Showing posts with label ಸ್ಮರಿಸೊ ಮಾನವನೆ ಗುರುಚರಣ ಅಂತ: ಕರಣ karpara narahari. Show all posts
Showing posts with label ಸ್ಮರಿಸೊ ಮಾನವನೆ ಗುರುಚರಣ ಅಂತ: ಕರಣ karpara narahari. Show all posts

Monday 2 August 2021

ಸ್ಮರಿಸೊ ಮಾನವನೆ ಗುರುಚರಣ ಅಂತ: ಕರಣ ankita karpara narahari

ಸ್ಮರಿಸೊ ಮಾನವನೆ ಗುರುಚರಣ ಅಂತ:

ಕರಣ ಶುದ್ಧಿಯಲಿ ಮರೆಯದೆ ಪ್ರತಿದಿನ ಪ


ನಿರುತ ಸ್ಮರಿಪರ ದುರಿತ ಘನತತಿ ಮರುತ ಶ್ರೀ

ರಘುದಾಂತ ತೀರ್ಥರ ಕರಜ ಶ್ರೀ ರಘುವೀರ

ತೀರ್ಥರ ಚರಣಯುಗಲವ ಹರುಷದಿಂದಲಿ ಅ.ಪ


ಧರೆಯೋಳ್ ಸುಂದರ ಸುರಪುರದಿ ಜನಿಸಿ

ಗುರು ವಿಠ್ಠಲಾರ್ಯರ ಚರಣಾನುಗ್ರಹದಿ

ವರ ಶಬ್ದ ಶಾಸ್ತ್ರವ ತ್ವರದಿ ಕಲಿತು

ತುರಿಯಾ ಶ್ರಮವನೆ ಸ್ವೀಕರಿಸಿ ಗುರುಮುಖದಿ

ಮರುತ ಶಾಸ್ತ್ರವನರಿತು ಧರ್ಮದೊಳಿರುತ ವಿಷಯದಿ

ವಿರತಿಯಲಿ ಅನವರತ ಪ್ರವಚನ ನಿರತ ಸದ್ಗುಣ

ಭರಿತ ಪಾವನ ಚರಿತರಂಘ್ರಿಯ 1


ಹೇಮಾಲಂಕೃತ ರತ್ನನಿಚಯಯುಕ್ತ

ಹೇಮ ಮಂಟಪದಿ ಸುಂದರ ಶುಭಕಾಯಾ

ಶ್ರೀ ಮನೋಹರ ಕವಿಗೇಯಾ ಬ್ರಹ್ಮ

ವ್ಯೋಮ ಕೇಶಾದಿ ನಿರ್ಜರಗÀಣಶೇವ್ಯಾ

ಭೂಮಿ ಸುರಜನ ಸ್ತೋಮಕನುದಿನ

ಕಾಮಿತಾರ್ಥವ ಗರಿವ ಸೀತಾರಾಮರಂಘ್ರಿಯ

ತಾಮರಸವನು ನೇಮದಿಂದರ್ಚಿಪರ ಶುಭಪದ2


ಪರಿಶೋಭಿಸುವ ಕಾಷಾಯ ವಸ್ತ್ರ

ವರನಾಮ ಮುದ್ರಾಲಂಕೃತ ತನುಸಿರಿಯ

ಗುರು ಅಕ್ಷೋಭ್ಯರ ಶುಭಚರಿಯ ಗ್ರಂಥ

ವಿರಚಿಸಿದರು ನವರತುನ ಮಾಲಿಕೆಯ

ಧರಣಿಯೊಳು ಸಂಚರಿಸುತಲಿ ಬಲು

ಕರುಣದಿಂದಲಿ ಶರಣು ಜನರಘ

ಹರಣ ದೀನೋದ್ಧರಣ ಭವ ಭಯಹರಣ

ಗುರುವರ ಚರಣಯುಗಲವ3


ಮಾರಾರಿ ವಿನುತ ಸಮೀರ ಕೃತ

ಸಾರಶಾಸ್ತ್ರವನೆ ಬೋಧಿಸುತ ಸಜ್ಜನರ

ಘೋರ ಸಂಸೃತಿ ಭಯದೂರ ಮಾಡಿ

ತೋರಿ ಸನ್ಮಾರ್ಗ ದೀಪಿಕೆಯ ಸುಸಾರ

ಸೇರಿದವರಘ ದೂರ ಪರಮೋದಾರ ಗುಣ ಗಂ-

ಭೀರರೆನ್ನುತ ಸೂರಿಜನ ಪರಿವಾರನುತ ಜಿತ-

ಮಾರ ಶ್ರೀ ರಘುವೀರ ತೀರ್ಥರ 4


ಶೇಷಾಚಲದಿ ಶಿಷ್ಯಗಣದಿ ಬಂದ

ಶ್ರೀ ಸತ್ಯ ಪ್ರಮೋದ ತೀರ್ಥರ ಸ್ವರ್ಣೋತ್ಸವದಿ

ತೋಷಬಡಿಸುತ ನಿರ್ಭಯದಿ ಉಪನ್ಯಾಸ ಮಾಡಿದರು

ವಿದ್ವಾಂಸರ ಸಭದಿ ವೀಶಗಮನ ಸುರೇಶ ಭಕುತರ

ಪೋಷ ಕಾರ್ಪರ ವಾಸ ಸಿರಿ ನರಕೇಸರಿಗೆ ಪ್ರಿಯದಾಸ

ಕೊಡಲಿವಾಸ ಕರ್ಮಂದೀಶರಂಘ್ರಿಯ 5

****