CHAITRA SURESH RAO 2021
ರಾಗ
ಹಲವಂಗದವನ ಹವಣೆ ತಿಳಿದೂ ತಿಳಿದೂ ತಿಳಿಯದ ಹಾಗೆ! ||
ಕಮಲಗಂಧಿ ಕೋಮಲಾಂಗಿ ಸುಂದರಾಬ್ಜವದನೆ ನೀನು
ರಮಣ ಮತ್ಸ್ಯ ಕಠಿಣಕಾಯ ಸೂಕರಾಸ್ಯನು
ರಮಣೀಯ ಸ್ವರೂಪಿ ನೀನು ಅಮಿತಘೋರ ರೂಪನವನು
ನಮಿಪರಿಷ್ಟದಾನಿ ನೀನು ದಾನವ ಬೇಡುವವನಿಗೆ ||
ಲಲಿತೆ ಚಾರುಶೀಲೆ ನೀನು ಕಲ್ಕಿ ಕಲಹಪ್ರಿಯನವನು
ಕುಲದ ಕುರುಹು ಇಲ್ಲ ಗುಣದ ನೆಲೆಯು ಕಂಡಿಲ್ಲ
ಹಲವು ಕಾಲದವನು ಅವನ ಬಂಧು ಬಳಗ ನಿಷ್ಕಿಂಚನರು
ಜಲಧಿ ಆಲದೆಲೆಯ ಮೇಲೆ ಮಲಗಿ ಬೆರಳ ಚೀಪುವವನಿಗೆ ||
ಸ್ವರತಾನಪೇಕ್ಷಾಕಾಮಿ ನಿದ್ರಾಹೀನ ಅನಶನಿಯು
ಪರುಷರೂಪ ವಾಚ್ಯ ಶಬ್ದ ಅಮಿತ ಭೋಕ್ತನು
ಗುರುಗೋಪಾಲ ವಿಠ್ಠಲನು ನಿರುತ ತನ್ನ ವಕ್ಷದೊಳು
ಅರಮನೆಯ ಮಾಡಿಕೊಂಡು ಮರುಳು ಮಾಡಿದ ಮಾಯಾವಿಗೆ ||
***
this is often sung in Raga Anandabhairavi or Raga Kapi, bringing out the playful, conversational tone.
Olide yātakammā lakumi vāsudēvage?
Halavaṅgadavana havaṇe tiḷidū tiḷidū tiḷiyada hāge! || Pallavi ||
Kamalagandhi kōmalāṅgi sundarābjavadane nīnu
Ramaṇa matsya kaṭhiṇakāya sūkarāsyanu
Ramaṇīya swarūpi nīನು amitaghōra rūpanavanu
Namipariṣṭadāni nīnu dānava bēḍuvavanige || 1 ||
Lalite cāruśīle nīnu kalki kalahapriyanavanu
Kulada kuruhu illa guṇada neleyu kaṇḍilla
Halavu kāladavanu avana bandhu baḷaga niṣkiñcanaru
Jaladhi āladeleya mēle malagi beraḷa cīpuvavanige || 2 ||
Swaratānapēkṣākāmi nidrāhīna anaśaniyu
Paruṣarūpa vācya śabda amita bhōktanu
Gurugōpāla viṭhṭhalanu niruta tanna vakṣadoḷu
Aramaneya māḍikoṇಡು maruḷu māḍida māyāvige || 3 ||
**
Pronunciation Tips for the "Ninda Stuti" Style
Olide: The 'O' is short. Pronounce it like the 'o' in "omit."
Havaṇe: The 'ṇ' is retroflex. It means "nature" or "status."
Sūkarāsyanu: This refers to the Varaha (Boar) avatar. Pronounce it as Soo-ka-raa-sya-nu.
Niṣkiñcanaru: A beautiful word meaning "those who have nothing." The 'ṣ' is the hard "sh" sound.
Beraḷa cīpuvavanige: This refers to Vatapatra Sayee (the infant Krishna sucking his toe on a banyan leaf). The 'cī' is a long "chee."
***
ಶ್ರೀ ಜಗನ್ನಾಥ ದಾಸರ ಅಂಕಿತದ ಈ ಕೃತಿಯು (ಗುರುಗೋಪಾಲ ವಿಠ್ಠಲ) ಅತ್ಯಂತ ಕುತೂಹಲಕಾರಿ ಮತ್ತು ಹಾಸ್ಯಭರಿತವಾದ "ನಿಂದಾ ಸ್ತುತಿ" (ಹಂಗಿಸುವಂತೆ ತೋರಿ ಹೊಗಳುವಿಕೆ) ಶೈಲಿಯಲ್ಲಿದೆ. ಇಲ್ಲಿ ಮಹಾಲಕ್ಷ್ಮಿಯನ್ನು ಉದ್ದೇಶಿಸಿ, "ಇಷ್ಟು ಸುಂದರಿಯಾದ ನೀನು, ಇಂತಹ ವಿಚಿತ್ರ ರೂಪದ ವಾಸುದೇವನನ್ನು ಏಕಮ್ಮ ವರಿಸಿದೆ?" ಎಂದು ಪ್ರಶ್ನಿಸುವ ಮೂಲಕ ಭಗವಂತನ ವಿವಿಧ ಅವತಾರಗಳನ್ನು ಮತ್ತು ಲೀಲೆಗಳನ್ನು ಸ್ಮರಿಸಲಾಗಿದೆ.
