ರಾಗ - : ತಾಳ -
ಪಾಲಿಸೊ ನರಸಿಂಹ ಪಾಲಿಸೊ ll ಪ ll
ಪಾಲಿಸೊ ಪರಮ ಪಾವನ್ನ ಕಮ
ಲಾಲಯ ನಂಬಿದೆ ನಿನ್ನ ಆಹ
ಬಾಲೇಂದುಕೋಟಿಯ ಸೋಲಿಪ ನಖ ತೇಜ
ಮೂರ್ಲೋಕದರಸೆ ನೀನಾಲಯ ಬಿಡದಲೆ ll ಅ ಪ ll
ಹಿಂದೆ ಪ್ರಹ್ಲಾದನ ಮೊರೆಯ ಕೇಳಿ
ಬಂದು ಕಾಯಿದೆ ಭಕ್ತ ಪ್ರಿಯ ಸುಖ
ಸಂದೋಹ ಮೂರುತಿ ಆಯತಾಕ್ಷ
ಎಂದೆಂದು ಬಿಡದಿರು ಕೈಯ ಆಹ
ವೃಂದಾರ ಕೇಂದ್ರಗೆ ಬಂದ ದುರಿತಂಗಳ
ಹಿಂದೆ ಮಾಡಿ ಕಾಯ್ದೆ ಇಂದಿರಾರಮಣನೆ ll 1 ll
ಹರಣದಲ್ಲಿ ನಿನ್ನ ರೂಪ ತೋರಿ
ಪರಿಹರಿಸೊ ಎನ್ನ ಪಾಪ ದೂರ
ದಿರದಿರು ಹರಿಸಪ್ತ ದ್ವೀಪಾಧಿಪ
ಸಿರಿಪತಿ ಭಕ್ತ ಸಲ್ಲಾಪ ಆಹ
ಕರಣಶುದ್ಧನ ಮಾಡಿ ಕರೆಯೊ ನಿನ್ನ ಬಳಿಗೆ
ನರಕಂತೀರವ ದೇವ ಚರಣ ಆಶ್ರಯಿಸಿದೆ ll 2 ll
ಶರಣ ಪಾಲಕನೆಂಬೊ ಬಿರುದು ಕೇಳಿ
ತ್ವರಿತದಿ ಬಂದೆನೊ ಅರಿದು ಇನ್ನು
ಪರಿ ಪರಿ ಅಪರಾಧ ಜರಿದು
ಪರತರನೆ ನೋಡೆನ್ನ ಕಣ್ತೆರೆದು ಆಹ
ಮರಣ ಜನನಂಗಳ ತರಿದು ಬಿಸುಟು ನಿನ್ನ
ಶರಣರ ಸಂಗದಲ್ಲಿರಿಸಿ ಉದ್ಧರಿಸೆನ್ನ ll 3 ll
ಸಂಸಾರ ಸಾಗರ ದೊಳಗೆ ಎನ್ನ
ಹಿಂಸೆ ಮಾಡುವರೇನೊ ಹೀಂಗೆ ನಾನು
ಕಂಸಾರಿ ಅನ್ಯರಿಗೆ ಬಾಗೆ ಮತ್ತೆ
ಸಂಶಯವಿಲ್ಲ ಮಾತಿಗೆ ಆಹ
ಹಂಸ ಡಿಭಿಕರನ್ನು ಧ್ವಂಸ ಮಾಡಿದ ಶೌರಿ
ಶಿಂಶುಮಾರ ಮೂರ್ತಿ ದಿವಸ ದಿವಸದಲ್ಲಿ ll 4 ll
ಸಿರಿಬೊಮ್ಮ ಭವ ಶಕ್ರಾದ್ಯಮರ ಕೈಯ
ನಿರುತ ತುತಿಸಿಕೊಂಬ ಧೀರ ಶುಭ
ಪರಿಪೂರ್ಣ ಗುಣ ಪಾರಾವಾರ ಭಕ್ತ
ವಾರಿನಿಧಿಗೆ ಚಂದಿರ ಆಹ
ಸ್ಮರನ ಕಾಂತಿಯ ನಿರಾಕರಿಸುವ ತೇಜನೆ
ಎರವು ಮಾಡದೆ ಹೃತ್ಸರಸಿಜದೊಳು ತೋರಿ ll 5 ll
ಮೊದಲು ಮತ್ಸ್ಯಾವತಾರದಿ ವೇದ
ವಿಧಿಗೆ ತಂದಿತ್ತ ವಿನೋದಿ ಶ
ರಧಿಯೊಳು ಸುರರಿಗೋಸ್ಕರದಿ ನೀನು
ಸುಧೆಯ ಸಾಧಿಸಿ ಉಣಿಸಿದೆ ಆಹ
ಅದುಭೂತ ಭೂಮಿಯ ತೆಗೆದೊಯ್ದವನ ಕೊಂದು
