Showing posts with label ಕೇಶವನ ದಾಸರಿಗೆ ಘಾಸಿಯುಂಟೆ sirigovinda vittala. Show all posts
Showing posts with label ಕೇಶವನ ದಾಸರಿಗೆ ಘಾಸಿಯುಂಟೆ sirigovinda vittala. Show all posts

Monday 2 August 2021

ಕೇಶವನ ದಾಸರಿಗೆ ಘಾಸಿಯುಂಟೆ ankita sirigovinda vittala

ಲೋಕನೀತಿಯ ಪದ


ಕೇಶವನ ದಾಸರಿಗೆ ಘಾಸಿಯುಂಟೆ

ವಾಸವನ ವಜ್ರಕೆ ಗಿರಿನಿಕರದಂಜಿPಯೆ ಪ


ಇದ್ದಲಿಯನು ಗೊರಲಿ ಮೆದ್ದು ಜೀವಿಪದುಂಟೆ

ಮದ್ದಾನೆಗಳಿ ಗಲ್ಪ ನರಿಯ ಭಯವೇ

ಅಬ್ದಗಳು ಮರುತನೊಳು ಯುದ್ಧ ಬಯಸುವದುಂಟೆ

ಸಿದ್ಧರಿಗೆ ಭವಪಾಶ ಪದ್ಧತಿಯು ಉಂಟೆ 1


ಗುರುಕೃಪೆಯ ಪಡೆದವಗೆ ಪರಸೌಖ್ಯ ತಪ್ಪದೇ

ಹರಿಯ ಸ್ಮರಿಸುವ ನರಗೆ ನರಕ ಭಯವೇ

ಸರಿಗಟ್ಟಿ ಉರಗ ನಭಚರನೆದುರಲ್ಲಿಪ್ಪದೆ

ನರಚಂಡಕರಕರ ಕಂಡು ಅರುಳುವುದೆ ಕುರುಕುಮುದಾ 2


ಮೇರುವಿಗೆ ಛಳಿ ಭಯವೇ

ವಾರಿಧಿಗೆ ಮಳಿ ಭಯವೇ

ಮಾರನ್ನ ಗೆದ್ದವಗೆ ನಾರಿ ಭಯವೇ

ತಾರಕಾ ಪ್ರೀಯ ಶಿರಿಗೋವಿಂದವಿಠಲಗೆ

ಸೇರಿರುವ ಶೂರರಿಗೆ ಆವ ಭಯವೈಯ್ಯಾ 3

***