Showing posts with label ಪರಮತ ಘನವನ ಪಾವಕನೆ ಶರಣು shree krishna PARAMATA GHANAVANA SHARANU SRIPADARAJA STUTIH. Show all posts
Showing posts with label ಪರಮತ ಘನವನ ಪಾವಕನೆ ಶರಣು shree krishna PARAMATA GHANAVANA SHARANU SRIPADARAJA STUTIH. Show all posts

Thursday 24 June 2021

ಪರಮತ ಘನವನ ಪಾವಕನೆ ಶರಣು ankita shree krishna PARAMATA GHANAVANA SHARANU SRIPADARAJA STUTIH

Audio by Vidwan Sumukh Moudgalya


ಶ್ರೀ ವ್ಯಾಸರಾಜರು ರಚಿಸಿರುವ  ಶ್ರೀ ಶ್ರೀಪಾದರಾಜರ ಸ್ತೋತ್ರ ಪದ


 ರಾಗ : ಬಿಲಹರಿ   ಆದಿತಾಳ


ಪರಮತ ಘನವನ ಪಾವಕನೆ

ಶರಣು ಭೂಸುರನುತ ಸಿರಿ ನಾರಾಯಣಯೋಗಿ॥ಪ॥


ಧರೆಯಲ್ಲಿ ಮೂರೇಳು ಕುಮತರ ಭಾಷ್ಯವ

ಕಿರಕು ಹಾವಿಗೆಯಂದದೀ ರಚಿಸಿ

ಚರಣಾದಿಂದಲಿ ತುಳಿದು ಶತ್ರು ಖಳರ ಕರದು

ಮೊರೆಯಿಡುತಿವೆ ಶಾಸ್ತ್ರಾ ಶರಿಯ ಬಿಡಿಸಿರೆಂಬ॥೧॥


ಸಿರಿಕೃಷ್ಣನ್ನ ಧ್ಯಾನದೊಳಿರೆ ವ್ಯಾಸಮುನಿರಾಯ

ಗುರಗಾ ಬಂಧಿಸಲು ಧ್ಯಾನದಿ ತಿಳಿದು

ಮರುತಾವೇಗದಿ ಬಂದು ಫಣಿಯೊಡನೆ ಭಾಷಿಸೆ ತೊ-

ಡರು ಬಿಡಿಸಿದ ಅಹಿಪಾಶದ ಗುರುರಾಯ॥೨॥


ಸುರನಾಥಪುರಕಂದು ಘನಪುಷ್ಪ ವಿಮಾನದಿ

ಸುರುವುತ್ತಲೆರೆ ರಘುನಾಥೇಂದ್ರರ

ವರವೃಂದಾವನ ಪ್ರದಕ್ಷಿಣೆಯೊಳುನೀಕ್ಷಿಸೆ

ಕರದು ಭಾಷಿಸೆ ಕಳುಹಿದಾಶ್ಚರ್ಯ ಚರಿತ॥೩॥


ಸುರತರುವಿನಂದದಿ ಬೇಡಿದಿಷ್ಟಾರ್ಥವ

ಕರದಿತ್ತ ಈ ಬುಧಜನರಿಗೆಲ್ಲ

ನರನೊಬ್ಬ ದೂಷಿಸೆ ನೋಡಿ ಆ ಕ್ಷಣದಲ್ಲಿ

ಅರಕ್ಷಣಕವನ ತನು ಬಿರಿಯೆ ರಕ್ಷಿಸಿದೆ॥೪॥


 ಸಿರಿಕೃಷ್ಣನ್ನ ಪಂಕಜ ಮಧುಪನೆನಿಪ

ವರಹೇಮತೀರ್ಥರ ಮುನಿ ಕುವರಾ

ಸುರನರರೊಳಗೆ ಪ್ರಖ್ಯಾತ ಮಂಗಳ ಕಾಯ

ಅರಿಶರಭ ಭೈರುಂಡನೆನಿಪ ಶ್ರೀಪಾದರಾಯ॥೫॥

****

ಶ್ರೀಪೂರ್ಣಬೋಧ ಕುಲವಾರ್ಧಿ ಸುಧಾಕರಾಯ

ಶ್ರೀವ್ಯಾಸರಾಜ ಗುರವೇ ಯತಿಶೇಖರಾಯ।

ಶ್ರೀರಂಗವಿಟ್ಠಲ ಪದಾಂಬುಜ ಬಂಭರಾಯ

ಶ್ರೀಪಾದರಾಜಗುರವೇಸ್ತು ನಮಶ್ಯುಭಾಯ॥

***