ಮುದದಿ ಹಿರಣ್ಯಕನುದರ ಬಗೆದ ಧೀರ ll 6 ll
ಬಲಿಯ ಮನೆಗೆ ಪೋಗಿ ದಾನ ಬೇಡಿ
ತುಳಿದೆ ಪಾತಾಳಕ್ಕೆ ಅವನ ಪೆತ್ತ
ವಳ ಶಿರ ತರಿದ ಪ್ರವೀಣ ನಿನ್ನ
ಬಲಕೆಣೆಗಾಣೆ ರಾವಣನ ಆಹ
ತಲೆಯನಿಳುಹಿ ಯದುಕುಲದಿ ಜನಿಸಿ ನೀನು
ಲಲನೇರ ವ್ರತವಳಿದಾಶ್ವಾರೂಢನೆ ll 7 ll
ಮಾನಸ ಪೂಜೆಯ ನೀ ದಯದಿ ಇತ್ತು
ಶ್ರೀನಾಥ ಕಳೆ ಭವವ್ಯಾಧಿ ಕಾಯೋ
ಅನಾಥ ಬಂಧು ಸುಮೋದಿ ಚತುರಾ
ನನಪಿತ ಕೃಪಾಂಬುಧಿ ಆಹ
ತಾನೊಬ್ಬರನರಿಯೆ ದಾನ ವಿಲೋಲನೆ
ಏನು ಮಾಡುವ ಸಾಧನ ನಿನ್ನದೊ ಹರಿ ll 8 ll
ನಿನ್ನ ಸಂಕಲ್ಪವಲ್ಲದೆ ಇನ್ನು
ಅನ್ಯಥಾವಾಗಬಲ್ಲುದೆ ಹೀಂಗೆ
ಚೆನ್ನಾಗಿ ನಾ ತಿಳಿಯದೆ ಮಂದ
ಮಾನವನಾಗಿ ಬಾಳಿದೆ ಆಹ
ಎನ್ನಪರಾಧವ ಇನ್ನು ನೀ ನೋಡದೆ
ಮನ್ನಿಸಿ ಕಾಯೋ ಜಗನ್ನಾಥವಿಟ್ಠಲ ll 9 ll
***
ರಾಗ - ಶಂಕರಾಭರಣ ( ಭೀಮ್ ಪಲಾಸ್) ಅಟತಾಳ ( ತೀನ್ ತಾಲ್)
ಪಾಲಿಸೋ ನರಸಿಂಹ ಪಾಲಿಸೊ ||ಪ||
ಪಾಲಿಸೊ ಪರಮಪಾವನ ಕಮ-
ಲಾಲಯ ನಂಬಿದೆ ನಿನ್ನ ಆಹಾ
ಬಾಲೇಂದುಕೋಟಿಯ ಸೋಲಿಪ ನಖತೇಜ
ಮೂರ್ಲೋಕದರಸನೆ ಪಾಲಿಸು ಬಿಡದಲೆ ||ಅ.ಪ||
ಹಿಂದೆ ಪ್ರಹ್ಲಾದನ ಮೊರೆಯ ಕೇಳಿ
ಬಂದು ಕಾಯ್ದೆಯೊ ಭಕ್ತಪ್ರಿಯಸಖ
ಸಂದೋಹ ಮೂರುತಿ ಆಯತಾಕ್ಷ
ಎಂದೆಂದು ಬಿಡದಿರು ಕೈಯ ಆಹಾ
ವೃಂದಾರಕೇಂದ್ರಗಳ ಬಂದ ದುರಿತಗಳ
ಹಿಂದೆ ಮಾಡಿ ಕಾಯ್ದ ಇಂದಿರಾರಮಣನೆ ||೧||
ಹರಣದಲ್ಲಿ ನಿನ್ನ ರೂಪ ತೋರಿ
ಪರಿಹರಿಸೊ ಎನ್ನ ತಾಪ, ದೂರ
ಇರದಿರೊ ಹರಿ ಸಪ್ತದ್ವೀಪಾಧಿಪ
ಸಿರಿಪತಿ ಭಕ್ತ ಸಲ್ಲಾಪ ಆಹಾ
ಕರಣಶುದ್ಧನ ಮಾಡಿ ಕರೆಯೊ ನಿನ್ನ ಬಳಿಗೆ
ನರಕಂಠೀರವ ನಿನ್ನ ಚರಣ ಆಶ್ರಯಿಸಿದೆ ||೨||
ಶರಣಪಾಲಕನೆಂಬೊ ಬಿರುದು ಕೇಳಿ
ತ್ವರಿತದಿ ಬಂದೆನೊ ಅರಿದು ಇನ್ನು
ಪರಿಪರಿ ಆರಾಧ ಮರೆದು , ಪರ -
ತರನೆ ನೋಡೆನ್ನ ಕಣ್ ತೆರೆದು ಆಹಾ
ಮರಣ-ಜನನಗಳ ತರಿದು ಬಿಸುಟು ನಿನ್ನ
