Showing posts with label ರಾಜರಾಜೇಶ್ವರನೇ ರಾಜೀವವದನ ಶ್ರೀ prasannashreenivasa. Show all posts
Showing posts with label ರಾಜರಾಜೇಶ್ವರನೇ ರಾಜೀವವದನ ಶ್ರೀ prasannashreenivasa. Show all posts

Thursday 5 August 2021

ರಾಜರಾಜೇಶ್ವರನೇ ರಾಜೀವವದನ ಶ್ರೀ ankita prasannashreenivasa

 ..

kruti by ಪ್ರಸನ್ನ ಶ್ರೀನಿವಾಸದಾಸರು prasanna shreenivasaru

ರಾಜರಾಜೇಶ್ವರ ಸ್ತೋತ್ರ ಹಾಗೂ ಶ್ರೀ ಕಪಿಲ


ರಾಜರಾಜೇಶ್ವರನೇ ರಾಜೀವವದನ ಶ್ರೀ

ರಾಜರಾಜೇಶ್ವರಿ ಪತೇ ಶರಣು ಮಾಂಪಾಹಿ

ರಾಜೀವಪಿತ ನೀನು ಕನ್ಯೆಯರಿಗೆ ವರ

ಪ್ರಜಾಸಂಪತ್ ಉದ್ಯೋಗ ಈವಿ ಭಜಕರಿಗೆ ಪ


ವೇಧ ಕಾಯಜ ಸ್ವಾಯಂಭುವ ಮನು ಶತರೂಪಾ

ಈ ದಂಪತಿಗೆರಡು ಗಂಡುಗಳು ಪ್ರಿಯವ್ರತ

ಉತ್ಥಾನಪಾದ ಮೂರು ಹೆಣ್ಣು ಮಕ್ಕಳು

ಅಕೂತಿ ದೇವಹೂತಿ ಪ್ರಸೂತಿ ಎಂಬುವರು 1

ಶ್ರೀಪತಿಯೇ ನಿನ್ನ ಕಾರುಣ್ಯ ಬಲದಿಂದ

ಸುಪುಣ್ಯ ಶ್ಲೋಕ ಆದಿಮನು ತನ್ನ

ರೂಪ ಗುಣ ಶ್ರೇಷ್ಠ ಕನ್ಯೆಯರಿಗೆ ತಕ್ಕಾನು -

ರೂಪ ವರರುಗಳಿಗೆ ಮದುವೆ ಮಾಡಿಸಿದನು 2

ಪುತ್ರಿಕಾ ನಿಯಮದಿ ಆಕೂತಿ ದೇವಿಯನು

ಸುತಪೋಧನ ಪ್ರಜೇಶ್ವರ ರುಚಿಗೆ ಕೊಟ್ಟ

ನಿರ್ದೋಷ ಕಲ್ಯಾಣ ಗುಣಗಣಾರ್ಣವ ನೀನು

ಪ್ರಾದುರ್ಭವಿಸಿದಿ ಯಜ್ಞಶ್ರೀಯು ದಕ್ಷಿಣಾದೇವಿಯು 3

ಕರ್ದಮ ಪ್ರಜೇಶ್ವರರ ಭಕ್ತಿ ತಪಸ್ ಏನೆಂಬೆ

ಶ್ರೀದ ನಿನ್ನಯ ಭಕ್ತ ವಾತ್ಸಲ್ಯಕ್ಕೆಣೆಯುಂಟೆ

ಪದ್ಮಜನು ಕರ್ದಮಗೆ ಪ್ರಜಾಃಸ್ರುಜ ಎನ್ನಲು

ಭಕ್ತಿಯಿಂ ತಪಗೈಯೇ ಪ್ರತ್ಯಕ್ಷನಾದಿ 4

ಸುಪುಷ್ಕರಾಕ್ಷ ನೀ ಸೂರ್ಯ ತೇಜಃಪುಂಜ

ಪ್ರಪನ್ನರ್ಗೆ ಬೀರುವ ಕಾರುಣ್ಯನೋಟ

ವಿಪುಲಾಬ್ಜ ವದನ ಸುಂದರಸುಳಿಗೊರಳು

