Showing posts with label ಗುರುವು ನಾರದರಿಂದ ಅನುಗ್ರಹ madhwesha krishna harapanahalli bheemavva stutih. Show all posts
Showing posts with label ಗುರುವು ನಾರದರಿಂದ ಅನುಗ್ರಹ madhwesha krishna harapanahalli bheemavva stutih. Show all posts

Thursday 18 February 2021

ಗುರುವು ನಾರದರಿಂದ ಅನುಗ್ರಹ ankita madhwesha krishna harapanahalli bheemavva stutih

 ಹರಪನಹಳ್ಳಿ  ಭೀಮವ್ವನವರು


ಗುರುವು ನಾರದರಿಂದ ಅನುಗ್ರಹ ಪಡೆದಿಹ ಹರದಿ ಭೀಮ

ವ್ವನ ನೆನೆಯೋಣ

ಪರಮ ಪಾವನಳು ಪರಮಾತ್ಮನ ಗುಣ ಪರಿ ಪರಿಯಲಿ ಹೊಗ

ಳಿದ||ಪಲ್ಲ||


 ಸ್ತುತಿ ಮಣಿ ಮಾಲಿಕೆ, ಮುಯ್ಯದ ಹಾಡು ರತಿಕಲ್ಯಾಣ ಸುಭದ್ರ ಕಲ್ಯಾಣ

 ಶಕುಂತಳನ  ಹಾಡು ದಾನವ್ರತದ ಹಾಡು ನಳ ಚರಿತ್ರೆ 108

ನಾರಾಯಣ

ಸಂಕ್ಷೇಪ ರಾಮಾಯಣ ಜಲಕ್ರೀಡಿ ಪಾರಿಜಾತ ಉಧ್ಧವಗೀತ

ಸಮುದ್ರ ಮಥನದ ಹಾಡು ಸೀರೆ   ಸೆಳೆದಹಾಡು ಶ್ರಿನಿವಾಸ 

ಕಲ್ಯಾಣ ಮೊದಲಾದ||೧||


 ತೀರ್ಥಯಾತ್ರೆಗೆ ಪೋಗಿ ಗಂಗಾಸ್ನಾನವ ಮಾಡಿ, ಸರಸ್ವತಿ ನದಿ

ಯನ್ನ ಧ್ಯಾನಿಸಲು

 ಸರಸ್ವತಿ ನದಿಯು ಗುಪ್ತಗಾಮಿನಿ ಕೆಂಪು ಸೀರೆಯು ಹಾಸಿ

ದಂತೆ

 ತರಂಗಗಳು ಬರಲು, ನಾವೆಗಳು ಹೋಗುತ್ತಿರಲು ಮತ್ತೆ

ಸ್ನೇಹಿತಳಾದ ಬೃಂದಾವನಿಗೆ ಕೂಡ  ದರುಶನ ಕೋರಲು||೨||


 ಪಾತ್ರರ ಸಂಗಡ ಯಾತ್ರೆ ಮಾಡಬೇಕೆನ್ನುತ ಜಗನ್ನಾಥದಾಸರು 

ತಿಳಿಸಿ ದಂತೆ

 ಭೀಮವ್ವನ ಜೊತೆ ಯಾತ್ರೆ ಮಾಡಿ ಬೃಂದಾವನಿಗೆ ಕೂಡ

ದರುಶನವಾಯಿತೆಂದು

 ಶ್ರಧ್ಧೆಯಿಂದಲಿ ಬಂದು ಶುಧ್ಧಮನದಿ ಶುಧ್ಧಾತ:ಕ್ಕರಣದಿ

ಬೇಡಲು

ಮಧ್ವೇಶಕೃಷ್ಣನು ಒಲಿಯುವನು ನಮ್ಮನ ಉಧ್ಧಾರ ಮಾಡುವನು||೩||

*******