ಶರಣರ ಸಂಗದಲ್ಲಿರಿಸಿ ಉದ್ಧರಿಸೆನ್ನ ||೩||
ಸಂಸಾರಸಾಗರದೊಳಗೆ ಎನ್ನ
ಹಿಂಸೆಗೊಳಿಸುವರೆ ಹೀಗೆ ಎಲೊ
ಕಂಸಾರಿ ಬಾಗೆ ಅನ್ಯರಿಗೆ ಮತ್ತೆ
ಸಂಶಯವಿಲ್ಲೀ ಮಾತಿಗೆ ಆಹಾ
ಹಂಸಡಿಬಿಕರನ್ನು ಧ್ವಂಸ ಮಾಡಿದ ಶೌರಿ
ಶಿಂಶುಮಾರಮೂರ್ತಿ ದಿವಸದಿವಸದಲ್ಲಿ ||೪||
ಸಿರಿಬೊಮ್ಮ ಭವಶಕ್ರಸುರರ ಕೈಯ
ನಿರುತ ಸ್ತುತಿಸಿಕೊಂಬ ಧೀರ ಶುಭ-
ಪರಿಪೂರ್ಣ ಗುಣ ಪಾರಾವಾರ ಪೊರೆ-
ವರ ಕಾಣೆನಂತ ಸುಂದರ ಆಹಾ
ಸ್ಮರನ ಕಾಂತಿಯ ನಿರಾಕರಿಸುವ ತೇಜನೆ
ಎರವು ಮಾಡದೆ ಹೃತ್ಸರಸಿಜದೊಳು ತೋರಿ ||೫||
ಮೊದಲು ಮತ್ಸ್ಯಾವತಾರದಿ ವೇದ
ವಿಧಿಗೆ ತಂದಿತ್ತೆ ವಿನೋದಿ ಆ Sಅ-
ರಧಿಯೊಳು ಸುರರಿಗೋಸ್ಕರ ನೀನು
ಸುಧೆಯ ಸಾಧಿಸಿ ಉಣಿಸಿ ದಿ ಆಹಾ
ಅದ್ಭುತ ಭೂಮಿಯ ತೆಗೆದೊಯ್ದನ ಕೊಂದು
ಮುದದಿ ಹಿರಣ್ಯಕನುದರ ಬಗೆದ ಧೀರ ||೬||
ಬಲಿಯ ಮನೆಗೆ ಪೋಗಿ ದಾನ ಬೇಡಿ
ತುಳಿದೆ ಪಾತಾಳಕ್ಕೆ ಅವನ ಪೆತ್ತ -
ವಳ ಶಿರತರಿದ ಪ್ರವೀಣ ನಿನ್ನ
ಚಲಕೆಣೆಗಾಣೆ ರಾವಣ ನ ಆಹಾ
ತಲೆಯನಿಳುಹಿ ಯದುಕುಲದಿ ಜನಿಸಿ ಮತ್ತೆ
ಲಲನೇರ ಪತಿವ್ರತವಳಿದ ಅಶ್ವಾರೂಢ ||೭||
ಮಾನಸಪೂಜೆಯ ದಯದಿ ಇತ್ತ್ಯು
ಶ್ರೀನಾಥ ಕಳೆ ಭವವ್ಯಾಧಿ, ಕಾಯೊ
ಅನಾಥ ಬಂಧು ಸುಮೋದಿ ಚತು-
ರಾನನಪಿತ ಕೃಪಾಂಬೋಧಿ ಆಹಾ
ನಾನೊಬ್ಬರನರಿಯೆ ಗಾನವಿನೋದಿಯೆ
ಏನೇನು ಮಾಡುವ ಸಾಧನ ನಿನ್ನದು ||೮||
ನಿನ್ನ ಸಂಕಲ್ಪವಲ್ಲದೆ ಇನ್ನು
ಅನ್ಯಥಾ ಆಗಬಲ್ಲುದೆ ಇದು
ಚೆನ್ನಾಗಿ ನಾ ತಿಳಿಯದೆ ಮಂದ
ಮಾನವನಾಗಿ ಬಾಳಿದೆ ಆಹಾ
ಎನ್ನಪರಾಧವ ಇನ್ನು ನೀ ನೋಡದೆ
ಮನ್ನಿಸು ದಯದಿ ಜಗನ್ನಾಥ ವಿಠಲ ||೯||
***
ಪಾಲಿಸೋ ನರಸಿಂಹ ಪಾಲಿಸೊ ||ಪ||
ಪಾಲಿಸೊ ಪರಮಪಾವನ ಕಮ-
ಲಾಲಯ ನಂಬಿದೆ ನಿನ್ನ ಆಹಾ
ಬಾಲೇಂದುಕೋಟಿಯ ಸೋಲಿಪ ನಖತೇಜ
ಮೂರ್ಲೋಕದರಸನೆ ಪಾಲಿಸು ಬಿಡದಲೆ ||ಅ.ಪ||