ಸುಭ್ರಾಜ ಕುಂಡಲ ಕಿರೀಟದ ಹೊಳಪು 5

ಉರುಕಾಂತಿಯಿಂ ಜ್ವಲಿಪ ಅರಿ ಶಂಖ ಗದೆಯ

ಶುಭ್ರೋತ್ಪಲ ಪುಷ್ಪ ಕರಗಳ ಹಿಡಿದಿಹಿ

ವಿರಾಜಿಸುವ ಕೌಸ್ತುಭಶಿತ ಪದ್ಮೋತ್ಪಲಸ್ರಜ

ಶ್ರೀರಮಣ ನಿನ್ನ ಶ್ರೀವತ್ಸ ಸೌಂದರ್ಯ ಏನೆಂಬೆ 6

ದ್ವಿಷÉೂೀಡಶ ಶುಭಲಕ್ಷಣ ಸುಲಕ್ಷಿತ

ಪುಷ್ಪಭವ ವರವಾಯು ಸಂಸೇವ್ಯ ಶ್ರೀಶ

ಶೇಷಾಹಿ ಭೂಷಣಾದ್ಯಮರ ಸನ್ನುತ ನೀನು

ಪಕ್ಷಿಸೋಪರಿ ಅಂಬರದಿ ನಿಂತಿ 7

ಉತ್ತಮಶ್ಲೋಕ ನಿನ್ನ ಕರ್ದಮ ಹರುಷದಿನೋಡಿ

ಕ್ಷಿತಿಯಲ್ಲಿ ಬಿದ್ದು ಸನ್ನಮಿಸಿ ಸ್ತುತಿಸೇ

ಮಾಧವನೇ ನೀನು ಹೇಳಿದಿ ಸ್ವಾಯಂಭುವನು

ಶತರೂಪಾ ದೇವಹೂತಿ ಸಹ ಬರುವನೆಂದು 8

ಆ ಮನು ದಂಪತಿಯು ಮತ್ತು ದೇವಹೂತಿಯು

ಧರ್ಮನಿಷ್ಠರೂ ಸದ್ಗುಣಾದಿ ಶ್ರೇಷ್ಠರೆಂದಿ

ರಮಣೀಯ ಆಕೆಯ ಕರ್ದಮರು ಪರಸ್ಪರ ಅರ್ಹರೆಂದಿ

ಹೆಣ್ಣುಮಕ್ಕಳೊಂಬತ್ತು ಸ್ವಯಂ ನೀ ಅವತರಿಪಿ ಎಂದಿ 9

ಸತಿ ಸುತಾ ಸಹ ಸ್ವಾಯಂಭುವ ಬರಲು ಮುನಿಯು

ಆದರದಿ ಸ್ವಾಗತ ನೀಡಿ ರಾಜನಲಿ ಯುಕ್ತ

ಸದ್ಭೋಧ ರೂಪದಲಿ ಮಾತನಾಡೆ ಮನವು

ಬಂದ ಕಾರ್ಯ ಹೇಳಿದನು ವಿನಯ ಗಾಂಭೀರ್ಯದಿ 10

ದುಹಿತ್ರು ಸ್ನೇಹ ಪರಿಕ್ಲಿಷ್ಟ ಮನದಿಂದ ದೀನ

ನಾ ಹೇಳುವುದು ಕೃಪೆಯಿಂದ ಕೇಳಿರಿ ತಮ್ಮ

ಬಹುಶೀಲ ಗುಣ ವಯಸ್ ರೂಪಾದಿಗಳ

ಮಹರ್ಷಿ ನಾರದರು ಹೇಳಿ ಕೇಳಿಹಳು ದೇವಹೂತಿ 11

ಸರ್ವಾತ್ಮನಾ ತಮಗೆ ಅನುರೂಪ ಗೃಹಿಣಿ ಅಗುವಳು

ಅವಳನ್ನ ದಯದಿಂದ ವಧುವಾಗಿ ಸ್ವೀಕರಿಸಿ

ವಿವಾಹ ವಿಧಿಪೂರ್ವಕ ಮಾಡಿಕೊಳ್ಳಿರಿ ಎಂದು

ಈ ವಿಧದಿ ರಾಜ ಕೋರಲು ಮುನಿಯು ಒಪ್ಪಿದನು 12

ಸಾಧು ಮಾತುಗಳಾಡಿ ಹಸನ್ಮುಖವ ತೋರಿಸಿ

ಕರ್ದಮರು ಅರವಿಂದನಾಭನ್ನ ಸ್ಮರಿಸುತ್ತ

ಶಾಂತವಾಗಿ ಸುಮ್ಮನೇ ಕುಳಿತರು ಆಗ ಮನು