ಇದರ ಅರ್ಥ ಇಲ್ಲಿದೆ: ಕನ್ನಡ ಭಾವಾರ್ಥ (Kannada Meaning)
ಪಲ್ಲವಿ
ಲಕ್ಷ್ಮಿಯೇ, ನೀನು ಈ ವಾಸುದೇವನಿಗೆ ಏಕೆ ಒಲಿದೆ? ಆತನು ಎಷ್ಟೊಂದು ವೇಷಗಳನ್ನು (ಅವತಾರಗಳನ್ನು) ಹಾಕುತ್ತಾನೆ ಎಂಬುದು ನಿನಗೆ ಚೆನ್ನಾಗಿ ಗೊತ್ತಿದ್ದರೂ, ಏನೂ ತಿಳಿಯದವಳಂತೆ ಆತನನ್ನು ಏಕಮ್ಮ ವರಿಸಿದೆ?
ಚರಣ 1
ನೀನು ಕಮಲದಂತೆ ಸುಗಂಧ ಬೀರುವವಳು, ಕೋಮಲವಾದ ಶರೀರವುಳ್ಳವಳು ಮತ್ತು ಸುಂದರವಾದ ಮುಖವುಳ್ಳವಳು. ಆದರೆ ನಿನ್ನ ಪತಿಯನ್ನು ನೋಡು; ಒಮ್ಮೆ ಮತ್ಸ್ಯವಾಗಿ ಕಠಿಣವಾದ ಚರ್ಮ ಹೊಂದುತ್ತಾನೆ, ಒಮ್ಮೆ ವರಾಹನಾಗಿ ಹಂದಿಯ ಮುಖ ಹೊರುತ್ತಾನೆ. ನೀನು ನೋಡಲು ಅತ್ಯಂತ ರಮಣೀಯ, ಆದರೆ ಆತನು ಅತಿ ಘೋರವಾದ ರೂಪಗಳನ್ನು ತಳೆಯುವವನು. ನೀನು ಭಕ್ತರಿಗೆ ವರಗಳನ್ನು ನೀಡುವವಳು (ದಾನಿ), ಆದರೆ ನಿನ್ನ ಪತಿ ಬಲಿ ಚಕ್ರವರ್ತಿಯ ಬಳಿ ಹೋಗಿ ದಾನ ಬೇಡುವವನು (ವಾಮನ)! ಇಂತಹವನಿಗೆ ನೀನು ಏಕಮ್ಮ ಒಲಿದೆ?
ಚರಣ 2
ಲಕ್ಷ್ಮಿಯೇ, ನೀನು ಲಲಿತೆ ಮತ್ತು ಉತ್ತಮ ಚಾರಿತ್ರ್ಯವುಳ್ಳವಳು. ಆದರೆ ನಿನ್ನ ಪತಿ ಕಲ್ಕಿ ಅವತಾರದಲ್ಲಿ ಜಗಳಪ್ರಿಯನಂತೆ (ಕಲಹಪ್ರಿಯ) ತೋರುತ್ತಾನೆ. ಆತನ ಕುಲ ಯಾವುದು ಎಂಬ ಕುರುಹೇ ಇಲ್ಲ, ಗುಣಗಳ ಮಿತಿ ಎಲ್ಲಿದೆ ಎಂಬುದೂ ತಿಳಿಯದು. ಆತನು ಅನಾದಿಕಾಲದವನು, ಆತನ ನೆಂಟರಿಷ್ಟರೆಲ್ಲ ಸಂಸಾರವೇ ಇಲ್ಲದ ಬಡವರು (ನಿಷ್ಕಿಂಚನರು). ಪ್ರಳಯದ ನೀರಿನಲ್ಲಿ ಆಲದ ಎಲೆಯ ಮೇಲೆ ಮಲಗಿ ತನ್ನ ಕಾಲಿನ ಬೆರಳನ್ನೇ ಚೀಪುವ ಈತನಿಗೆ ನೀನು ಮರುಳಾದೆಯಲ್ಲಮ್ಮ!
ಚರಣ 3
ಆತನು ತನ್ನಲ್ಲೇ ರಮಿಸುವವನು (ಸ್ವರತ), ಆಸೆಗಳಿಲ್ಲದವನು, ನಿದ್ರೆಯಿಲ್ಲದವನು ಮತ್ತು ಆಹಾರದ ಹಂಗಿಲ್ಲದವನು. ಆದರೆ ಪ್ರಪಂಚದ ದೃಷ್ಟಿಯಲ್ಲಿ ಮಿತಿಯಿಲ್ಲದೆ ಉಣ್ಣುವವನು (ಅಮಿತ ಭೋಕ್ತ). ಇಂತಹ ಮಾಯಾವಿಯಾದ ಗುರುಗೋಪಾಲ ವಿಠ್ಠಲನು ತನ್ನ ಎದೆಯಲ್ಲೇ (ವಕ್ಷಸ್ಥಳ) ನಿನಗೆ ಅರಮನೆಯನ್ನು ಮಾಡಿಕೊಟ್ಟು ನಿನ್ನನ್ನು ಮರುಳು ಮಾಡಿಬಿಟ್ಟನಲ್ಲವೇ?
