಲಿನ್ಯಾಕೆ ನೀ ।

ನಿಲಿಸು ನಿಗಮಗಳ ಧ್ಯಾನ ನಿಜ ಮನಕೆ ॥

ತಿಳಕೊ ಇವರೆ ನಿನಗೆ ಗತಿ ಪೊಂದಿಪದಕೆ ।

ಒಲಿವ ಗೋಪಾಲವಿಠಲ ಸಂಶಯವಿಲ್ಲದಕೆ ॥ 3 ॥

***********