ವಿಧಿಪೂರ್ವಬ್ರಾಹ್ಮಿವಿವಾಹಕ್ಕೆ ಏರ್ಪಾಡು ಮಾಡಿದನು 13

ಶ್ರೀವರನೇ ನಿನ್ನಾನುಗ್ರಹ ಬಲದಿಂದಲೇ

ದಿವ್ಯಾಭರಣ ಉಡುಗೊರೆ ವೈಭವದಿಂದ

ದೇವಹೂತಿ ಕರ್ದಮರ ವಿವಾಹ ಮಾಡಿ ಕೃತಕೃತ್ಯ

ಸ್ವಾಯಂಭುವ ಬರ್ಹಿಷ್ಮತಿ ಸೇರಿದನು 14

ಕರ್ದಮರು ದೇವಹೂತಿಯು ಗೃಹಸ್ಥತನ ಚರಿಸಿದನು

ಪತಿ ಇಂಗಿತವರಿತು ಪಾರ್ವತಿ ಶಿವನಿಗೆ

ಎಂತಹ ಸೇವೆ ಮಾಳ್ಪಳೋ ಅದರಂತೆ ಪ್ರೀತಿಯಿಂದ

ಪತಿಸೇವೆ ಮಾಡುತ್ತಿಹಳು ದೇವಹೂತಿ ಸಾಧ್ವಿ15

ಯೋಗಾತಿಶಯ ಸಾಮಥ್ರ್ಯದಿ ಕರ್ದಮರು

ಕಾಮಗ ವಿಮಾನ ನಿರ್ಮಿಸಿ ದಾಂಪತ್ಯ

ಸುಖ ವಿಹಾರವ ಮಾಡಿ ಹೇ ಸ್ವಾಮಿ ನಿನ್ನ ಕೃಪದಿ

ಮಕ್ಕಳು ಸ್ತ್ರೀ ಪ್ರಜಾ ಒಂಭತ್ತು ಹುಟ್ಟಿದವು 16

ಶ್ರೀಕರ ನಾರಾಯಣ ನೀ ಕಪಿಲಾವತಾರ

ಆ ಕರ್ದಮರು ದೇವಹೂತಿ ಮಗನೆನಿಸಿ

ಉತ್ಕøಷ್ಟ ಸಾಧು ಸಾಂಖ್ಯ ತತ್ವೋಪದೇಶವ

ಅ ಕುಟಿಲ ಮಾತೆಗೆ ಬೋಧಿಸಿದ್ದು ಪ್ರಸಿದ್ಧ 17

ಕರ್ದಮರ ಒಂಭತ್ತು ಕನ್ಯೆಯರು ಕಲಾ, ಅನಸೂಯ,

ಶ್ರಧ್ಧಾ, ಹರ್ವಿಭೂ, ಗತಿ, ಕ್ರಿಯಾ, ಊರ್ಜಾ, ಶಾಂತಿ ಖ್ಯಾತಿ

ಸಾಧ್ವಿಗಳಿವರು ಮರೀಚತ್ರಿ, ಅಂಗೀರ, ಪುಲಸ್ತ್ಯ ಪುಲಹ

ಕ್ರತು ವಶಿಷ್ಟಾ ಭೃಗುಗಳಿಗೆ ಮದುವೆ - ಆದರೀ ಕ್ರಮದಿ 18

ಐಶ್ವರ್ಯವಂತ ಸ್ವಾಯಂಭುವ ಮನು ತನ್ನ ಮಗಳು

ಪ್ರಸೂತಿಯನು ಬ್ರಹ್ಮಪತ್ರ ದಕ್ಷನಿಗೆ ಕೊಟ್ಟು ಆಕೆ

ಪ್ರಸವಿಸಿದಳು ಷೋಡಶಾಮಲಲೋಚನೆ ಪುತ್ರಿಯರ

ಸುಶೀಲ ಸಾಧ್ವಿಯರು ಮದುವೆ ಅದರು ಸುಲಭದಿ 19

ಶ್ರಧ್ಧಾ, ಮೈತ್ರಿ, ದಯಾ, ಶಾಂತಿ, ತುಷ್ಟಿ, ಪುಷ್ಟಿ, ಕ್ರಿಯಾ

ಉನ್ನತಿ, ಬುದ್ಧಿ, ಮೇಧಾ, ತಿತಿಕ್ಷಾ, ಹ್ರೀ ಮೂರ್ತಿ

ಹದಿಮೂರು ಈ ಕನ್ಯೆಯರು ಮದುವೆ ಆದರು ಧರ್ಮಗೆ

ಸಾಧ್ವಿ ಸ್ವಾಹಾಪತಿ ಅಗ್ನಿಪಿತೃಗಳ ಪತ್ನಿ ಅದಳು ಸ್ವಧಾ 20

ಶ್ರೀ ರಮಾಪತಿ ನಿನ್ನ ಕಾರುಣ್ಯ ಏನೆಂಬೆ

