Showing posts with label ಎಲ್ಲಿ ನೋಡಲು ನೀನಿಲ್ಲದ gopala vittala ankita suladi ಸರ್ವವ್ಯಾಪ್ತಿ ಸುಳಾದಿ ELLI NODALU NEENILLADA SARVA VYAPTI SULADI. Show all posts
Showing posts with label ಎಲ್ಲಿ ನೋಡಲು ನೀನಿಲ್ಲದ gopala vittala ankita suladi ಸರ್ವವ್ಯಾಪ್ತಿ ಸುಳಾದಿ ELLI NODALU NEENILLADA SARVA VYAPTI SULADI. Show all posts

Sunday 8 December 2019

ಎಲ್ಲಿ ನೋಡಲು ನೀನಿಲ್ಲದ gopala vittala ankita suladi ಸರ್ವವ್ಯಾಪ್ತಿ ಸುಳಾದಿ ELLI NODALU NEENILLADA SARVA VYAPTI SULADI


Audio by Mrs. Nandini Sripad

ಶ್ರೀ ಗೋಪಾಲದಾಸರಾರ್ಯ ವಿರಚಿತ  ಸರ್ವವ್ಯಾಪ್ತಿ ಸುಳಾದಿ 
(ಈ ಸುಳಾದಿ ಜಾತಾಪರೋಕ್ಷಿಗಳಾದ ಭಾಗಣ್ಣ ದಾಸರು ಅಂಕಿತಪೂರ್ವದಲ್ಲೇ ವೆಂಕಟಕೃಷ್ಣ ಎಂಬ ಅಂಕಿತದಿಂದ ರಚಿಸಿದ್ದು)

ರಾಗ ಯಮನ್ ಕಲ್ಯಾಣಿ  ಧ್ರುವತಾಳ

ಎಲ್ಲಿ ನೋಡಲು ನೀನಿಲ್ಲದ ಸ್ಥಳವಿಲ್ಲ | 
ಎಲ್ಲರಂತರ್ಯಾಮಿ ಎಲ್ಲ ಪೂರ್ಣನು ನೀನೇ | 
ಹುಲ್ಲು ಕಾಷ್ಠ ಅಚೇತನಗಳಲ್ಲಿ ನೀ | 
ನಿಲ್ಲದಿಲ್ಲವೆಂದು ಎಲ್ಲ ಸಾರುತಲಿದೆ | 
ಸಲ್ಲದ ಮನುಜ ನಿನಗೆ ತನಗೆ ಭೇದ - |
ವಿಲ್ಲೆವೆಂಬುವಾಗ ಏನೆಂಬೆ ಹರಿಯ ಉ | 
ತ್ಪಲಾ ಕಮಲ ನೀರೊಳಗಿದ್ದು ಲೇಪನ ।
ವಿಲ್ಲದ ಸಾಮ್ಯ ಪೇಳುವುದಯ್ಯ ನಿಮಗೆ | 
ಎಲ್ಲರಲ್ಲಿ ನೀನು ಎಲ್ಲ ಆನಂದವಿತ್ತು
ಎಲ್ಲಾಕ್ಕೆ ಭೇದ ಎಲ್ಲಾ ನಿರ್ಲೇಪ
ಚಿಲ್ಲರ ದೈವದ ಗಂಡ ವೆಂಕಟಕೃಷ್ಣ 
ನಿನ್ನ ಬಲ್ಲವ ಬಲ್ಲ ಬಲ್ಲಾರು ಪೂರ್ಣವರಿಯ ॥ 1 ॥