***
English Meaning
ಸಾರಾಂಶ (Summary):
This song is a beautiful example of Ninda Stuti. While it seemingly mocks Lord Vishnu for his "ugly" or "strange" incarnations and his "poverty," it actually glorifies his supremacy and the fact that even the Goddess of Wealth, Lakshmi, finds her ultimate refuge only in Him.
Pallavi
"O Lakshmi, why did you fall in love with this Vasudeva? You know very well about his various guises and strange forms, yet you act as if you know nothing and have chosen him as your consort!"
Verse 1
"You are 'Kamalagandhi' (fragrant like a lotus), soft-limbed, and possess a face as beautiful as a lotus. But look at your husband—as a Fish (Matsya), he has a rough, hard body; as a Boar (Varaha), he has a pig's face. You are the embodiment of beauty, while he assumes terrifying forms. You are a 'Daani' (giver) who fulfills the wishes of those who bow to you, yet your husband went as a beggar to ask for land (Vamana)! Why him, O Lakshmi?"
Verse 2
"You are graceful and of noble character, but your husband (as Kalki) seems to love conflict. No one knows the origin of his lineage, nor can anyone find the end of his attributes. He has existed since time immemorial, and his associates are all 'Nishkinchanas' (those with no worldly possessions). How did you fall for one who, during the Great Deluge, lies on a banyan leaf in the middle of the ocean and sucks his own toe?"
Verse 3
"He is self-contented, beyond desires, sleep, and the need for food, yet he is the 'Amita Bhokta' (the consumer of everything during Pralaya). This Guru Gopala Vitthala is a great 'Maayavi' (illusionist) who has tricked you by building a palace for you right within his own chest (Vakshastha), thus enchanting you forever!"
***
pallavi
olide yAtakammA lakumI vAsudEvagE
anupallavi
halavandadavana avanE tiLidu tiLidu tiLidu tiLiyAdhAnga
caraNam 1
kamala ganDhi kOmalAngi sundarsyA vadanE nInu ramaNa matsya kaThiNa kAya sUkarAsyanU
ramaNIya svarUpi nInu amita ghOra rUpanavanu namipariSTa dAyi nInu dAnava bEDuvanigE nI
caraNam 2
jANe ratnAkarana magaLu tAnu shuddha bhrugu janavanu AnandAbja sadane nInu vanavAsI avanU
mAnya pativrateyu nInu nAnA yOsiSTAni avanu jnAna citra vasanE nInu hIna caila nAdavanigE
caraNam 3
avana vArte kELidavaru ollarO samsAravannu avana mUrti nODi maneya hanava biDuvarO
avanapurake pOva janaru ommiganda tirugi bararO avanu tAnE tanayarannu tannavayava dinda paDedavanige
caraNam 4
svayata anapEkSa kAmiyavanu nidrA hIna anAshana paruSarUpa vAkya shabda amita bhOktanu
guru gOpAla viTThalanu niruta tanna vakSasthaLadoLu aramaNeya mADittu ninagE maralu mADida mAyA dEvI
***
🌷🌹ಮಹಾಲಕುಮಿ ಮಹಿಮೆ🌹🌷
ಚಿಂತನ...✍......by ಶ್ರೀಸುಗುಣವಿಠಲ..
ನಿತ್ಯ ಮುಕ್ತಳೂ ನಿರ್ವಿಕಾರಳೂ ನಿತ್ಯ ಸುಖಸಂಪೂರ್ಣಳೂ ಸರ್ವ ಜಗಧಾಧಾರೆಯೂ..ಮುಕ್ತಾ ಮುಕ್ತ ಗುಣ ಸಂಪೂರ್ಣಳೂ ಶ್ರೀಹರಿಯ ವಕ್ಷಸ್ಥಳ ವಾಸಿಯೂ ..ಭಕುತರ ಪೊರೆಯೂವ ಭ್ರತ್ಯವತ್ಸಲೆಯೂ ...ಆದ ಶ್ರೀ ಮಹಲಕ್ಷ್ಮಿಯು .ಭಗವಂತನ ನಂತರದ ಅಧ್ಭತವಾದ ಸ್ಥಾನವನ್ನು ಪಡೆದಿದ್ದಾಳೆ.!!.
ಅನಂತ ಬ್ರಹ್ಮ ರುದ್ರಾದೇರ್ನಾಸ್ಯಾಃ ಶಕ್ತಿ ಕಲಾಪಿ ಹಿ|ತೇಷಾಂ ದುರತ್ಯಯಾಪ್ಯೇಷಾ|...ಗೀತಾ ತಾತ್ಪರ್ಯ ನಿರ್ಣಯ.
