Showing posts with label ಮಂತ್ರಾಲಯದ ದೊರೆಯೆ ವಂದಿಪೆನು ಚರಣಕೆ narashimha. Show all posts
Showing posts with label ಮಂತ್ರಾಲಯದ ದೊರೆಯೆ ವಂದಿಪೆನು ಚರಣಕೆ narashimha. Show all posts

Monday 6 September 2021

ಮಂತ್ರಾಲಯದ ದೊರೆಯೆ ವಂದಿಪೆನು ಚರಣಕೆ ankita narashimha

 ankita ನರಸಿಂಹ 

ರಾಗ: ಬೇಗಡೆ ತಾಳ: ಮಿಶ್ರಛಾಪು


ಮಂತ್ರಾಲಯದ ದೊರೆಯೆ ವಂದಿಪೆನು ಚರಣಕೆ 

ಸಂತ ವೈಷ್ಣವ ವಿಭುವೆ


ಕಂತುಪಿತ ಸರ್ವೇಶ ಲಕ್ಷ್ಮೀ-

ಕಾಂತ ಚರಣಾಂಬೋಜಯುಗಳ

ಅಂತರಂಗದಿ ನೆಲೆಯಗೊಳಿಸುತ

ಸಂತತವು ನೆನೆವಂತೆ ಕರುಣಿಸು ಅ.ಪ


ಬಲ್ಲಿದನಹುದೊ ನೀನು ಬುಧ ಜನರ ಪಾಲಿನ

ಕಲ್ಪ ಭೂರುಹ ಸುರಧೇನು

ಕ್ಷುಲ್ಲಕನು ನಾನಾದೆ ಮನವನು

ಗೆಲ್ಲಲರಿಯೆನು ಕರುಣಿಸೆನ್ನಯ

ಹುಲ್ಲುಗುಣಗಳನೆಣಿಸದೆಲೆ ತವ

ಪಲ್ಲವಾರುಣ ಪಾದ ತೋರಿಸು 1

ಮಾಯವಾದಿಗಳ ಗೆದ್ದು ಸಾರಿದೆಯೊ ಡಂಗೂರ

ತೋಯಜಾಸನ ಪಿತನೆ ಪರನೆಂದು

ಕಾಯಜಾತಾದ್ಯರಿಗಳಾರ್ವರ

ನ್ಯಾಯದಿಂ ಪೀಡಿಸುತಲಿರುವರು-

ಪಾಯಮಂ ಪರಿಹರಿಸಿ ಎನ್ನನು

ಕಾಯೊ ಯತಿವರ ಕರುಣಾ ಸಿಂಧು 2

ಶ್ರೀ ಸುಧೀಂದ್ರ ಸಂಜಾತ ಲಕ್ಷ್ಮೀನೃಸಿಂಹನ

ದಾಸ ಭಕ್ತರಪೋಷ

ದಾಸನೆನ್ನುತ ಬಳಿಗೆ ಕರೆದುಪ-

ದೇಶವನು ಕರುಣಿಸುತ ನಿನ್ನಯ

ದಾಸ ದಾಸರ ಸಂಗಡಿಗರೊಳು 

ವಾಸಮಾಡಿಸಿ ಪೊರೆಯೊ ಸತತ 3

***