Showing posts with label ನೀನೇ ವರಗುರು ಮುಖ್ಯಪ್ರಾಣನಿರಂತರವು ನಂಬಿದೆನೊ shree krishna NEENE VARAGURU MUKHYAPRANA NIRANTARAVU NAMBIDENO. Show all posts
Showing posts with label ನೀನೇ ವರಗುರು ಮುಖ್ಯಪ್ರಾಣನಿರಂತರವು ನಂಬಿದೆನೊ shree krishna NEENE VARAGURU MUKHYAPRANA NIRANTARAVU NAMBIDENO. Show all posts

Tuesday 5 October 2021

ನೀನೇ ವರಗುರು ಮುಖ್ಯಪ್ರಾಣನಿರಂತರವು ನಂಬಿದೆನೊ ankita shree krishna NEENE VARAGURU MUKHYAPRANA NIRANTARAVU NAMBIDENO

 




ನೀನೆ ವರಗುರು ಮುಖ್ಯಪ್ರಾಣನಿರಂತರವು 

ನಂಬಿದೆನೊ ನಿಖಿಳ ಗುಣಪೂರ್ಣ ಪ


ಜಾಣೆ ಕೋಮಲೆ ಭಾರತೀಶ ಸಕಲಪ್ರಾಣಿಗಳ 

ಹೃದಯಾಬ್ಜ ವಾಸ ಸುರೇಶಅ.ಪ


ವಾತಸುತನಾಗಿ ರಘುನಾಥ ಪ್ರಿಯ ದೂತ ಬಲುಯೂಥ ಲಂಕೆಯ ಪೊಕ್ಕು ಖ್ಯಾತಿಯನು ಪಡೆದೆಸೀತೆಗುಂಗುರವಿತ್ತು ವೀತಿಹೋತ್ರಗೆ ಪುರವಪ್ರೀತೆನಿಸಿದಾತ ದಿತಿಜಾತರಿಗೆ ಭೀತಿಕರ 1


ಲಂಡ ಕೀಚಕ ಬಕರ ಮಂಡೆಯನು ಒಡೆದು ಉ-ದ್ದಂಡ ಮಗಧಾಧಿಪನ ದಂಡವನು ಸೀಳಿಭಂಡ ಕೌರವರ ಶಿರ ಚೆಂಡಾಡಿ ಪ್ರಬಲ ರಣ-ಮಂಡಲದಿ ಚಂಡರಿಪು ದಂಡೆಗಳ ಖಂಡಿಸಿದೆ 2


ಸಾಂಗದಲಿ ಮಧ್ವಮತದಂಗವನು ಏರ್ಪಡಿಸಿಕಂಗೆಟ್ಟ ಕುಮತ ದುಸ್ಸಂಗಗಳನಳಿದುಗಂಗೆಪಿತ ಕೃಷ್ಣಪದ ಭೃಂಗ ಮೂಜ್ಜಗದೊಳಗೆತುಂಗ ಭವಭಂಗ ದಯಾಪಾಂಗ ಯತಿಪುಂಗವನೆ3

***

ನೀನೆ ವರಗುರು ಮುಖ್ಯಪ್ರಾಣ


ನಿರಂತರವು ನಂಬಿದೆನೋ-ನಿಖಿಳ ಗುಣಪೂರ್ಣ ||ಪ||


ಜಾಣೆ ಕೋಮಲೆ ಭಾರತೀಶ ಸಕಲ


ಪ್ರಾಣಿಗಳ ಹೃದಯಾಬ್ಜ ವಾಸ ಸುರೇಶ ||ಅ.ಪ||


ವಾತಸುತನಾಗಿ ರಘುನಾಥ ಪ್ರಿಯ ದೂತ ಬಲು


ಯೂಥ ಲಂಕೆಯ ಪೊಕ್ಕು ಖ್ಯಾತಿಯನು ಪಡೆದೆ


ಸೀತೆಗುಂಗುರವಿತ್ತು ವೀತಿಹೋತ್ರಗೆ ಪುರವ


ಪ್ರೀತೆನಿಸಿದಾತ ದಿತಿಜಾತರಿಗೆ ಭೀತಿಕರ ||1||


ಲಂಡ ಕೀಚಕ ಬಕರ ಮಂಡೆಯನು ಒಡೆದು ಉ


ದ್ದಂಡ ಮಗಧಾಧಿಪನ ದಂಡವನು ಸೀಳಿ


ಭಂಡ ಕೌರವರ ಶಿರಚೆಂಡಾಡಿ ಪ್ರಬಲರಣ


ಮಂಡಲದಿ ಚಂಡರಿಪು ದಂಡೆಗಳ ಖಂಡಿಸಿದೆ ||2||


ಸಾಂಗದಲಿ ಮಧ್ವಮತ ದಂಗವನು ಏರ್ಪಡಿಸಿ


ಕಂಗೆಟ್ಟ ಕುಮತ ದುಸ್ಸಂಗಗಳನಳಿದು


ಗಂಗೆ ಪಿತ ಕೃಷ್ಣಪದ ಭೃಂಗ ಮೂಜ್ಜಗದೊಳಗೆ


ತುಂಗ ಭವಭಂಗ ದಯಾಪಾಂಗ ಯತಿಪುಂಗವನೆ ||3||

***