ಮಟ್ಟತಾಳ

ವಿಶ್ವತೋಮುಖ ನೀನೇ ವಿಶ್ವತೋಚಕ್ಷು ನೀನೇ | 
ವಿಶ್ವತೋ ಬಾಹು ನೀನೆ ವಿಶ್ವಕರ್ನನು ನೀನೆ |
ವಿಶ್ವತೋ ಶ್ರವಣನೆ ವಿಶ್ವಾಧಾರನೆ | 
ವಿಶ್ವವ್ಯಾಪಕ ಸರ್ವವಿಶ್ವಮಯನೆ | 
ವಿಶ್ವಕರ್ತೃತ್ವ ಮಹೇಶ್ವರಗುಂಟೆಂಬ ಆ ।
ವಿಶ್ವಾಸಘಾತಕಿಗೇನೆಂಬೇನು ಹರಿಯೆ ।
ವಿಶ್ವನಾಮಕ ಸಿರಿ ವೆಂಕಟಕೃಷ್ಣ | 
ವಿಶ್ವಾಸ ಕೊಡೋ ನಿನ್ನ ವಿಶ್ವಚರಣದಲಿ ॥ 2 ॥

ತ್ರಿವಿಡತಾಳ

ಅಂಗುಟ ಮಾತುರ ಪರಿಮಾಣು ಮೂರುತಿ ನೀನೇ |
ರಂಗಾ ಆತುಮ ಅಂತರಾತ್ಮ ಮೂರುತಿ ನೀನೆ | 
ಲಿಂಗದೇಹವು ಭಂಗವಾಗುವುದಕ್ಕೆ ಸಾಧು | 
ಸಂಗದಿಂದಲ್ಲಿ ಸಾಧನಾಂತರದಲ್ಲಿ | 
ಶೃಂಗಾರದಿಂದಲಿ ಒಂದೇ ಜನ್ಮವು ನಿಲ್ಲೆ ।
ಕಂಗಳಿಗೆ ಕಾಣಿಸಿಕೊಂಬ ಬಿಂಬಮೂರುತಿ ನೀನೆ ।
ಹಿಂಗದೆ ಮುಕ್ತಿಯೋಗ್ಯ ಜೀವಂಗಳು ಕರ್ಮ ಫ ।
ಲಂಗಳನುಭವಿಪ ವಾಸನಾ ಮೂರುತಿ ನೀನೆ ।
ಲಿಂಗದೇಹವು ನಿತ್ಯಸಂಸಾರಿಗಳಿಗೆ ।
ಭಂಗವಿಲ್ಲದೆ ಸ್ವರ್ಗ ನರಕನೀಯುವವ ನೀನೆ ಉ ।
ತ್ತುಂಗ ಮಹಿಮನೆ ತಾಮಸಜನರಿಗೆ ದುಷ್ಕ ।
ರ್ಮಂಗಳ ಮಾಡಿಸಿ ತಮಸನೀಯುವವ ನೀನೆ ।
ಗಂಗಾದಿ ತೀರ್ಥದಲ್ಲಿದ್ದು ಸುಜನರ ದೋ ।
ಷಂಗಳ ಕಳೆವ ಮಂಗಳಾತ್ಮಕ ನೀನೆ | 
ತುರಂಗವದನ ಸಿರಿ ವೆಂಕಟಕೃಷ್ಣ ವಿ | 
ಹಂಗವಾಹನ ನೀನೆ ಭುಜಂಗಶಯನನೆ ॥ 3 ॥

