Showing posts with label ಕರುಣ ಬಾರದೆ ವಿಠ್ಠಲಾ ಶ್ರೀ ಪಾಂಡುರಂಗ gopalakrishna vittala. Show all posts
Showing posts with label ಕರುಣ ಬಾರದೆ ವಿಠ್ಠಲಾ ಶ್ರೀ ಪಾಂಡುರಂಗ gopalakrishna vittala. Show all posts

Sunday 1 August 2021

ಕರುಣ ಬಾರದೆ ವಿಠ್ಠಲಾ ಶ್ರೀ ಪಾಂಡುರಂಗ ankita gopalakrishna vittala

ಕರುಣ ಬಾರದೆ ವಿಠ್ಠಲಾ | ಶ್ರೀ ಪಾಂಡುರಂಗ ಪ.


ಶರಣಳಲ್ಲವೆ ನಿನ್ನ ಚರಣ

ಸ್ಮರಣೆ ಮಾಡುತ ಪೊರೆ ಎಂದೆನ್ನುತ

ವರಲುವಾ ಧ್ವನಿ ಕೇಳದೇ ಈ

ಪರಿಯ ಗರ್ವವಿದೇನೊ ಹರಿಯೆ ಅ.

ದೂರದಿಂದಲಿ ಬಂದೆನೋ | ಇಲ್ಲಿಂದ ಮುಂದೆ

ದಾರಿ ಕಾಣದೆ ನಿಂದೆನೋ

ದ್ವಾರಕಾಪತಿ ನೀನಲ್ಲದಿ

ನ್ನಾರು ಕಾಯುವರೀಗ ಪೇಳು

ಸಾರಿದೆನು ನಿನ್ನಂಘ್ರಿ ಕಮಲವ

ಚಾರು ಚರಿತನೆ ಮಾರನೈಯ್ಯ 1

ತನುಸುಖ ಬೇಡಲಿಲ್ಲಾ | ನಿನ್ನ ನಾನು

ಘನವಾಗಿ ಕಾಡಲಿಲ್ಲ

ಮನದ ಹಂಬಲ ನೀನೆ ಬಲ್ಲೆಯೊ

ಮನಕೆ ತಾರದೆ ಸುಮ್ಮನಿಪ್ಪೆಯೋ

ಎನಗೆ ಪ್ರೇರಕ ನೀನೆ ಅಲ್ಲವೆ

ನಿನಗೆ ದಾಸಳು ನಾನು ಅಲ್ಲವೆ 2

ಕರೆಕರೆ ಪಡಿಸುವುದೂ | ಸರಿಯಲ್ಲ ನಿನಗೆ

ಕರಿವರದ ಕೇಳು ಇದೂ

ನರಸಖನೆ ದಯದಿಂದ ನಿನ್ನ

ಚರಣ ದರುಶನವಿತ್ತೆ ಒಲಿದು

ಕರಪಿಡಿದು ಸಲಹೆಂದರೀಗ

ತೆರೆದು ನೋಡದೆ ನೇತ್ರವಿರುವರೆ 3

e್ಞÁನಿ ಹೃತ್ಕಮಲವಾಸ | ಶ್ರೀ ರುಕ್ಮಿಣೀಶ

ಭಾನುಕೋಟಿ ಪ್ರಕಾಶ

ನೀನೆ ಗತಿ ಇನ್ನಿಲ್ಲ ಅನ್ಯರು

ಸಾನುರಾಗದಿ ಸಲಹೊ ಎನ್ನಲು

ಆನನದಿ ಈಕ್ಷಿಸದೆ ನಿಂತರೆ

ಮಾನ ಉಳಿವುದೆ ಭಕ್ತವತ್ಸಲ 4

ಇಟ್ಟಿಗೆ ಕೊಟ್ಟವನೊ ಕೊಟ್ಟನಿನ್ನೇನು

ಅಷ್ಟು ಭಾಗ್ಯವನೂ

ಕೊಟ್ಟೆ ಬಡ ಬ್ರಾಹ್ಮಣನ ಅವಲಿಗೆ

ದೃಷ್ಟಿ ಬಿದ್ದರೆ ಕಷ್ಟ ಉಂಟೆ

ಕೊಟ್ಟು ಅಭಯ ಪೊರೆ ಗೋಪಾಲ-

ಕೃಷ್ಣವಿಠ್ಠಲ ಮನದಿ ತೋರೋ5

****