Showing posts with label ಅಜಭವಾದಿಗಳೊಡೆಯ ಸುಜನರ ಪೊರೆವ rukmini krishna nandana AJA BHAVAADIGALODEYA SUJANARA POREVA. Show all posts
Showing posts with label ಅಜಭವಾದಿಗಳೊಡೆಯ ಸುಜನರ ಪೊರೆವ rukmini krishna nandana AJA BHAVAADIGALODEYA SUJANARA POREVA. Show all posts

Friday 10 December 2021

ಅಜಭವಾದಿಗಳೊಡೆಯ ಸುಜನರ ಪೊರೆವ rukmini krishna nandana AJA BHAVAADIGALODEYA SUJANARA POREVA


ಅಜ  ಭವಾದಿಗಳೊಡೆಯ  ಸುಜನರ ಪೊರೆವ |
 ನಿಜದಲ್ಲಿ ಭಕ್ತ ರಕ್ಷಕ ಗಜ ವರದ ||ಪ ||

 ಅಜಮಿಳನು ಸಾವಿನಂಚಿನಲಿ  ಕರೆದರು ಬಂದು|
 ಸರಸಿಜ ದಳ ನೇತ್ರ ಸಲಹಿದೆಯೊ ಭಜಕ ಜನ ಪ್ರಿಯ||ಅಪ ||

 ಕಾಲ ಕರ್ಮ ಕೂಡಿಬಂದು ತಾಯಿಯ ಗರ್ಭದಿ ಜನಿಸಿ ಬಂದೆ|
 ಕಾಲು ಕೈಯ ಚಲಿಸಲಾರದೆ ಯಾತನ ಸಹಿತ ನಾಗಿ||
 ಕಾಲ ನವಮಾಸ ಕಳೆದೆನೋ ಹರಿಯೇ|
 ಸಕಲಕ್ಕೆ ನೀನೇ ಕಾರಣ ಎಂಬುದ ಅರಿಯದೆ ಮೂರ್ಛೆಯಲಿ ಕಳೆದೆ||1||

 ತಾಯಿಯ ಉದರದಿಂದ ಹೊರ ಬಂದೆ ರೋದಿಸುತ|
 ಬಾಯಿಯಲ್ಲಿ ಅಕ್ಕರೆಯ ಮೊಲೆ ಹಾಲು ಹೀರುತ ಬೆಳೆದೆ||
 ಮಾಯೆ ಆವರಿಸೆ ಬಾಲ್ಯ ಕಳೆಯಿತು ಆಟ ಪಾಠಗಳಲ್ಲಿ|
 ಕಾಯ ಬಲಿಯಿತು ಯೌವ್ವನದ ಮದದಲಿ ||2||

 ಅಂಗನೆಯ ವಡನಾಟ ಕಾಮ ಕೂಟದಲಿ| ಸಂದಿತು ಪ್ರಾಯ-
 ಅನಂಗನ ಅಧಿಪತ್ಯದಲ್ಲಿ ಕಳೆಯಿತು ಅರ್ಧಾಯುಷ್ಯ ಇನ್ನು||
 ಹಿಂಗದೆ ಹೋಯಿತು ಜೀವನದ ಆಸೆ|
 ಮಂಗನಂತಿದೆ ಮನವಿನ್ನು ಸತ್ಸಂಗಕ್ಕೆ ಎಳಸಲಿಲ್ಲವೋ ||3||

 ನವದ್ವಾರ ಪುರವೀ ದೇಹ ಜೀರ್ಣ ಆಗಿಹುದು|
 ಜೀವನವನ್ನೆಲ್ಲ ಮೋಜಿನಲ್ಲಿ ಕಳೆಯದೆ||
 ಯಾವ ಕ್ಷಣದಲೂ ನಿನ್ನ ಸೇವಿಸಿದ ನೆನಪಿಲ್ಲ|
 ಜೀವ ತತ್ತರಿಸಿಹುದು ಯಮನ ಭಯಕೆ ||4||

 ಸಂಸಾರ ಚಕ್ರದಲ್ಲಿ ತಿರುಗಣೆಯ ಮಡುವಿನಲ್ಲಿ ಇನ್ನೆಷ್ಟು ಜನ್ಮವೋ ತಿಳಿಯೆ|
ಹಿಂಸೆಯಾಗುತಲಿಹುದು ಹೊರಬರುವ ದಾರಿ ಕಾಣದೆ||
 ಹಂಸನಾಮಕ ನೀನು ಸಂಚಿತ ಆಗಾಮಿ ಪ್ರಾರಬ್ಧವ ಕಳೆದು|
 ಕಂಸಾರಿ ನಿನ್ನಯ ಪುರದಲ್ಲಿ ರುಕ್ಮಿಣಿ- ಕೃಷ್ಣ ನಂದನನ ಇರಿಸು ನಿರಂತರ||5||
*******


 ಪಲ್ಲವಿ: ಅಜ ಭವಾದಿಗಳೊಡೆಯ  ಸುಜನರ ಪೊರೆವಾ.
 ರಚನೆ: ಗುರುರಾಜ ಚಿಟಗುಪ್ಪಿ - ಧಾರವಾಡ
 ರಾಗ: ಕೇದಾರ
 ಸ್ವರ ಸಂಯೋಜನೆ: ಗುರುರಾಜ ಚಿಟಗುಪ್ಪಿ.
 ಅಂಕಿತ: ರುಕ್ಮಿಣಿ- ಕೃಷ್ಣ ನಂದನ.