ಅನಂತ ಬ್ರಹ್ಮಾದಿಗಳ ಒಟ್ಟು ಶಕ್ತಿಯುಲಕ್ಷ್ಮೀ ಶಕ್ತಿಯ ಒಂದಂಶಕ್ಕೂ ಸಮನಾಗುವುದಿಲ್ಲಾ.!.ಯಾವ ವಿಷಯದಲ್ಲಿಯೂ ಅವರು ದೇವಿಯನ್ನು ಅತಿಕ್ರಮಿಸಲಾರರು.ಬ್ರಹ್ಮಾದಿಗಳಿಂದ ಅವಳು ಸರ್ವದಾ ಪೂಜ್ಯಳು.ಸೇವಿತಳೂ ಆಗಿದ್ದಾಳೆ.!.
ಯಂ ಕಾಮಯೇ ತಂ ಉಗ್ರಂ ಕೃಣೋಮಿ ತಂ ಬ್ರಹ್ಮಾಣಂ ತಂ ಋಷೀಂ ತಂ ಸುಮೇಧಾಂ|.....ಅಂಭ್ರಣೀ ಸೂಕ್ತ......ದ ವಾಕ್ಯದಂತೆ ನಾನು ಇಚ್ಛಿಸುವವರನ್ನು ರುದ್ರ, ಬ್ರಹ್ಮ, ಋಷಿ, ಮೇಧಾವಿಗಳನ್ನಾಗಿ ಮಾಡಬಲ್ಲೆ ...ಎಂದು ಲಕ್ಷ್ಮೀ ತನ್ನ ಸಾಮರ್ಥ್ಯವನ್ನು ಹೇಳುತ್ತಾಳೆ.ಅರ್ಥಾತ್...ಬ್ರಹ್ಮ ರುದ್ರಾದಿ ಆಗುವ ಮಹಾಯೋಗ್ಯತೆಯುಳ್ಳ ವಿಶೇಷ ಚೇತನರು ತಮ್ಮ ಸಾಧನೆ ಪೂರ್ತಿ ಆದಾಗ್ಯೂ ಆಯಾ ಪದವಿಯನ್ನು ಶ್ರೀದೇವಿಯ ಅನುಗ್ರಹದಿಂದಲೇ ಪಡೆಯುವರು!.ಅವಳ ಅನುಗ್ರಹವಿಲ್ಲದೇ ಆ ಪದವಿಗಳನ್ನು ಹೊಂದಲಾರರು.ಶ್ರೀಹರಿಯ ಕುಡಿ ಗಣ್ಣ ನೋಟದ ಅನುಗ್ರಹದಿಂದ..ಜಗತ್ ಸೃಷ್ಠ್ಯಾದಿಗಳನ್ನು ಮಾಡಬಲ್ಲಳು.ಲಕ್ಷ್ಮಿಯೇ ಸ್ವತಃ ಹೇಳುತ್ತಾಳೇ.....
ಇಂಥಹ ನನ್ನ ಮಹಾ ಶಕ್ತಿಗೆ ಸಾಮರ್ಥ್ಯಕ್ಕೆ ಕಾರಣನಾದವನು ಸಾಗರಶಾಯಿಯಾದ ಶ್ರೀನಾರಾಯಣ.!ಅವನ ಕಿಂಚಿತ್ ಅನುಗ್ರಹವೇ ನನ್ನಿಂದ ಈ ಸಕಲ ಕ್ರಿಯೆಗಳನ್ನು ಮಾಡಿಸುತ್ತದೆ .
ಶ್ರೀಮುಕುಂದನ ಮಹಿಳೆ..ಲಕ್ಷ್ಮೀ..ಮಹಾಮಹಿಮೆ ಗೇನೇಂಬೆ.....ಹರಿಕಥಾಮೃತಸಾರ ೨೬-೧೨......
ಹೀಗೆ ಬ್ರಹ್ಮಾದಿ ಸಕಲ ಜಗತ್ತಿಗೆ ಜನನಿಯೆನಿಸಿದ ಮಹಾಲಕ್ಷ್ಮೀ ಶ್ರೀಮನ್ನಾರಾಯಣನ ಪ್ರೀತಿಯ ಮಡದಿ.ಜ್ಞಾನ ಬಲ ಭಕ್ತ್ಯಾದಿ ಅನಂತ ಗುಣ ಪೂರ್ಣೆ ಆತನ ಅನುಗ್ರಹದಿಂದ ಶ್ರೀಹರಿಗಿಂತ ಅನಂತಾನಂತ ಗುಣನ್ಯೂನ್ಯಳು. ಇಡೀ ಬ್ರಹ್ಮಾಂಡದಲ್ಲಿ ಮುಕ್ತಾಮುಕ್ತರಲ್ಲಿ..ದೇವಾನು ದೇವತೆಗಳಲ್ಲಿ...ಅವಳ ಸಮಾನನೆನಿಪರು ಯಾರೂ ಇಲ್ಲಾ.! ಎಲ್ಲರೂ ಅವಳ ಅಧೀನರೇ..ಅವಳು ಶ್ರೀಹರಿಯ ಅಧೀನಳೂ.!!.