ಹಿಂದೆ ಪ್ರಹ್ಲಾದನ ಮೊರೆಯ ಕೇಳಿ
ಬಂದು ಕಾಯ್ದೆಯೊ ಭಕ್ತಪ್ರಿಯಸಖ
ಸಂದೋಹ ಮೂರುತಿ ಆಯತಾಕ್ಷ
ಎಂದೆಂದು ಬಿಡದಿರು ಕೈಯ ಆಹಾ
ವೃಂದಾರಕೇಂದ್ರಗಳ ಬಂದ ದುರಿತಗಳ
ಹಿಂದೆ ಮಾಡಿ ಕಾಯ್ದ ಇಂದಿರಾರಮಣನೆ ||೧||
ಹರಣದಲ್ಲಿ ನಿನ್ನ ರೂಪ ತೋರಿ
ಪರಿಹರಿಸೊ ಎನ್ನ ತಾಪ, ದೂರ
ಇರದಿರೊ ಹರಿ ಸಪ್ತದ್ವೀಪಾಧಿಪ
ಸಿರಿಪತಿ ಭಕ್ತ ಸಲ್ಲಾಪ ಆಹಾ
ಕರಣಶುದ್ಧನ ಮಾಡಿ ಕರೆಯೊ ನಿನ್ನ ಬಳಿಗೆ
ನರಕಂಠೀರವ ನಿನ್ನ ಚರಣ ಆಶ್ರಯಿಸಿದೆ ||೨||
ಶರಣಪಾಲಕನೆಂಬೊ ಬಿರುದು ಕೇಳಿ
ತ್ವರಿತದಿ ಬಂದೆನೊ ಅರಿದು ಇನ್ನು
ಪರಿಪರಿ ಆರಾಧ ಮರೆದು , ಪರ -
ತರನೆ ನೋಡೆನ್ನ ಕಣ್ ತೆರೆದು ಆಹಾ
ಮರಣ-ಜನನಗಳ ತರಿದು ಬಿಸುಟು ನಿನ್ನ
ಶರಣರ ಸಂಗದಲ್ಲಿರಿಸಿ ಉದ್ಧರಿಸೆನ್ನ ||೩||
ಸಂಸಾರಸಾಗರದೊಳಗೆ ಎನ್ನ
ಹಿಂಸೆಗೊಳಿಸುವರೆ ಹೀಗೆ ಎಲೊ
ಕಂಸಾರಿ ಬಾಗೆ ಅನ್ಯರಿಗೆ ಮತ್ತೆ
ಸಂಶಯವಿಲ್ಲೀ ಮಾತಿಗೆ ಆಹಾ
ಹಂಸಡಿಬಿಕರನ್ನು ಧ್ವಂಸ ಮಾಡಿದ ಶೌರಿ
ಶಿಂಶುಮಾರಮೂರ್ತಿ ದಿವಸದಿವಸದಲ್ಲಿ ||೪||
ಸಿರಿಬೊಮ್ಮ ಭವಶಕ್ರಸುರರ ಕೈಯ
ನಿರುತ ಸ್ತುತಿಸಿಕೊಂಬ ಧೀರ ಶುಭ-
ಪರಿಪೂರ್ಣ ಗುಣ ಪಾರಾವಾರ ಪೊರೆ-
ವರ ಕಾಣೆನಂತ ಸುಂದರ ಆಹಾ
ಸ್ಮರನ ಕಾಂತಿಯ ನಿರಾಕರಿಸುವ ತೇಜನೆ
ಎರವು ಮಾಡದೆ ಹೃತ್ಸರಸಿಜದೊಳು ತೋರಿ ||೫||
ಮೊದಲು ಮತ್ಸ್ಯಾವತಾರದಿ ವೇದ
ವಿಧಿಗೆ ತಂದಿತ್ತೆ ವಿನೋದಿ ಆ Sಅ-
ರಧಿಯೊಳು ಸುರರಿಗೋಸ್ಕರ ನೀನು
ಸುಧೆಯ ಸಾಧಿಸಿ ಉಣಿಸಿ ದಿ ಆಹಾ
ಅದ್ಭುತ ಭೂಮಿಯ ತೆಗೆದೊಯ್ದನ ಕೊಂದು
ಮುದದಿ ಹಿರಣ್ಯಕನುದರ ಬಗೆದ ಧೀರ ||೬||
ಬಲಿಯ ಮನೆಗೆ ಪೋಗಿ ದಾನ ಬೇಡಿ
ತುಳಿದೆ ಪಾತಾಳಕ್ಕೆ ಅವನ ಪೆತ್ತ -
ವಳ ಶಿರತರಿದ ಪ್ರವೀಣ ನಿನ್ನ
ಚಲಕೆಣೆಗಾಣೆ ರಾವಣ ನ ಆಹಾ
ತಲೆಯನಿಳುಹಿ ಯದುಕುಲದಿ ಜನಿಸಿ ಮತ್ತೆ
