Showing posts with label ಸ್ಮರಿಸಿ ಬಾಳ್ವೆನೂ ಪದ ನಿರೇಜದ್ವಯವನೂ tandevenkatesha vittala. Show all posts
Showing posts with label ಸ್ಮರಿಸಿ ಬಾಳ್ವೆನೂ ಪದ ನಿರೇಜದ್ವಯವನೂ tandevenkatesha vittala. Show all posts

Monday 6 September 2021

ಸ್ಮರಿಸಿ ಬಾಳ್ವೆನೂ ಪದ ನಿರೇಜದ್ವಯವನೂ ankita tandevenkatesha vittala

 ankita ತಂದೆವೆಂಕಟೇಶವಿಠಲ

ರಾಗ: ಪೀಲು ತಾಳ: ಆದಿ


ಸ್ಮರಿಸಿ ಬಾಳ್ವೆನೂ ಪದ ನಿರೇಜದ್ವಯವನೂ 

ಪೊರೆಯಲೆಮ್ಮನು ಗುರುಸುಧೀಂದ್ರತನುಜನೂ  ಪ 


ಜ್ಞಾನ ಭಕುತಿಯಾ ಸಮೀಚೀನರಕ್ತಿಯಾ 

ಧ್ಯಾನಯುಕ್ತಿಯಾ ಕೊಡುವ ಭವ್ಯವ್ಯಕ್ತಿಯಾ

ಪರಮಪಾವನಾ ಯಶೋಧರ ಸುಮುನಿಪನ 

ಪುರುಟಶಯನನ ಉದರಪುಣ್ಯರತ್ನನ

ವ್ಯಾಸರಾಜನಾ ಸರ್ವಕ್ಲೇಶ ಭಂಜನ 

ಭಾಸ್ವದಾರ್ಯನ ಶ್ರೀ ಪ್ರತೀಪಜಾತನ 

ರಾಘವೇಂದ್ರನ ಸಕಲಯೋಗಸಾಂದ್ರನ 

ಮಾಗಧಕಾಲನ ಸುಮತ ಗಗನಚಂದ್ರನ

ಈಶ ತಂದೆ ಶ್ರೀ ವೆಂಕಟೇಶವಿಠಲನ 

ದಾಸವರ್ಯನ ಶೇಷಾವೇಶಧಾರನ 5

***

ಸಮೀಚೀನ ರಕ್ತಿ=ಯೋಗ್ಯವಾದ ಅಪೇಕ್ಷೆ; 

ಯಶೋಧರ=ಯಶೋವಂತ; 

ಭಾಸ್ವದಾರ್ಯ=ಕಾಂತಿಯುಕ್ತವಾದ; 

ಪ್ರತೀಪಜಾತ=ಬಾಹ್ಲೀಕ ರಾಜ;

***