ರಮಾಸಮುದ್ರನ ಕುಮಾರಿ ನಿನ್ನ ಸರಿಸಮಾನರಾರಮ್ಮಾ...ಉಮೇಶ ಮೊದಲಾದ ಅಮರನಿಕರವು ಭ್ರಮಿಸಿ ನಿನ್ನ ಪಾದಕಮಲ ತುತಿಪರಮ್ಮಾ......ಎಂದು ಶೇಷವಿಠಲ ದಾಸರು ನುಡಿದಿದ್ದಾರೇ...
ಬಾರೇ ಭಾಗ್ಯದ ನಿಧಿಯೇ ಕರವೀರನಿವಾಸಿನಿ ವಾಸಿನಿ ಸಿರಿಯೇ....ಎಂದು ಅನಂತಾದ್ರೀಶರೂ...
ಪಾಲಿಸೇ ಪದುಮಾಲಯೇ...ನೀನೇ ಗತಿ ಪಾಲಿಸೇ ಪದುಮಾಲಯೇ....ಎಂದು ವಿಜಯದಾಸರೂ... ಹಾಗೂ ಸಾಕಷ್ಟು ದಾಸಾರ್ಯರೂ ಯತಿವರೇಣ್ಯರೂ...ಹಾಡಿ ಪಾಡಿ ಪ್ರಾರ್ಥಿಸಿದ್ದಾರೆ...
ಸಕಲ ಸಜ್ಜನರಿಗೂ ಸಿದ್ದಿ, ವಿಧ್ಯೇ, ಬುದ್ಧಿ, ..ಐಹಿಕ /ಪಾರಮಾರ್ಥಿಕ ಅಷ್ಟೈಶ್ವರ್ಯಗಳನ್ನೂ ಕರುಣಿಸುವ ಕಮಲವದನೆ ಕಮಲ ನಯನೆ ಶ್ರೀಮಹಾಲಕುಮಿಯೇ ಆಗಿದ್ದಾಳೆ.
ವಿಷ್ಣುನಾ ಸಹಿತಾ ಧ್ಯಾತಾ ಸಾ ಹಿ ತುಷ್ಟಿಂ ಪರಾಂ ವೃಜೇತ್|
ಲಕ್ಷ್ಮೀನಾರಾಯಣರು ನಿತ್ಯ ಅವಿಯೋಗಿಗಳು.ಅದುದರಿಂದ ಲಕ್ಷ್ಮೀಯನ್ನು ಯಾವಾಗಲೂ ನಾರಾಯಣನ ಸಹಿತವೇ ಪೂಜಿಸಿದರೇ .ಲಕ್ಷ್ಮೀ ಪರಮ ಸಂತುಷ್ಟಳಾಗುವಳು.
ಒಡೆಯನಿದ್ದಲ್ಲಿಗೆ ಮಡದಿಯು ಬರುವುದು..ರೂಢೀಗುಚಿತವಿದು ನಡೆ ನಮ್ಮ ಮನೆಗೆ.....ಬಾರೇ ಭಾಗ್ಯದ ನಿಧಿಯೇ.....ಎಂದಿದ್ದಾರೇ ದಾಸರು..
*ಭೃಗುವಾರ ಬರಲೀಬೇಕು ಭಾರ್ಗವಿದೇವಿ....ಎಂದು ...ಶುಕ್ರವಾರಾಭಿಮಾನಿಯಾದ ಶ್ರೀಲಕುಮಿಯನ್ನು ..
ಇಂದಿರೇಶಾಂಕಿತ ರು ಪ್ರಾರ್ಥಿಸಿದ್ದಾರೆ*.
ಅನಂತಾನಂತ ರೂಪಾ ಚ ಜ್ಞಾನಾನಂದಾದಿ ರೂಪಿಣೀ|
ಸಮಾಚ ಸರ್ವ ರೂಪೇಷುವಿಶಿಷ್ಟಾ ದಕ್ಷಿಣಾ ಸುಖೇ||
...ಸತ್ತತ್ವರತ್ನಮಾಲಾ...೨೧೦.
ಶ್ರೀಲಕುಮಿಯು ಅನಂತಾನಂತಜ್ಞಾನಾನಂದಾತ್ಮಕ ರೂಪಗಳನ್ನುಹೊಂದಿದ್ದೂ.. ವಿಶೇಷವಾದ ದಕ್ಷಿಣಾ ನಾಮಕ ರೃಪದಿಂದ ಸುಖಾದಿ ವಿಷಯಗಳಲ್ಲಿ ಅತಿ ಉತ್ಕೃಷ್ಟಳಾಗಿದ್ದಳೇ..