ಲಲನೇರ ಪತಿವ್ರತವಳಿದ ಅಶ್ವಾರೂಢ ||೭||
ಮಾನಸಪೂಜೆಯ ದಯದಿ ಇತ್ತ್ಯು
ಶ್ರೀನಾಥ ಕಳೆ ಭವವ್ಯಾಧಿ, ಕಾಯೊ
ಅನಾಥ ಬಂಧು ಸುಮೋದಿ ಚತು-
ರಾನನಪಿತ ಕೃಪಾಂಬೋಧಿ ಆಹಾ
ನಾನೊಬ್ಬರನರಿಯೆ ಗಾನವಿನೋದಿಯೆ
ಏನೇನು ಮಾಡುವ ಸಾಧನ ನಿನ್ನದು ||೮||
ನಿನ್ನ ಸಂಕಲ್ಪವಲ್ಲದೆ ಇನ್ನು
ಅನ್ಯಥಾ ಆಗಬಲ್ಲುದೆ ಇದು
ಚೆನ್ನಾಗಿ ನಾ ತಿಳಿಯದೆ ಮಂದ
ಮಾನವನಾಗಿ ಬಾಳಿದೆ ಆಹಾ
ಎನ್ನಪರಾಧವ ಇನ್ನು ನೀ ನೋಡದೆ
ಮನ್ನಿಸು ದಯದಿ ಜಗನ್ನಾಥ ವಿಠಲ ||೯||
***
pallavi
pAlisO narasimhA pAlisO
anupallavi
pAlisO parama pAvana kamalAlaya nambide ninna AhA bAlEndu kOTiya sOlippa nakha tEja mUrlOkadarasane pAlisu biDadale
caraNam 1
hinde prahlAdana moreya kELi bandu kAideyO bhakta priya sakha
sandOha mUruti kAyatAksha endendu biDadiru kaiya AhA
vrandAra kEnrara banda duritagaLa hinde mADi kAida indirArAmaNane
caraNam 2
haraNadalii ninna rUpa tOri pariharisO enna tApa dUra iradirO hari
sapta dvIpAdhipa siripati bhakta sallApa AhA karaNa shuddhana mADi
kareyO ninna baLige narakaNThIrava ninna caraNa Ashrayiside
caraNam 3
sharaNa pAlakanembO birudu kELi tvaritadi bandenO aridu innu
paripari aparAda maredu paratarane nODenna kaN teredu AhA
maraNajananagaLa taridu bisuTu ninna sharaNara sangadallirisi uddarisanna
caraNam 4
