Showing posts with label ಪ್ರಾಣರಾಯನೆ ನಿನಗೆಣೆಯುಂಟೆ ಪಾಲಿಪ uragadrivasa vittala. Show all posts
Showing posts with label ಪ್ರಾಣರಾಯನೆ ನಿನಗೆಣೆಯುಂಟೆ ಪಾಲಿಪ uragadrivasa vittala. Show all posts

Monday 2 August 2021

ಪ್ರಾಣರಾಯನೆ ನಿನಗೆಣೆಯುಂಟೆ ಪಾಲಿಪ ankita uragadrivasa vittala

ಪ್ರಾಣರಾಯನೆ ನಿನಗೆಣೆಯುಂಟೆ ಪಾಲಿಪ ಕ

ರುಣಾಶಾಲಿಗಳನ್ನು ಪಣೆಗಣ್ಣ ಮೊದಲಾದಮರ

ಗಣದೊಳು ಇನ್ನು ನಾ ಕಾಣೆ ಮುನ್ನ ಪ


ಗುಣನಿಧಿಯೆ ಎಣಿಯಿಲ್ಲ ನಿನ್ನಯ

ಅಣು ಮಹಘನರೂಪ ಕ್ರಿಯಗಳು

ಕ್ಷಣಬಿಡದೆ ನೀನಖಿಳಜೀವರ ತ್ರಿ-

ಗುಣ ಕಾರ್ಯವ ಗೈವೆ ಮುಖ್ಯ ಅ.ಪ


ಅನುಚಿತೋಚಿತ ಕರ್ಮ ಜೀವರೊಳು

ನೀನೆಸಗಿ ತೋರ್ಪುದೆ ಧರ್ಮ ನಾನರಿಯೆ ಪ್ರತಿ

ಕ್ಷಣದಿ ಮಾಡುವ ಕರ್ಮ ಎನ್ನನುಭವಕೆ

ತಂದಿಡುವುದೇ ನಿನ್ನ ಧರ್ಮ ನಾ ಕಾಣೆ ಮರ್ಮ

ಜನುಮ ಕೋಟಿಗಳಿಂದಲಿ ಅನುಸರಿಸಿ ಬಂದಿಹ

ಎನ್ನ ಕರ್ಮವ ಅನಿಲದೇವ ನಿನ್ನಿಂದ ಅಲ್ಲದೆ

ಎನಿತು ಇತರನಿಮಿಷರು ಮಾಳ್ವರು

e್ಞÁನದಾಯಕ ನೀನೆ ಎನ್ನಯ

ಮನದಲಿಹ ಜಂಜಡವ ಕಳೆದು

ಹೀನಕರ್ತನು ತಾನು ಅಲ್ಲದೆ

ನೀನೆ ಸರ್ವರ ಕರ್ತನೆಂಬುವ

e್ಞÁನಿ ಧ್ಯಾನ ಸ್ಮರಣೆಯನು ಸಾನುರಾಗದಿ ಇತ್ತು

ನಿನ್ನ ಮತಾನುಗರಲ್ಲನವರತ ಇಡು

ಅನೇಕ ಜನುಮಜನುಮಾಂತರದೊಳು 1


ಶ್ವಾಸನಾಮಕ ನೀನು ಜಗದೀಶ ನೀ ಜೀ-

ವೇಶ ಸರ್ವಶಕ್ತಾನು ನೀ ತಾಸಿಗೊಂಭೈನೂರು

ಶ್ವಾಸಗಳನ್ನು ಈ ಶರೀರದಿ ಜೀವರಿಂ

ದೆಸಗುವೆಯೊ ನೀನು ಉಸುರಲೇನಿನ್ನು

ವಾಸುದೇವಗೆ ಪ್ರೀತನಾಗಿ ಅ-

ಶೇಷತತ್ತ್ವಕ್ಕೀಶನಾಗಿಹೆ

ವಾಸವಾದಿಗಳೆಲ್ಲರೊಳು ಇನ್ನು

ಈಸುಭಾಗ್ಯವು ಕಾಣಲಿಲ್ಲ

ಏಸುಕಾಲಕು ನೀನೇ ಗತಿಯೆಂದು

ಈಶ ಶೇಷ ಖಗೇಶ ಪ್ರಮುಖರು

ದಾಸರಾಗಿಹಗರಯ್ಯ ಬಿಡದೆ

ದೇಶಕಾಲಗಳಲ್ಲಿ ನಿನ್ನೊಳು

ಸೂಸುವಾ ಅತಿಭಕುತಿಯಿಂದಲಿ

ಈಶ ತಪದಲಿ ನಿನ್ನ ಮೆಚ್ಚಿಸೆ

ಶೇಷಪದವಿಯ ಕೊಟ್ಟು ಶ್ರೀಶ-

ನ ಶಯನಸೇವೆ ಸಂಪದವನಿತ್ತೆ 2


ಭಕುತ ಜನರ ಬಂಧೂ ಶ್ರೀಹರಿಗೆ ನೀ ಪ್ರಥ-

ಮಾಂಗನಹುದೆಂದೂ ಈ ಸಕಲ

ಜಗದಾ ಚೇಷ್ಟಪ್ರದನೆಂತೆಂದೂ ನೀನೆ

ಭಗವತ್ಕಾರ್ಯಸಾಧಕನೆಂದೂ ಸಾರುತಿದೆ ಶ್ರುತಿ ಇಂದೂ

ಲೋಕಮಾತೆಗೆ ನಮಿಸಿ ದಶಶಿರ

ನಂದನನ ಸಂಹರಿಸಿ ಮಹದಾನಂದ

ನೀ ವನವ ಭಂಗಿಸಿ ರಘುನಂದನಗೆ

ಮುದದಿಂದ ವಂದಿಸಿ ನೊಂದ ದೃ-

ಪದನಂದನೇಯಳಾ-

ನಂದಪಡಿಸಲು ಕೊಂದೆ ಕೌರವ

ವೃಂದವೆಲ್ಲವ ಸವರಿ

ನಂದನಂದನಿಗಾನಂದ ಪಡಿಸಿದೆ

ಇಂದಿರೇಶ ಶ್ರೀ ವೇಂಕಟೇಶನೆ

ಎಂದಿಗೂ ಪರದೈವವೆಂದು

ಬಂದು ಬೋಧೆಯನಿತ್ತ ಆ-

ನಂದತೀರ್ಥ ನೀ ಸಮರ್ಥಾ3

****