ಉತ್ತರೊತ್ತರ ಸಾ ತು ವಿಶಿಷ್ಟಾ ದಕ್ಷಿಣಾ ಸುಖೇ|.....ಭಾಗವತ ತಾತ್ಪರ್ಯ.
ಶ್ರೀಲಕುಮಿ ನಿತ್ಯಾವಿಯೋಗಿನಿಯಾಗಿ ಹಗಲು ರಾತ್ರಿ ಶ್ರೀಹರಿಯ ಬಳಿಯಲ್ಲಿಯೇ..ಇದ್ದು ತಾನೇ ಸಾಧನ ಸಕಲವೂ ಆಗಿ ಸೇವಾದಿಗಳಲ್ಲಿ ತೊಡಗಿರುತ್ತಾಳೇ...
ಛತ್ರ ಚಾಮರ ವ್ಯಜನ ಪರ್ಯಂಕ ಪಾತ್ರರೂಪದಲ್ಲಿ ನಿಂತು ಚಿತ್ರ ಚರಿತನಾದ ಹರಿಯ ನಿತ್ಯ ಸೇವೇ ಮಾಡುತಿಹಳೂ....ಏನು ಧನ್ಯಳೋ ಲಕುಮಿ ಎಂಥಾ ಮಾನ್ಯಳೂ.....ಎಂದಿದ್ದಾರೇ ದಾಸರು..ನಾವು ಮಾಡುವ ಎಲ್ಲಾ ಪೂಜಾ ಸೇವಾದಿಗಳು ಶಂಖಸ್ಥಿತಳಾದ ಲಕ್ಷ್ಮೀಯ ಮೂಲಕವೇ ಎಂಬುದು ಗಮನಾರ್ಹ!!.
ಶ್ರೀ ಸಂತುಷ್ಟಾ ಹರೇಃ ತೋಷಂ ಜನಯೇಯೇತ್ ಕ್ಷಿಪ್ರಮೇವತು|
...ಗೀತಾ ತಾತ್ಪರ್ಯ -೧೨.
ಮರಳು ಮಾಡಿಕೊಂಡೆಯಲ್ಲೇ ಮಾಯಾದೇವಿಯೇ..ಇರುಳು ಹಗಲು ಏಕವಾಗಿ ಹರಿಯು ನಿನ್ನ ಬಿಡದಂತೇ.....ಎಂದೇ ಉಧ್ಗಾರತೆಗಿದ್ದಾರೆ ದಾಸರು.
ಹೀಗೆ ಮಹಾಲಕುಮಿಯ ಮಹಿಮೆಯನ್ನರಿತು ವಿಷ್ಣು ಸಹಿತವಾಗಿ ಶ್ರದ್ಧಾ ಭಕ್ತಿಗಳಿಂದ ಉಪಾಸಿಸಿದಲ್ಲಿ...ನಮಗೆ ಶ್ರೇಷ್ಠವಾದ ಮೋಕ್ಷ ಫಲ ಗಳನ್ನು ನೀಡುವುದರಲ್ಲಿ ಸಂದೇಹವೇ ಇಲ್ಲಾ...
ಎಂಬ ಯಥಾಮತಿ ವ್ಯಾಖ್ಯಾನ/ಚಿಂತನ ದೊಂದಿಗೆ ........
ಶ್ರೀಸುಗುಣವಿಠಲಾರ್ಪಣಮಸ್ತು.
🌻🌹🥦🌷🌸🥦🌸🌹🌷🌹
*****
ಹರೇ ಶ್ರೀನಿವಾಸ
ಒಲಿದೆ ಯಾತಕಮ್ಮ ಲಕುಮಿ ವಾಸುದೇವಗೆ
ಈ ಕೃತಿಯಲ್ಲಿ ದಶಾವತಾರದ ವರ್ಣನೆ ನಿಂದಾ ರೂಪದಲ್ಲಿ ಮೇಲ್ನೋಟಕ್ಕೆ ಕಂಡರೂ ಸರ್ವರೀತಿಯಿಂದಲೂ ಅಸಮ ಮಹಿಮನ ಕೊಂಡಾಡಿದ್ದಾರೆ..
ಹಲವು ಅಂಗದವನ..
ಹಲವು ಅಂಗ ಮೇಲ್ನೋಟಕ್ಕೆ ವಿಲಕ್ಷಣ ಎನಿಸಿದರೂ ಅಸಹಜ ಎನಿಸಿದರೂ ಭಗವಂತನ ಕುರಿತಾಗಿ ಸಂಪೂರ್ಣ ಮನೋಹರ ದೋಷದೂರವಾಗಿದೆ..
ಅವನಿಗೂ ಅವನ ಅಂಗಗಳಿಗೂ ಅವತಾರಗಳಿಗೂ ಭೇದವಿಲ್ಲ.. ಸ್ವಗತಭೇದವಿವರ್ಜಿತನು.. ಮತ್ಸ್ಯ ಕೂರ್ಮ ವರಾಹ ನಾರಸಿಂಹ ವಾಮನ ಭೃಗುರಾಮ ದಾಶರಥಿ ಕೃಷ್ಣ ಬುದ್ಧ ಕಲ್ಕಿ ಸೇರಿದಂತೆ ಅನಂತ ಅವತಾರಗಳು ಒಂದಕ್ಕೊಂದು ಭೇದವಿಲ್ಲ..