ಪಿತೃದೇವರೊಳ್ ಅಂತರ್ಗತನಾಗಿ ನೀನೇ

ಪಿತೃದೇವರ್ಗಳನ್ನ ಪುತ್ರ ಸಂತಾನ ಬೇಕೆಂದು

ನರರು ಬೇಡಿಕೊಂಡರೆ ಭಕ್ತಿ ಮೆಚ್ಚಿ ಫಲವೀವಿ 21

ಸತಿದೇವಿ ಭವನ ಪತ್ನಿಯಾದಳು ವಿಹಿತದಿ

ಪತಿಭಕ್ತಿ ಪತಿಸೇವಾ ಸದಾರತಳು ಭವಾನಿ

ಹದಿನಾರು ಕನ್ಯೇಯರ ದಕ್ಷನು ಹರಿ ನಿನ್ನದಯದಿ

ಮದುವೆ ಮಾಡಿ ಕೊಟ್ಟನು ಹಾಗೂ ಪುನರವತಾರದಲ್ಲೂ 22

ಧನಹೀನರಿಗೂ ನೀನು ಉದಾರ ಕಾರುಣ್ಯದಿ

ಧನಒದಗಿಸಿ ಮದುವೆ ಮಾಡಿಸುವಿಯೋ

ಮುನಿವರ್ಯ ರುಚಿಕರಿಗೆ ವರುಣನ ದ್ವಾರ ನೀ

ಕನ್ಯಾಶುಲ್ಕ ಒದಗಿಸಿ ವಿವಾಹ ಮಾಡಿಸಿದಿ 23

ಪಶುಪತ್ನಿ ಸಂತಾನ ಯಜ್ಞ, ಧನ ವಿವಾಹೋತ್ಸವ

ಯಶಸ್ ತೇಜೋಬಲ ವೀರ್ಯ ಪ್ರಜಾಸೃಷ್ಟಿ ಅಧಿಕಾರ

ಐಶ್ವರ್ಯ ಇಂತಹುದು ದಕ್ಷಗೆ ಬಹು ಕೊಟ್ಟು -

-ಅವನೋಳ್ ಇದ್ದು

ಯಶ ಎಂದು ಕರೆಸಿಕೊಂಬ ಶ್ರೀರಮಣ ಶ್ರೀಕರ -

-ನಮೋ ನಮೋ ನಿನಗೆ 24

ನಂದಿನೀಧರ ಶಿವನೊಳ್ ಅಂತರ್ಯಾಮಿಯಾಗಿರುತ

ಪುಂಸ್ತ್ರೀ ಪ್ರಜಾಸೃಷ್ಟಿ ಮುಂಜಿ ಮದುವೆ ಮಕ್ಕಳು ಮೊಮ್ಮಕ್ಕಳು

ಇಂಥಾ ಸಂತಾನ ಮತ್ತು ಆಯುಷ್ಯ ಸುಖವೀವಿ ಪ್ರಜಾತಿಹಿ

ಅಮೃತಂ ಆನಂದ ಎಂದು ಕರೆಸಿಕÉೂಂಬ ನಿನಗೆ ಶರಣು 25

ಮನು ಸ್ವಾಯಂಭುವ ದಕ್ಷ ಮರುತ ದೇವತೆಗಳೊಳ್

ಶ್ರೀನಿಧಿಯೇ ನೀನಿದ್ದು ಪ್ರಜೋತ್ಪತ್ಯಾದಿಗಳನ್ನು ಈವಿ

ಈ ನುಡಿಗಳ ಪಠಣ ಫಲ ಮೋಕ್ಷ ಹೇತು - ಸಜ್ಞಾನ ಲಾಭವು

ಇನ್ನೂ ಅವಾಂತರ ಫಲ ವಿವಾಹ ಸಂತಾನ

ಆಯುರಾರೋಗ್ಯ ಉದ್ಯೋಗ ಪ್ರಾಪ್ತಿ 26


ಮಂದಜಾಸನಪಿತ ಶ್ರೀ ಪ್ರಸನ್ನ ಶ್ರೀನಿವಾಸ

ಒಂದು ಪುತ್ರ ಬೇಕೆನ್ನೆ ಮೂವರನ್ನು ನೀ ಕೊಟ್ಟೆ

ಅಂದು ನೀನೇ ತೋರ್ದಿ ಮಗನಾಗಿ ಮನುವಿಗೆ

ಒಂದೇಮನದಿ ಇದು ಪಠಿಸೆ ನೀ ಒಲಿವೆ 27

-ಇತಿ ಶ್ರೀ ರಾಜೇಶ್ವರ ಸ್ತೋತ್ರ ಸಂಪೂರ್ಣಂ -

***