Showing posts with label ಸಾರಿದೆನೊ ನಿನ್ನ ಶ್ರೀನಿವಾಸ ಪಾರುಗಾಣಿಸೊ ಎನ್ನ kamalanabha vittala SAARIDENO NINNA SRINIVASA PAARUGAANISO. Show all posts
Showing posts with label ಸಾರಿದೆನೊ ನಿನ್ನ ಶ್ರೀನಿವಾಸ ಪಾರುಗಾಣಿಸೊ ಎನ್ನ kamalanabha vittala SAARIDENO NINNA SRINIVASA PAARUGAANISO. Show all posts

Tuesday 5 October 2021

ಸಾರಿದೆನೊ ನಿನ್ನ ಶ್ರೀನಿವಾಸ ಪಾರುಗಾಣಿಸೊ ಎನ್ನ ankita kamalanabha vittala SAARIDENO NINNA SRINIVASA PAARUGAANISO


kruti by Nidaguruki Jeevubai


ಸಾರಿದೆನೊ ನಿನ್ನ ಶ್ರೀನಿವಾಸ

ಪಾರುಗಾಣಿಸೊ ಎನ್ನ ಉದ್ಧರಿಸೊ ಶ್ರೀಶ ಪ


ವಾರಿಜಾಕ್ಷನೆ ನಿನ್ನ ಚಾರುಚರಣದ ಸ್ಮರಣೆ

ಬಾರಿ ಬಾರಿಗೆ ಮಾಳ್ಪ ಭಾಗ್ಯವೀಯೊ

ಸಾರಸಾಕ್ಷನೆ ಸಂಸಾರ ದು:ಖದಿ ಎನ್ನ

ಸೇರದಂದದಿ ಮಾಡೋ ಸರ್ವವಂದಿತ ಕೃಷ್ಣ 1

ಅಂಬುಜಾಕ್ಷನೆ ನಿನ್ನ ನಂಬಿದೆನೊ ಈ ಭವದ

ಬಂಧ ತಪ್ಪಿಸಿ ಕಾಯೊ ಇಂದಿರೇಶ

ಹಿಂದು ಮುಂದ್ಯಾರಿಲ್ಲವೆಂದು ನಂಬಿದೆ ನಿನ್ನ

ಛಂದದಿಂದ ಸಲಹೊ ಮಹೇಂದ್ರತೀರ ನಿವಾಸ 2

ಸುಂದರಾಂಗನೆ ದೇವ ವಂದಿಸುವೆ ತವಪಾದ

ಧ್ವಂದ್ವ ಭಜಕರ ಸಂಗ ಬಂದುನೀಡೈ

ಇಂದಿರಾರಮಣನೆ ನಂದಗೋಪನ ಕುವರ

ಬಂದು ಭಕುತರ ಪೊರೆವ ಆನಂದ ಮೂರುತಿ ಕೃಷ್ಣ3


ಶರಣಜನರನು ಪೊರೆಯೆ ತ್ವರಿತದಲಿ ಬಂದು ಈ

ಗಿರಿಯ ಮಧ್ಯದಿನಿಂದೆ ಮಧುಸೂದನ

ಶರಣುಶರಣೆಂದು ನಿನ್ನಡಿಗೆರಗುವ ಜನರ

ದುರಿತವೆಲ್ಲವ ಕಳೆದು ಪೊರೆವ ದಯಾನಿಧಿ ಕೃಷ್ಣ4

ಕನಕಗರ್ಭನ ಪಿತನೆ ಕಡುಲೋಭವನೆ ಬಿಟ್ಟು

ದೃಢವಾದ ಅಭಯವನು ದಯಪಾಲಿಸೊ

ಪೊಡವಿಗೊಡೆಯನೆ ದೇವ ಕಮಲನಾಭವಿಠ್ಠಲ

ಬಿಡದೆ ನಿನ್ನನು ಭಜಿಪ ಧೃಢ ಮನವ ನೀಡೈ5

***