ತಿಳಿದೂ ತಿಳಿದೂ ತಿಳಿಯದ ಹಾಗೆ.
ಅವಳು ತಿಳಿದಷ್ಟು ತಾರತಮ್ಯೋಕ್ತ ಇತರರು ತಿಳಿದಿಲ್ಲ.. ನಿತ್ಯ ನೂತನ ರೂಪಗಳ ನೋಡುತ ಹಿಗ್ಗುವಳು ತಿಳಿದು ತಿಳಿದು.. ಆದರೂ ಗೊತ್ತಿದ್ದರೂ ಈ ತರಹದವನಿಗೆ ಏಕೆ ಒಲಿದೆ.. ಸಂಪೂರ್ಣವಾಗಿ ಅವನನ್ನು ತಿಳಿದಿಲ್ಲ.. ತಿಳಿದಿಲ್ಲ ಏನೋ ಎಂಬಂತೆ ತಿಳಿಯದೆ ಒಲಿದೆಯಾ.. ಅಂತಲೂ ಸಾಮಾನ್ಯವಾಗಿ ಹೇಳುವ ಹಾಗೆ.
ಮೂಲರೂಪ ನಾರಾಯಣ ಮಾಯಾ ಲೋಲ ಅನಂತ ಅವತಾರ ನಾಮಕ..
ಮೋಕ್ಷಪ್ರದ ವಾಸುದೇವ ರೂಪ..
ದಶಾವತಾರದ ವರ್ಣನೆ ಮಾಡುತ್ತ ಲಕ್ಷ್ಮೀ ದೇವಿಯ ವರ್ಣನೆ ಜೊತೆ ಜೊತೆಗೆ ಮಾಡುತ್ತಿದ್ದಾರೆ.
ಮೇಲ್ನೋಟಕ್ಕೆ ಮತ್ಸ್ಯ ನಾರುವ ರೂಪ ಎನಿಸಿ ಅವನಿಗೆ ಒಲಿದಾಕೆ ನೀನು ಕಮಲಗಂಧಿ
ಕೂರ್ಮರೂಪದಿಂದ ಮಂದರ ಗಿರಿ ಎತ್ತಿದ ಬೆನ್ನಿನವನು ಕಠಿಣ ಕಾಯ.. ಭಾರ ಎತ್ತಿದ ಬೆನ್ನು ಅಷ್ಟು ಕಠಿಣ.. ಅವನ ಒಲಿದಾಕೆ ನೀನು ಕೋಮಲಕಾಯೆ.. ಕೋಮಲಾಂಗಿ..
ಸುಸೂಕರ ರೂಪದವನು ಕೋರೆದಾಡೆಯವನು.. ಆದರೆ ಅವನ ಒಲಿದಾಕೆ ನೀನು ಸುಂದರಾಬ್ಜವದನೆ..
ಅಮಿತ ಘೋರ ರೂಪದ ಉಗ್ರ ನರಸಿಂಹ ರೂಪದವನಿಗೊಲಿದ ನೀನು ರಮಣಿ ಸ್ವರೂಪಿ..
ದಾನವ ಬೇಡುತ ಬಂದ ವಾಮನನಿಗೊಲಿದ ನೀನು ಬೇಡಿದವರಿಗೆ ಇಷ್ಟಾರ್ಥ ಕೊಡುವವಳು..
ಶುದ್ಧ ಮುನಿಪುಂಗವ ಭೃಗುಮುನಿ ವಂಶಜ ಜಮದಗ್ನಿ..
ಮುನಿ ಪುತ್ರ ಮುನಿಕುಲ ದ ಆಶ್ರಮವಾಸಿ.... ಜಪ ತಪ ನಿರತ ವೈರಾಗ್ಯದ ವಂಶ ದ... ಪರಶುರಾಮ ದೇವರಿಗೊಲಿದ ನೀನು ರತ್ನಾಕರ ಎನಿಸಿದ ಸಮುದ್ರರಾಜ ನ ಮಗಳು..
ವನವಾಸಿ ಆದ ಜಟಾ ವಲ್ಕಲಧಾರಿ ಸಾಧಾರಣ ಜೀವನ ಶೈಲಿಯವನಿಗೆ ಕಷ್ಟ ನಷ್ಟದ ವನದಲ್ಲಿ ಬದುಕುವನನಿಗೆ ಒಲಿದವಳು ನೀನು ಆನಂದಾಬ್ಜಸದನೆ..
ಮಾನೆ ಪತಿವ್ರತೆ ನೀನು ಶ್ರೀ ಭೂ ರೂಪಿಯು..
ಷಣ್ಮಹಿಷಿಯರ ಕುಬ್ಜೆಯ ಅಗ್ನಿ ಪುತ್ರ ರು ವರದಿಂದ ಬಂದ 16 ಸಾವಿರ ಸ್ತ್ರೀ ಯರ ರಮಣ ಅವನು..