ಅಟ್ಟತಾಳ

ಸಿರಿಯಲ್ಲಿ ನೀನೆ ಪರಮೇಷ್ಠಿಯಲ್ಲಿ ನೀನೆ | 
ಮಾರುತ ವಾಣಿ ಭಾರತಿಯರಲ್ಲಿ ನೀನೆ |
ಉರಗನಲ್ಲಿ ನೀನೆ ಗರುಡನಲ್ಲಿ ನೀನೆ | 
ಹರನಲ್ಲಿ ನೀನೆ ಸೌಪರಣಿಯಲ್ಲಿ ನೀನೆ ।
ಗಿರಿಪತಿಯ ಸುತಳಲ್ಲಿ ಪೂರ್ಣ ನೀನೆ |
ಸುರಪತಿ ಕಾಮಾದಿ ಸುರರಲ್ಲಿ ನೀನೆ ।
ನಾರದ ತುಂಬುರ ಗಂಧರ್ವರಲ್ಲಿ ನೀನೆ ।
ಸುರಸಿದ್ಧಸಾಧ್ಯ ಕಿನ್ನರರಲ್ಲಿ ನೀನೆ |
ಶರಧಿಯಲ್ಲಿ ನೀನೆ ಗಿರಿಗುಹ್ಯಗಳಲ್ಲಿ ।
ಕರೆದರೆ ಓ ಎಂಬ ಪ್ರತಿಶಬ್ದ ನೀನೆ |
ಪರಶುರಾಮನಾಗಿ ಪಾವಕನಲ್ಲಿ ನೀನೆ | 
ಬಾಹಿರ ಅಂತರ ದಶದಿಕ್ಕುಗಳಲ್ಲಿ |
ಪರಿಪೂರ್ಣವಾಗಿದ್ದ ಪರಮಾತ್ಮನು ನೀನೆ ।
ನೊರಜು ಗಜ ಸಿಂಹ ಶಾರ್ದೂಲ ಮೊದಲಾದ |
ಸರುವ ಜೀವರಲ್ಲಿ ಪರಿಪೂರ್ಣ ನೀನೆ | 
ಮುರು ಮಧು ಮಾಗಧ ಮೊದಲಾದ ಖಳರಲ್ಲಿ ।
ಕುರುಮಾನೆಂದು ದುಷ್ಕೃತ ಪ್ರೇರಕ ನೀನೆ ।
ಧುರವಿಕ್ರಮನಾಮನೆ ವೆಂಕಟಕೃಷ್ಣ |
ದೂರಾ ದೂರನೆ ಅತಿದೂರತರನೆ ॥ ೪ ॥

ಆದಿತಾಳ

ನಿಗಮ ತಂದವ ನೀನೆ ನಗಧರ ನೀನೆ | 
ಜಗವನು ತಂದ ಅಸುರಾಂತಕ ನೀನೆ |
ಮೃಗರೂಪ ನರರೂಪ ತಾಳಿದ ನರಸಿಂಹ ನೀನೆ | 
ಮಗುವಾಗಿ ಗಗನ ಮೀರಿದ ತ್ರಿವಿಕ್ರಮ ನೀನೆ ।
ಮಗನಾಗಿ ಮಾತೆ ಘಾತಿಸಿದ ಭಾರ್ಗವ ನೀನೆ |
ಜಗವನರಿಯೆ ರಾವಣಾಂತಕ ನೀನೆ | 
ನಗುತ ಪೂತನಿ ಅಸುವ್ಹೀರಿ ಶಕಟನೊದ್ದ | 
ಹಗೆ ಕಂಸನ ಕೊಂದ ಕೃಷ್ಣ ನೀನೆ|
ಮೃಗಧರಗೊಲಿದು ಬತ್ತಲೆ ನಿಂದು ತ್ರಿಪುರವ |
ಬಗಿದು ಮೆರೆವ ಬೌದ್ಧಾವತಾರನು ನೀನೆ | 
ಸೊಗಸಾಗಿ ಹಯನೇರಿದ ಕಲಿಕಿ ನೀನೆ |
ಮಿಗೆ ಅನಂತಾನಂತ ಅವತಾರನೆ | 
ಜಗಜನ್ಮಾದಿ ಕಾರಣನೆ ವೆಂಕಟಕೃಷ್ಣ | 
ನಿಗಮಗೋಚರ ಆಘಶೂನ್ಯ ಪಾವನನೆ ॥ 5 ॥

ಜತೆ

ಸರ್ವಾರಾಧಾರನೆ ಸರ್ವನಿರ್ಲೇಪನೆ |
ಸರ್ವದರ್ಶನನಾಮ ವೆಂಕಟಕೃಷ್ಣ ॥
************