samsAra sAgadoLage enna himsgoLisuvare hIge elO kansAribAge
anyarige matte samshayavillI mahatige AhA hamsaDibikarennu
dhvamsa mADida shauri shimshumAra mUrti divasa divasadalli
caraNam 5
siri bomma bhava shakra surara kaiy niruta stutisikomba dhIra
shubha paripUrNa guNa pArAvAra porevara kANenanta sundara AhA
smaraNakAntiya nirAkarisuva tEjane eravu mADade hrtsarasijadoLu tOri
caraNam 6
modalu matyAvatAradi vEda vidhige tanditte vinOdi A sharadhiyoLu
suararigOskaradi nInu sudheya sAdhisi uNisidi AhA adbhuta bhUmiya
tegedoidana kondu mudadi hiraNyakanudara bageda dhIra
caraNam 7
baliya manege pOgi dAnabEDi kuLide pAtALakke avana pettavaLa
shiratarida pravINa ninna chalakeNegANe rAvaNana AhA
taleya niruhi yadukuladi janisi matta lalanEra pativrata oLida ashvArUDha
caraNam 8
mAnasa pUjeya daydi ittu shrInAtha kaLe bhava vyAdhi kAyO
anAtha bandhu sumOdi caturAnana pita krpAmbOdhi AhaA
nAnobbara hariyE gAna vinOdiyE EnEnu mADuva sAdhana ninnadu
caraNam 9
ninna sankalpavalladE innu anyathA AgaballadE idu
cennAgi nA tiLiyadE mandamAnavAgi bALidE AhA
ennaparAdhava innu nI nODade mannisu dayadi jagannAtha viThala
***