ಅಸುರ ಜನ ಮೋಹನಾರ್ಥದ ಬುದ್ಧರೂಪ ತ್ರಿಪುರಾಸುರರ ಪತ್ನಿಯರ ವ್ರತ ಭಂಗ ಮಾಡಿದ ಬೆತ್ತಲೆ ನಿಂತ ಬುದ್ಧನಿಗೆ ಒಲಿದ ನೀನು ವೇದಮಾನಿ ಜ್ಞಾನ ಚಿತ್ರ ವಸನೆ..
ಲಲಿತೆ ಚಾರುಶೀಲೆ ನೀನು.. ಅವನು ದುರುಳರ ವಧಿಸಲು ಕಲಹ ಮಾಡಲೆಂಬಂತೆ ಕಲ್ಕಿ ರೂಪದಿಂದ ಕುದುರೆ ಏರೀ ಬರುವವನು..
ಸ್ವತಂತ್ರ ಜನನ ಮರಣಾದಿ ದೋಷದೂರ ಯಾರೂ ತಂದೆ ತಾಯಿಗಳಿರದ ಕುಲವಿಲ್ಲದವನು ಜಗಪಿತ ನು ಜಗದೀಶನು..
ಒಂದು ನೆಲೆ ಇಲ್ಲ.. ಸರ್ವತ್ರ ವ್ಯಾಪ್ತನು..ಹಲವು ಕಾಲದವನು ಆದರೂ ವೃದ್ಧಿ ಹ್ರಾಸ ಗಳು ಇಲ್ಲದವನು.
.. ಬಾಲಕನ ರೂಪದಲ್ಲಿ ಬೆರಳು ಚೀಪುತ ಮಲಗುವವನು.. ಅವನ ನಂಬಿದರೆ ನಶ್ವರ ಅಶುದ್ಧ ಸುಖದ ಸಂಸಾರವಿಲ್ಲ.. ನಿತ್ಯ ಸುಖದ ವೈರಾಗ್ಯ ಬಯಸುವರು.. ಉತ್ತಮ ತ್ರಿಧಾಮ ಬಯಸುವ ಸಾಧಕರು ಮರ್ತ್ಯ ಲೋಕ ಬರುವ ಹಾಗಿಲ್ಲ.. ಲೆಕ್ಕಿಸದೆ ಲಕುಮಿಯ ಬೊಮ್ಮನ ಪೊಕ್ಕಳಿಂದಲೀ ಪಡೆದ ಪೊಸಪೊಂಬಕ್ಕಿದೇರನ ಪಡೆದವಯವಗಳಿಂದ ದಿವಿಜರನು ಎಂಬಂತೆ ಸ್ವರಮಣ.. ಅನಪೇಕ್ಷೆ ಯವ.. ಸೃಷ್ಟ್ಯಾದಿ ಅಷ್ಟಕರ್ತ ತನಗೆ ಏನೂ ಲಾಭವಿಲ್ಲ.. ಅಜರಾಮರಣ.. ಹೀಗೆ ಅನಂತಾನಂತ ಅನಂತಾನಂತ ಮಹಿಮೆಗಳು ಉಳ್ಳ ಅವನಿಗೆ ನೀನು ವಕ್ಷ ಸ್ಥಳ ನಿವಾಸಿ..
ಇಂಥ ಲಕ್ಷ್ಮೀ ನಾರಾಯಣರ ಅನುಗ್ರಹ ಶ್ರೀಮದಾನಂದತೀರ್ಥಭಗವತ್ಪಾದಾಚಾರ್ಯರ ಅನುಗ್ರಹ ಸಕಲ ದೇವತೆಗಳು ಸಕಲ ಗುರುಗಳ ಅನುಗ್ರಹ ಸದಾ ಇರಲಿ ಎಂದು ಪ್ರಾರ್ಥಿಸುತ್ತ.. ಯಥಾಮತಿ ಪ್ರಯತ್ನ
-(received in WhatsApp)
*****
Olide yaatakammaa lakumi vaasudevage || pa ||
Halavangadavana havane tilidu tilidu tiliyada haage || a.pa ||
Kamalagandhi komalaangi sundaraabjavadane neenu |
Ramana matsya kathina kaaya sookaraasyanu ||
Ramaneeya swaroopi neenu amita gora roopanavanu |
Namiparishtadaani neenu daanava beduvavanige || 1 ||
Lalita chaaru sheele neenu kalki kalaha preeyanavanu |
Kulada kuruhu illaa gunada neleya kandillaa |
Halavu kaaladavanu avana balaga bandhu nishkinchananu|
Jaladhi aaladeleya mele malagi berala cheepuvavanige || 2 ||
Swarataana pekshakaami nidraaheena anashaniyu |
Sparsharoopa vaachya shabda amita bhoktanu ||
Guru gopaalaviththalanu niruta tanna vakshadolu |
Aramaneya maadi kottu maralu maadida maayaavige || 3||
***