Showing posts with label ಏನು ಬೇಡಲಿ ನಿನ್ನ ಹರಿಯೆ ಚಂಚಲ ಕಠಿಣನ purandara vittala ENA BEDALI NINNA HARIYE CHANCHALA KATHINANA. Show all posts
Showing posts with label ಏನು ಬೇಡಲಿ ನಿನ್ನ ಹರಿಯೆ ಚಂಚಲ ಕಠಿಣನ purandara vittala ENA BEDALI NINNA HARIYE CHANCHALA KATHINANA. Show all posts

Saturday 4 December 2021

ಏನು ಬೇಡಲಿ ನಿನ್ನ ಹರಿಯೆ ಚಂಚಲ ಕಠಿಣನ purandara vittala ENA BEDALI NINNA HARIYE CHANCHALA KATHINANA



ಪುರಂದರದಾಸರು
ಏನ ಬೇಡಲಿ ನಿನ್ನ ಚಂಚಲ ಕಠಿಣನ ||ಪ||
ಮೌನದಿಂದಲಿ ಮೋರೆ ಓರೆ ಮಾಡುವನ ||ಅ.ಪ||

ಕರುಳ ಹರಕನ ಬೇಡಲೇನು ತಿರಿದು ತಿಂಬುವನ ಕೊರಳಗೊಯ್ಯ
ಅರಣ್ಯ ತಿರುಗುವವ ತಿರುಗಿ ಬೆಣ್ಣೆ ಕದ್ದು ತಿಂಬುವನ ||೧||

ವಾಸಶೂನ್ಯನ ಕೈಯ್ಯ ಕತ್ತಿ ಬೀಸಿ ಸವರುವನ ಕಾಸು ವೀಸವನೆಲ್ಲ
ಮೀಸಲು ಮಾಡಿಟ್ಟು ಕೇಸಕ್ಕಿ ಉಂಡುಂಡು ವಾಸ ಮಾಡುವನ ||೨||

ಬೇಡಿದರೆ ನೀಡಿ ಅವರ ಮೋರೆ ಬಿಡೆಯವನು ನೋಡಿ ಬಡವರ ಕರೆತಂದು
ಅಡಿಗೆ ಸೇರಿಸಿಕೊಂಡ ಒಡೆಯ ಶ್ರೀಪುರಂದರ ವಿಠಲ ದೊರೆಯೆ ||೩||
***

Ena bEDali ninna caMcala kaThiNana ||p||
mounadiMdali mOre Ore maaDuvana ||a.p||

karuLa harakana bEDalEnu tiridu tiMbuvana koraLagoyya
araNya tiruguvava tirugi beNNe kaddu tiMbuvana ||1||

vaasashUnyana kaiyya katti bIsi savaruvana kaasu vIsavanella
mIsalu maaDiTTu kEsakki uMDuMDu vaasa maaDuvana ||2||

bEDidare nIDi avara mOre biDeyavanu nODi baDavara karetaMdu
aDige sErisikoMDa oDeya shrIpuraMdara viThala doreye ||3||

***

ಏನು ಬೇಡಲಿ ನಿನ್ನ ಹರಿಯೆ ಪ
ಏನ ಬೇಡಲಿ ನಿನ್ನ, ಚಂಚಲ ಕಠಿಣನ
ಮೌನದಿಂದಲಿ ಮೋರೆ ಓರೆ ಮಾಡುವನ||

ಕರುಳ ಹರಕನ ಬೇಡಲೇನು
ತಿರಿದು ತಿಂಬುವನ ಕೊರಳಗೊಯ್ಯ
ಅರಣ್ಯ ತಿರುಗುವವವ
ತಿರುಗಿ ಬೆಣ್ಣೆ ಕದ್ದು ತಿಂಬುವನ ||

ವಾಸಶೂನ್ಯನ ಕೈಯ ಕತ್ತಿ
ಬೀಸಿ ಸವರುವನ
ಕಾಸುವೀಸವನೆಲ್ಲ ಮೀಸಲು ಮಾಡಿಟ್ಟು
ಕೇಸಕ್ಕಿ ಉಂಡುಂಡು ವಾಸ ಮಾಡುವನ ||

ಬೇಡಿದರೆ ನೀಡಿ ಅವರ ಮೋರೆ
ಭಿಡೆಯವನು ನೋಡಿ
ಬಡವರ ಕರೆತಂದು ಅಡಿಗೆ ಸೇರಿಸಿಕೊಂಡ
ಒಡೆಯ ಶ್ರೀ ಪುರಂದರವಿಠಲ ದೊರೆಯೆ ||
********

ಏನು ಬೇಡಲಿ ನಿನ್ನ ಹರಿಯೆ ಪ

ಏನ ಬೇಡಲಿ ನಿನ್ನ ಚಂಚಲ ಕಠಿಣನ |ಮಾನದಿಂದ ಮೋರೆ ಓರೆಮಾಡುವನ ಅ.ಪ

ಕರುಳಹರಕನ - ಏನ ಬೇಡಲಿ |ತಿರಿದು ತಿಂಬುವನ ||ಕೊರಳಗೊಯ್ಕ ಅರಣ್ಯ ತಿರುಗವನ ಮೊ - |ಸರು ಬೆಣ್ಣೆ ಕದ್ದು ತಿಂಬವನ 1

ವಾಸಶೂನ್ಯನ - ಬೇಡಲೇನು ಕತ್ತಿ - |ಬೀಸಿ ಸವರುವನ ||ಕಾಸುವೀಸವನೆಲ್ಲ ಮೀಸಲು ಮಾಡಿಟ್ಟು |ಕೇಸಕ್ಕಿ ಉಂಡುಂಡು ವಾಸಿಸುವನ2

ಬೇಡಿದರೆ ಕೊಡನ - ಮೋರೆನೋಡಿ |ಭಿಡೆಯ ಹಿಡಿಯದವನ |ಬಡವರ ಕರೆತಂದು ಅಡಿಗೆ ಸೇರಿಸಿಕೊಂಡ |ಒಡೆಯ ಪುರಂದರವಿಠಲದೊರೆಯ 3
*********
 ಟಿಪ್ಪಣಿ
ಚಂಚಲ -> ಮತ್ಸ್ಯಾವತಾರದಲ್ಲಿ ಮೀನು ,
ಕಠಿಣ -> ಕೂರ್ಮಾವತಾರದಲ್ಲಿ ಆಮೆ
ಮೋರೆಯನು ಓರೆ ಮಾಡುವ -> ವರಾಹಾವತಾರದಲ್ಲಿ ಹಂದಿ
ಕರುಳ ಹರಕ - ನರಸಿಂಹ
ತಿರಿದು ತಿಂಬುವವ = ವಾಮನ
ಕೊರಳ ಕೊಯ್ಯುವವನು - ಪರಶುರಾಮ
ಅರಣ್ಯದಲ್ಲಿ ತಿರುಗುವವ - ರಾಮ
ಬೆಣ್ಣೆ ಕದ್ದು ತಿನ್ನುವವ - ಕೃಷ್ಣ
ವಾಸಶೂನ್ಯ - ಬುದ್ಧ
ಕೈಗತ್ತಿ ಬೀಸಿ ಸವರುವವವ - ಕಲ್ಕಿ


ಕಾಸು ಕೂಡಿಸುವವ - ತಿರುಪತಿ ತಿಮ್ಮಪ್ಪ